ನಟ ನಾಗಾರ್ಜುನ ವಿರುದ್ಧ ಕೇಸ್ ದಾಖಲು..! ಶಾಕ್‌ನಲ್ಲಿ ಫೀಲಿಂ ಇಂಡಸ್ಟ್ರಿ?

Case against nagarjuna: ನಟ ನಾಗಾರ್ಜುನ ಅವರ ಕುಟುಂಬ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಹೀಗಿರುವಾಗಲೇ ನಟ ಹಾಗೂ ನಾಯಕ ನಾಗಾರ್ಜುನ ಅವರ ಮೇಲೆ ಕೇಸ್‌ ದಾಖಲಾಗಿದ್ದು, ವಿಚಾರ ಕೇಳಿ ಇಡೀ ಫಿಲಿಂ ಇಂಡಸ್ಟ್ರಿ ಬೆಚ್ಚಿಬಿದ್ದಿದೆ. 
 

1 /8

Case against nagarjuna: ನಟ ನಾಗಾರ್ಜುನ ಅವರ ಕುಟುಂಬ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಹೀಗಿರುವಾಗಲೇ ನಟ ಹಾಗೂ ನಾಯಕ ನಾಗಾರ್ಜುನ ಅವರ ಮೇಲೆ ಕೇಸ್‌ ದಾಖಲಾಗಿದ್ದು, ವಿಚಾರ ಕೇಳಿ ಇಡೀ ಫಿಲಿಂ ಇಂಡಸ್ಟ್ರಿ ಬೆಚ್ಚಿಬಿದ್ದಿದೆ.   

2 /8

ಇತ್ತೀಚೆಗೆ ಸಮಂತಾ ಹಾಗೂ ನಾಗಚೈತನ್ಯ ಅವರ ವಿಚ್ಛೇಧನಕ್ಕೆ ಈ ಸಚಿವನೆ ಕಾರಣ ಹಾಗೂ ನಟ ನಾಗಾರ್ಜುನ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ನಟ ನಾಗಾರ್ಜುನ ತಮ್ಮ ಸೊಸೆಯಾದ ಸಮಂತಾರನ್ನು ಈ ಶಾಸಕನ ಬಳಿಗೆ ಕಳುಹಿಸಿದ್ದರು ಎಂದು ಸಚಿವೆ ಸುರೇಖಾ ಹೇಳಿಕೊಂಡಿದ್ದರು.  

3 /8

ಸಚಿವೆ ನೀಡಿದ ಈ ಹೇಳಿಕೆಯ ನಂತರ ಇಡೀ ಟಾಲಿವುಡ್‌ ಗಣವೇ ಸಚಿವೆಯ ಹೇಳಿಕೆಗೆ ವಿರುದ್ಧವಾಗಿ ನಿಂತು ಆಕೆಯ ಮೇಲೆ ಕಿಡಿಕಾರಿತ್ತು.  

4 /8

ಈಕೆ ನೀಡಿದ ಈ ಹೇಳಿಕೆಯ ಕಾರಣ ನಾಯಕ ನಾಗಾರ್ಜುನ ಆಕೆಯ ಮೇಲೆ ಮಾನ ನಷ್ಟ ಮೊಕದ್ದಮೆಯನ್ನು ಹೂಡಿದ್ದರು, ಇದರ ಬೆನ್ನಲ್ಲೆ ನಟನಿಗೆ ಶಾಕ್‌ ಸಿಕ್ಕಿದೆ.   

5 /8

ನಾಯಕ ಅಕ್ಕಿನೇನಿ ನಾಗಾರ್ಜುನ ವಿರುದ್ಧ ಅಧ್ಯಕ್ಷ ಕಾಸಿರೆಡ್ಡಿ ಭಾಸ್ಕರ ರೆಡ್ಡಿ ಮಾದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ನಾಗಾರ್ಜುನ ಅವರು ತುಮ್ಮಿಡಿಕುಂಟಾ ಕೆರೆಯನ್ನು ಒತ್ತುವರಿ ಮಾಡಿ ಎನ್-ಕನ್ವೆನ್ಷನ್ ನಿರ್ಮಿಸಿದ್ದಾರೆ,ಎಂದು ಇವರು ನಟನ ವಿರುದ್ಧ ಕ್ರಿಮಿನಲ್ ಕೇಸ್‌ ಅನ್ನು ದಾಖಲು ಮಾಡುವಂತೆ ಕೋರಿದ್ದಾರೆ.   

6 /8

ಭಾಸ್ಕರ ರೆಡ್ಡಿ ಅವರ ದೂರನ್ನು ಸ್ವೀಕರಿಸಿದ ಮಾದಾಪುರ ಪೊಲೀಸರು ಕಾನೂನಿನ ಅಭಿಪ್ರಾಯವನ್ನು ಕೋರಿ ನ್ಯಾಯಾಲಯಕ್ಕೆ ಈ ವಿಚಾರವನ್ನು ರವಾನಿಸಿದ್ದಾರೆ. ನಾಗಾರ್ಜುನ ಕೊಳವನ್ನು ಒತ್ತುವರಿ ಮಾಡಿ ಪರಿಸರ ನಾಶ ಮಾಡಿದ್ದಾರೆ ಹಾಗೂ ಕಾನೂನು ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.   

7 /8

ಸದ್ಯ ಸಚಿವೆ ಸುರೇಖಾ ವಿರುದ್ಧ ನಾಂಪಲ್ಲಿ ನ್ಯಾಯಾಲಯದಲ್ಲಿ ನಟ ನಾಗಾರ್ಜುನ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದು, ನ್ಯಾಯಾಧೀಶರು ರಜೆಯಲ್ಲಿರುವ ಕಾರಣ ವಿಚಾರನೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.   

8 /8

ಸದ್ಯ ಒಂದಾದ ಮೇಲೊಂದು ವಿವಾಧಕ್ಕೆ ನಟ ನಾಗಾರ್ಜುನ ಸಿಲುಕಿಕೊಂಡಿದ್ದು, ನಟನ ವಿರುದ್ಧ ದಾಕಲಾಗಿರುವ ದೂರಿನ ಕುರಿತ ವಿಚಾರ ತಿಳಿಯುತ್ತಿದ್ದಂತೆ ಇಂಡಸ್ಟ್ರಿ ಬೆಚ್ಚಿಬಿದ್ದಿದೆ..