ಸೆಪ್ಟೆಂಬರ್ 4 ರಿಂದ 118 ದಿನಗಳ ಕಾಲ ಈ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭ, ಬೃಹಸ್ಪತಿಯ ಕೃಪೆಯಿಂದ ಅಪಾರ ಧನಪ್ರಾಪ್ತಿ!

Venus Retrograde 2023 In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ವಕ್ರ ನಡೆ ಆರಂಭಗೊಳ್ಳಲಿದೆ. ಹೌದು, ಸೆಪ್ಟೆಂಬರ್ 4, 2023 ರಿಂದ ಗುರು ಆರಂಭಿಸಲಿರುವ ಈ ವಕ್ರನಡೆಯಿಂದ ಕೆಲ ರಾಶಿಗಳ ಜಾತಕದವರ ಜೀವನದಲ್ಲಿ ಸುವರ್ಣಕಾಲ ಆರಂಭಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ (Spiritual News In Kannada),
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ತಿಂಗಳು ಎಲ್ಲಾ ನವಗ್ರಹಗಳು ತಮ್ಮ ಸ್ಥಿತಿಯನ್ನು ಬದಲಾಯಿಸುತ್ತವೆ. ಅವುಗಳ ಈ ಸ್ಥಿತಿ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಜನರ ಜೀವನದ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಸಾಮಾನ್ಯವಾಗಿ ದೇವಗುರು ಬೃಹಸ್ಪತಿಯ ನಡೆ ಬದಲಾವಣೆ ಸುಮಾರು 118 ದಿನಗಳ ಬಳಿಕ ನೆರವೇರುತ್ತದೆ (Spiritual News In Kannada). ಸೆಪ್ಟೆಂಬರ್ 4 ರಂದು ಬೃಹಸ್ಪತಿ ಮೇಷ ರಾಶಿಯಲ್ಲಿ ತನ್ನ ವಕ್ರನಡೆಯನ್ನು ಅನುಸರಿಸಲಿದ್ದಾನೆ. ಹೀಗಿರುವಾಗ ಕೆಲ ರಾಶಿಗಳ ಜಜಾತಕದವರಿಗೆ ಇದು ವಿಶೇಷ ಲಾಭವನ್ನು ತಂದುಕೊಡಲಿದೆ. ಮೇಷ ರಾಶಿಯಲ್ಲಿ ಗುರು ವಕ್ರನಾಗುವುದರಿಂದ ಒಂದು ವಿಶಿಷ್ಟ ರಾಜಯೋಗ ನಿರ್ಮಾಣಗೊಳ್ಳಲಿದೆ. ಇದು ಕೆಲ ಅದೃಷ್ಟವಂತ ರಾಶಿಗಳಿಗೆ ಸಮೃದ್ಧಿಯನ್ನು ದಯಪಾಲಿಸುತ್ತದೆ. ಗುರುವಿನ ಈ ವಕ್ರನಡೆ ಡಿಸೆಂಬರ್ 31, 2023ರವರೆಗೆ ಇರಲಿದೆ. ಗುರುವಿನ ಈ ವಕ್ರನಡೆ ಯಾರಿಗೆ ಲಾಭ ನೀಡಲಿದೆ ತಿಳಿದುಕೊಳ್ಳೋನ ಬನ್ನಿ, 

 

ಇದನ್ನೂ ಓದಿ-ಚಂದಿರನ ಅಂಗಳದಲ್ಲಿ ಸಕಲೈಶ್ವರ್ಯದಾತ ದೈತ್ಯಗುರುವಿನ ಸಂಚಾರ, ಚಿನ್ನದಂತೆ ಹೊಳೆಯಲಿದೆ 4 ರಾಶಿಗಳ ಜನರ ಭಾಗ್ಯ!

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 4 ರಿಂದ ಮುಂದಿನ 118 ದಿನಗಳು ಕೆಲ ಅದೃಷ್ಟವಂತ ರಾಶಿಗಳ ಜನರ ಜೀವನದಲ್ಲಿ ಸುವರ್ಣ ಆರಂಭಗೊಳ್ಳಲಿದೆ. ಈ ರಾಶಿಗಳ ಜನರ ಜ್ಞಾನ, ಭಾಗ್ಯ, ಸೌಭಾಗ್ಯದಲ್ಲಿ ವೃದ್ಧಿಯಾಗಲಿದೆ. ಜೀವನದಲ್ಲಿ ಅಪಾರ ಸುಖ ಸಮೃದ್ಧಿ ಹರಿದುಬರಲಿದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ಈ ಜನರಿಗೆ ಅಧಿಕ ಆರ್ಥಿಕ ಲಾಭದ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.   

2 /5

ಮಿಥುನ ರಾಶಿ: ಮೇಷ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಾದೇಯ ಅವಧಿಯು ಮಿಥುನ ರಾಶಿಯ ಜನರಿಗೆ ವಿಶೇಷ ಲಾಭವನ್ನು ತಂದು ಕೊಡಲಿದೆ. 118 ದಿನಗಳ ಕಾಲ ಈ ರಾಶಿಯ ಜನರಿಗೆ ಒಂದು ವಿಶಿಷ್ಟ ರಾಜಯೋಗದ ಆಶೀರ್ವಾದ ಪ್ರಾಪ್ತಿಯಾಗಲಿದೆ. ಇದರಿಂದ ಮಿಥುನ ಜಾತಕದವರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಅವರ ಕೆಲಸಗಳು ಪೂರ್ಣಗೊಲ್ಲಳಿವೆ. ವೈವಾಹಿಕ ಜೀವನದಲ್ಲಿ ತಲೆದೂರಿದ್ದ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹಳೆ ವ್ಯಾಜ್ಯಗಳಿಂದಲೂ ಕೂಡ ಮುಕ್ತಿ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಪಾಲಿಗೆ ಆಧಾಯದ ಹೊಸ ಮೂಲಗಳು ಕೂಡ ತೆರೆದುಕೊಳ್ಳಲಿವೆ.  

3 /5

ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರು ಈ ಅವಧಿಯಲ್ಲಿ ತಮ್ಮ ಜೀವನದಲ್ಲಿ ವಿಭಿನ್ನ ರಾತೀಯ ಚಟುವಟಿಕೆಗಳನ್ನು ಪೂರ್ಣಗೊಳಿಸಿ ಭಾವನಾತ್ಮಕವಾಗಿ ಸಂಪನ್ನತೆಯನ್ನು ಅನುಭವಿಸಲಿದ್ದಾರೆ. ಮುಂಬರುವ ಸವಾಲುಗಳಿಗೆ ಇದು ತುಂಬಾ ಮಹತ್ವದ್ದಾಗಿದೆ ಮತ್ತು ಅದು ಲಾಭವನ್ನು ಕೂಡ ತಂದು ಕೊಡಲಿದೆ. ಮೇಷ ರಾಶಿಯಲ್ಲಿ ಬೃಹಸ್ಪತಿ ವಕ್ರನಾಗುವುದು ನಿಮ್ಮನ್ನು ಆಧ್ಯಾತ್ಮಿಕತೆಯ ಕಡೆಗೆ ಕೊಂಡೊಯ್ಯಲಿದೆ. ಇದರೊಂದಿಗೆ ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಕುಟುಂಬದ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. ದೀರ್ಘಕಾಲದಿಂದ ವೈವಾಹಿಕ ಜೀವನದಲ್ಲಿ ನಡೆದು ಬಂದ ಸಮಸ್ಯೆಗಳು ನಿವಾರಣೆಯಾಗಲಿವೆ.   

4 /5

ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೆ ಈ ಸಮಯ ನಂಬಿಕೆಗೆ ಬಾರದಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳಲ್ಲಿನ ಯಶಸ್ಸಿಗೆ ಈ ಸಮಯ ಸಹಕರಿಸಲಿದೆ. ಇದಲ್ಲದೆ ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಭಾರಿ ಆರ್ಥಿಕ ಲಾಭ ಪ್ರಾಪ್ತಿಯಾಗಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಕೂಡ ನಿವಾರಣೆಯಾಗಲಿವೆ. ಆರ್ಥಿಕ ಬಿಕ್ಕಟ್ಟು ಕೂಡ ನಿವಾರಣೆಯಾಗಿ ಜೀವನದಲ್ಲಿ ಖುಷಿಗಳ ಮರು ಪ್ರವೇಶವಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)