ಯಾರಿಗೂ ತಿಳಿಯದಂತೆ ದೇವಸ್ಥಾನದಲ್ಲಿ ಈ ವಸ್ತುಗಳನ್ನಿಟ್ಟರೆ ಪ್ರಾಪ್ತಿಯಾಗುತ್ತದೆ ಯಶಸ್ಸು..!

ಸಮಸ್ಯೆಗಳಿಂದ ಮುಕ್ತಿ ಹೊಂದಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ರೀತಿಯ ಪರಿಹಾರಗಳನ್ನು ಹೇಳಲಾಗಿದೆ. 

ಬೆಂಗಳೂರು : ಅನೇಕ ಜನರು ಎಷ್ಟೇ ಪ್ರಯತ್ನ ಪಟ್ಟರೂ ತಮ್ಮ ಶ್ರಮಕ್ಕೆ ತಕ್ಕಂತೆ ಫಲವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಅಥವಾ ಶ್ರಮಕ್ಕೆ ತಕ್ಕ ಮನ್ನಣೆ ಸಿಗುವುದಿಲ್ಲ. ಇಂಥಹ ಸಮಸ್ಯೆಗಳಿಂದ ಮುಕ್ತಿ ಹೊಂದಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ರೀತಿಯ ಪರಿಹಾರಗಳನ್ನು ಹೇಳಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹತ್ತಿ : ನೀವು ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯಬೇಕಾದರ ದೇವರ ಕೋಣೆಯಲ್ಲಿ ಅಕ್ಕಿಯೊಂದಿಗೆ ಹತ್ತಿಯನ್ನು ಇರಿಸಿ. ಇದರೊಂದಿಗೆ, ಕೆಲವು ಸಕ್ಕರೆ ಮತ್ತು ಧಾನ್ಯಗಳನ್ನು  ದೇವರ ಮನೆಯಲ್ಲಿ ಇರಿಸಿ.   ಹೀಗೆ ಮಾಡಿದರೆ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎನ್ನಲಾಗುತ್ತದೆ.   

2 /5

ಅಕ್ಕಿ ತುಂಬಿದ ಕಲಶ : ಕಲಶದ  ನೀರಿ ಬಹಳ ಚಮತ್ಕಾರಗಳನ್ನು ಮಾಡುತ್ತದೆ ಎನ್ನಲಾಗುತ್ತದೆ. ಚಿಕ್ಕದಾದ ತಾಮ್ರದ ಕಲಶವನ್ನು ತೆಗೆದುಕೊಂಡು ಅದನ್ನು ಅಕ್ಕಿಯಿಂದ ತುಂಬಿಸಿ. ಈ ಕಲಶವನ್ನು ಯಾರಿಗೂ ತತಿಳಿಯದಂತೆ ದೇವಸ್ಥಾನದಲ್ಲಿ ಇಟ್ಟು  ಬನ್ನಿ,.

3 /5

ಬೆಳ್ಳಿಯ ತುಂಡು- ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು, ಕೈಯಲ್ಲಿ ಬೆಳ್ಳಿಯ ತುಂಡನ್ನು ತೆಗೆದುಕೊಂಡು ಅದನ್ನು ಹೂವುಗಳು ಮತ್ತು ಅಕ್ಕಿಯ ನಡುವೆ ಮರೆಮಾಡಿ ದೇವಸ್ಥಾನದಲ್ಲಿ ಇರಿಸಿ. ದೇವಸ್ಥಾನದಲ್ಲಿ ಇಡಲು ಸಾಧ್ಯವಾಗದಿದ್ದರೆ ಮನೆಯ ದೇವರ ಮನೆಯಲ್ಲಾದರೂ ಇಡಬಹುದು. 

4 /5

ಅಡಿಕೆ -ಮಲಗಿರುವ ಅದೃಷ್ಟವನ್ನು ಅಡಿಕೆ ಬಡಿದೆಬ್ಬಿಸುತ್ತದೆ.  ಅಡಿಕೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ.  ಅಡಿಕೆಯನ್ನು ಪೂಜೆ ಮತ್ತು ಶುಭ ಕಾರ್ಯಗಳಿಗೆ ಬಳಸಲಾಗುತ್ತದೆ. ಅಕ್ಕಿಯನ್ನು ಕರವಸ್ತ್ರದಲ್ಲಿ ಸುತ್ತಿ ಅದರಲ್ಲಿ ಅಡಿಕೆ ಇಟ್ಟು ಯಾರಿಗೂ ತಿಳಿಸದೆ ದೇವಸ್ಥಾನದಲ್ಲಿ ಇಟ್ಟರೆ ಯಶಸ್ಸು ಸಿಗುತ್ತದೆ.    

5 /5

ಒಂದು ರೂಪಾಯಿ ನಾಣ್ಯ- ಒಂದು ರೂಪಾಯಿ ನಾಣ್ಯವನ್ನು ದೇವಸ್ಥಾನದಲ್ಲಿ ಅರ್ಪಿಸಿದರೆ ಯಾವುದೇ ತೊಂದರೆಯಿಂದ ಮುಕ್ತಿ ಪಡೆಯಬಹುದು. ಇದಕ್ಕಾಗಿ 1 ರೂಪಾಯಿ ನಾಣ್ಯವನ್ನು 1 ಹಿಡಿ ಅಕ್ಕಿಯೊಂದಿಗೆ ತೆಗೆದುಕೊಳ್ಳಿ. ಈಗ ನಿಮ್ಮ ಸಮಸ್ಯೆಗಳನ್ನು ದೇವರ ಮುಂದೆ  ಹೇಳಿಕೊಂಡು ನಾಣ್ಯವನ್ನು ದೇವಾಲಯದಲ್ಲಿ ಇಡಿ.