ಸಿಎ ದಯಾನಂದ್‌ ಬೊಂಗಾಳೆಯವರ ಸಾಧನೆಗೆ ಜೀ ನ್ಯೂಸ್‌ ʼಯುವರತ್ನ ಪ್ರಶಸ್ತಿʼ ಗೌರವ..!

Zee Kannada News Yuvaratna Awards : ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಡಾ, ಖಾಸಗಿ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮತ್ತು ಯುವಜನಕ್ಕೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಜೀ ಕನ್ನಡ ನ್ಯೂಸ್‌ ಮಾಡುತ್ತಿದೆ. ಅದರಂತೆ 2023-24 ರ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಒಟ್ಟು 35 ಜನ ಯುವ ಸಾಧಕರನ್ನು ಗುರುತಿಸಿ, ಅವರಿಗೆ ಸನ್ಮಾನ ಮಾಡಿ ಗೌರವಿಸಿ "ಯುವರತ್ನ ಪ್ರಶಸ್ತಿ" ಪ್ರದಾನ ಮಾಡಲಾಯಿತು. 
 

1 /5

ತಳಮಟ್ಟದಿಂದ ಬೆಳೆದು ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಕಾ, ಕೈಗಾರಿಕಾ, ಖಾಸಗೀ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರ್ತಿಸುವ ಕಾರ್ಯಕ್ರಮವೇ ʼಯುವರತ್ನʼ.   

2 /5

ಈ ಪೈಕಿ ಹೆಡ್ಜಿಂಗ್‌ ಸ್ಟಾರ್‌ ಸಿಎ ದಯಾನಂದ್‌ ಬೊಂಗಾಳೆ ಹೂಡಿಕೆದಾರರು, ವರ್ತಕರು, ತರಬೇತುದಾರರಾಗಿದ್ದಾರೆ. ಶೇರು ಮಾರುಕಟ್ಟೆಯ ಟ್ರೈನರ್‌ ಹಾಗೂ ರಿಸೋರ್ಸ್‌ ಪರ್ಸನ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರ ಅದ್ಭುತ ಸಾಧನೆಯನ್ನು ಗುರುತಿಸಿ ಜೀ ಕನ್ನಡ ನ್ಯೂಸ್‌ ಇವರಿಗೆ ಯುವರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು.  

3 /5

 ಮೂಲತಃ ದಾವಣಗೆರೆ ಜಿಲ್ಲೆಯವರಾದ ಸಿಎ ದಯಾನಂದ್‌ ಬೊಂಗಾಳೆಯವರು 13 ವರ್ಷ ಯಶಸ್ವಿ ಚಾರ್ಟ್ರಡ್‌  ಅಕೌಂಟಂಟ್‌ ಆಗಿ ಸೇವೆ ಸಲ್ಲಿಸಿ ಇದೀಗ ಶೇರು ಮಾರುಕ್ಕಟ್ಟೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ಶೇರು ಮಾರುಕಟ್ಟೆಯ ಅರಿವು ಮೂಡಿಸಿವ ನಿಟ್ಟಿನಲ್ಲಿ ಯುವ ಜನತೆಗೆ ಟ್ರೈನರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.    

4 /5

ಅಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ಶೇರು ಮಾರುಕಟ್ಟೆಯ ಬಗ್ಗೆ ತಿಳಿವಳಿಕೆ ಮೂಡಿಸವಲ್ಲಿ ರಿಸೋರ್ಸ್‌ ಪರ್ಸನ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇವರ ಮಾರ್ಗದರ್ಶನಲ್ಲಿ ಇನ್ವೆಸ್ಟ್‌ ಮಾಡಿದವರು ಶೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದಾರೆ.   

5 /5

 ಪ್ರಸ್ತುತ ಶೇರು ಮಾರುಕಟ್ಟೆಯ ಟ್ರೈನರ್‌ ಹಾಗೂ ರಿಸೋರ್ಸ್‌ ಪರ್ಸನ್‌ ಆಗಿಯೂ ಸೇವೆ ಸಲ್ಲಿಸುತ್ತಿರುವ ಸಿಎ ದಯಾನಂದ್‌ ಬೊಂಗಾಳೆ ಶೇರುಮರುಕಟ್ಟೆಯ ದಾರಿದೀಪವಾಗಿದ್ದಾರೆ.. ಸಿಎ ದಯಾನಂದ್‌ ಬೊಂಗಾಳೆಯವರಿಗೆ ಯುವರತ್ನ ಪ್ರಶಸ್ತಿ ನೀಡಲು ಝೀ ಕನ್ನಡ ನ್ಯೂಸ್‌ ಹೆಮ್ಮೆ ಪಡುತ್ತದೆ.