ರಾಜ್ಯಸಭೆಗೆ ಮಾಜಿ ಪ್ರಧಾನಿ ದೇವೇಗೌಡ, ಖರ್ಗೆ ಸೇರಿ ನಾಲ್ವರು ಅವಿರೋಧ ಆಯ್ಕೆ

 ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ನಾಲ್ವರು ಅಭ್ಯರ್ಥಿಗಳನ್ನು ಶುಕ್ರವಾರ ಕರ್ನಾಟಕದಿಂದ ಮೇಲ್ಮನೆಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Last Updated : Jun 13, 2020, 12:27 AM IST
ರಾಜ್ಯಸಭೆಗೆ ಮಾಜಿ ಪ್ರಧಾನಿ ದೇವೇಗೌಡ, ಖರ್ಗೆ ಸೇರಿ ನಾಲ್ವರು ಅವಿರೋಧ ಆಯ್ಕೆ  title=

ನವದೆಹಲಿ:  ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ನಾಲ್ವರು ಅಭ್ಯರ್ಥಿಗಳನ್ನು ಶುಕ್ರವಾರ ಕರ್ನಾಟಕದಿಂದ ಮೇಲ್ಮನೆಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಹೊಸದಾಗಿ ಆಯ್ಕೆಯಾದ ಸಂಸದರಲ್ಲಿ ಮಾಜಿ ಪ್ರಧಾನಿ ಮತ್ತು ಜನತಾದಳ (ಜಾತ್ಯತೀತ) ಮುಖ್ಯಸ್ಥ ಎಚ್ ಡಿ ದೇವೇಗೌಡ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಮತ್ತು ಆಡಳಿತಾರೂಢ ಬಿಜೆಪಿ ನಾಮನಿರ್ದೇಶಿತರಾದ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಸೇರಿದ್ದಾರೆ.ನಾಮನಿರ್ದೇಶನಗಳ ಸಂಖ್ಯೆ ರಾಜ್ಯದಿಂದ ಖಾಲಿ ಇರುವ ಹುದ್ದೆಗಳನ್ನು ಮೀರದ ಕಾರಣ ರಿಟರ್ನಿಂಗ್ ಅಧಿಕಾರಿ ಎಂ ಎಸ್ ವಿಶಾಲಾಕ್ಷಿ ಇಸಿ ನಿಗದಿಪಡಿಸಿದ ಮತದಾನ ದಿನಕ್ಕೆ ಒಂದು ವಾರ ಮುಂಚಿತವಾಗಿ ಫಲಿತಾಂಶವನ್ನು ಪ್ರಕಟಿಸಿದರು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಗೆ ಶಕ್ತಿ ತುಂಬಲು ಮಲ್ಲಿಕಾರ್ಜುನ್ ಖರ್ಗೆ ಕಣಕ್ಕೆ

ಎಚ್ ಡಿ ದೇವೇಗೌಡ ಮತ್ತು ಖರ್ಗೆ ಇಬ್ಬರೂ ಕ್ರಮವಾಗಿ ತುಮಕೂರು ಮತ್ತು ಗುಲ್ಬರ್ಗಾ ಸ್ಥಾನಗಳಿಂದ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಎದುರಿಸಿದ್ದರು.ದೇವೇಗೌಡರಿಗೆ ಮೇಲ್ಮನೆಗೆ ಇದು ಎರಡನೇ ಪ್ರವೇಶವಾಗಿದೆ, ಈ ಹಿಂದೆ 1996 ರಲ್ಲಿ ಪ್ರಧಾನಿಯಾದಾಗ ಅವರು ರಾಜ್ಯಸಭೆಗೆ ಪ್ರವೇಶಿಸಿದ್ದರು. ಇನ್ನು 77 ವರ್ಷ ವಯಸ್ಸಿನ ಖಾರ್ಗೆ, ಕಳೆದ ವರ್ಷ ತಮ್ಮ ಮೊದಲ ಚುನಾವಣಾ ಸೋಲನ್ನು ಎದುರಿಸಿದ್ದರು.

ಏತನ್ಮಧ್ಯೆ, ಬೆಳಗಾವಿಯ ಪ್ರಬಲ ಲಿಂಗಾಯತ ಸಮುದಾಯದ ಸದಸ್ಯರಾದ ಈರಣ್ಣ  ಕಡಾಡಿ (54) ಮತ್ತು  ಹಿಂದುಳಿದ ವರ್ಗದ ನಾಯಕ ಅಶೋಕ್ ಗಸ್ತಿ (55) ಅವರು ಮೂರು ದಶಕಗಳಿಂದ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದ ಮಾಜಿ ಎಬಿವಿಪಿ ಕಾರ್ಯಕರ್ತರು,. ಅವರ ತಳಮಟ್ಟದ ಅನುಭವದ ಕಾರಣ ಅವರ ಹೆಸರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಶಿಫಾರಸು ಮಾಡಿದ್ದಾರೆ ಎಂದು ಪರಿಗಣಿಸಲಾಗಿದೆ.

ರಾಜೀವ್ ಗೌಡ, ಬಿ ಕೆ ಹರಿಪ್ರಸಾದ್ (ಇಬ್ಬರೂ ಕಾಂಗ್ರೆಸ್ ನಿಂದ), ಪ್ರಭಾಕರ್ ಕೋರೆ (ಬಿಜೆಪಿ), ಮತ್ತು ಡಿ ಕುಪೇಂದ್ರ ರೆಡ್ಡಿ (ಜೆಡಿಎಸ್) ಅವರ ರಾಜ್ಯಸಭಾ ಅವಧಿ ಜೂನ್ 25 ಕ್ಕೆ ಕೊನೆಗೊಳ್ಳಲಿದೆ .

Trending News