181 ವರ್ಷಗಳ ಬಳಿಕ ರಕ್ಷಾಬಂಧನದಂದೇ ಅದ್ಭುತ ರಾಜಯೋಗ: ಈ 3 ರಾಶಿಗೆ ಸ್ವರ್ಣಕಾಲ ಶುರು! ಧನಸಂಪತ್ತು, ಕೀರ್ತಿ, ಯಶಸ್ಸು ಸಮೇತ ಸಕಲೈಶ್ವರ್ಯ ಪ್ರಾಪ್ತಿ

Raksha Bandhan 2024 Lucky Zodiac Signs: ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಅಂದಹಾಗೆ ಈ ಬಾರಿಯ ರಕ್ಷಾ ಬಂಧನದಂದು 181 ವರ್ಷಗಳ ನಂತರ ಏಳು ಯೋಗಗಳು ರೂಪುಗೊಳ್ಳುತ್ತಿವೆ. ಇನ್ನು ಈ ಯೋಗಗಳಿಂದಾಗಿ ಈ ಅವಧಿಯಲ್ಲಿ ಮಾಡುವ ಎಲ್ಲಾ ಶುಭ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಅಂದಹಾಗೆ ಈ ಬಾರಿಯ ರಕ್ಷಾ ಬಂಧನದಂದು 181 ವರ್ಷಗಳ ನಂತರ ಏಳು ಯೋಗಗಳು ರೂಪುಗೊಳ್ಳುತ್ತಿವೆ. ಇನ್ನು ಈ ಯೋಗಗಳಿಂದಾಗಿ ಈ ಅವಧಿಯಲ್ಲಿ ಮಾಡುವ ಎಲ್ಲಾ ಶುಭ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.  

2 /7

ಈ ಬಾರಿ ರಕ್ಷಾ ಬಂಧನದ ಹಬ್ಬವನ್ನು ಏಳು ಮಂಗಳಕರ ಯೋಗಗಳಲ್ಲಿ ಆಚರಿಸಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ರಕ್ಷಾ ಸೂತ್ರವನ್ನು ಕಟ್ಟಲು ಸೂಕ್ತ ಆಗಸ್ಟ್ 19 ರಂದು ಮಧ್ಯಾಹ್ನ 1:30 ರ ನಂತರ ಶುಭಸಮಯವಿದೆ. ಇನ್ನು ಅಗತ್ಯಬಿದ್ದಲ್ಲಿ ಸಹೋದರಿಯರು ಬೆಳಿಗ್ಗೆ 9.50 ರಿಂದ 10.50 ರ ಸುಮಾರಿಗೆ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟಬಹುದು.  

3 /7

ಇನ್ನು ಈ ಶುಭದಿನದ ಅದೃಷ್ಟಶಾಲಿ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಈ ಮೂರು ರಾಶಿಗಳಿಗೆ 181 ವರ್ಷಗಳ ಬಳಿಕ ಆಗಮಿಸಿರುವ ಸಪ್ತ ಮಂಗಳ ಯೋಗಗಳು ಭಾರೀ ಪ್ರಯೋಜನವನ್ನು ತರಲಿದೆ ಎಂಬುದು ನಂಬಿಕೆ.  

4 /7

ಈ ಬಾರಿಯ ರಕ್ಷಾಬಂಧನ ದಿನವು ಮೇಷ ರಾಶಿಯವರಿಗೆ ಬಹಳ ವಿಶೇಷವಾಗಿರುತ್ತದೆ. ಈ ರಾಶಿಯ ವಿವಾಹಿತರಿಗೆ ಸಂತಾನ ಸುಖ ಸಿಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುವ ಅನೇಕ ಅವಕಾಶಗಳಿವೆ. ಸಹೋದರ ಸಹೋದರಿಯರ ನಡುವಿನ ಬಾಂಧವ್ಯ ಮತ್ತಷ್ಟು ಹಿಗ್ಗಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಈ ರಾಶಿಯವರಿಗೆ ಶನಿದೇವನ ವಿಶೇಷ ಆಶೀರ್ವಾದ ಇರುತ್ತದೆ.  

5 /7

ಧನು ರಾಶಿಯ ಒಂಬತ್ತನೇ ಮನೆಯಲ್ಲಿ ರಾಜಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಈ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ವಿದೇಶಿ ಮೂಲಗಳಿಂದ ಸಾಕಷ್ಟು ಹಣವನ್ನು ಗಳಿಸಬಹುದು. ಈ ಹಬ್ಬವು ಉದ್ಯೋಗಿಗಳಿಗೆ ಬಹಳ ಅದೃಷ್ಟವೆಂದು ಸಾಬೀತುಪಡಿಸಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಆರೋಗ್ಯವೂ ಉತ್ತಮವಾಗಿರುತ್ತದೆ.  

6 /7

ಕುಂಭ ರಾಶಿಯ ಜನರು ಭೌತಿಕ ಸಂತೋಷವನ್ನು ಪಡೆಯುತ್ತಾರೆ. ರಕ್ಷಾಬಂಧನದ ದಿನದಂದು ರೂಪುಗೊಂಡ ರಾಜಯೋಗವು ಈ ರಾಶಿಯ ಜನರ ಜೀವನದಲ್ಲಿರುವ ಸವಾಲನ್ನು ತೊಡೆದುಹಾಕಬಹುದು. ಪ್ರತಿ ಕೆಲಸದಲ್ಲೂ ಯಶಸ್ವಿಯಾಗುತ್ತೀರಿ. ಜೊತೆಗೆ ಅಪಾರ ಯಶಸ್ಸನ್ನು ಪಡೆಯಬಹುದು.  

7 /7

 ಸೂಚನೆ: ಈ ಲೇಖನವು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ನಿಮಗೆ ನೀಡಲಾಗಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ. ಇದು ಸಂಪೂರ್ಣ ಸತ್ಯ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳೂ ಇಲ್ಲ.