ಈ ರಾಶಿಯಲ್ಲಿ ರಾಜಯೋಗ: ಒದಗಿ ಬರುವುದು ಧನ ಕನಕ ! ಪ್ರಾಪ್ತಿಯಾಗುವುದು ಸುಖ ಸಮೃದ್ದಿಯ ಬದುಕು

ಗ್ರಹಗಳ ರಾಜಕುಮಾರ ಬುಧ ಸೇರಿದಂತೆ ಅನೇಕ ದೊಡ್ಡ ಗ್ರಹಗಳು ಅಕ್ಟೋಬರ್‌ನಲ್ಲಿ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಅಕ್ಟೋಬರ್ 1 ರಂದು ರಾತ್ರಿ 8.45ಕ್ಕೆ ಬುಧ ಕನ್ಯಾರಾಶಿಯನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಕನ್ಯಾರಾಶಿಗೆ ಪ್ರವೇಶಿಸಿದಾಗ ಬುಧಾದಿತ್ಯ ರಾಜಯೋಗ ಉಂಟಾಗುತ್ತದೆ. 

ಬೆಂಗಳೂರು : ಕನ್ಯಾರಾಶಿಗೆ ಪ್ರವೇಶಿಸಿದಾಗ, ಸೂರ್ಯನು ಕನ್ಯಾರಾಶಿಯಲ್ಲಿಯೇ ಇರುತ್ತಾನೆ. ಹೀಗಾಗಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಕೆಲವು ರಾಶಿಯವರಿಗೆ ಈ ಯೋಗ ವರದಾನವೇ ಸರಿ. ಈ ಸಮಯದಲ್ಲಿ, ಅನೇಕ ರಾಶಿಯವರ ಜೀವನದಲ್ಲಿ ಧನಾತ್ಮಕ ಪರಿಣಾಮಗಳು ಕಂಡುಬರುತ್ತವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /5

ಮೇಷ ರಾಶಿ : ಬುಧಾದಿತ್ಯ ರಾಜಯೋಗದ ಪರಿಣಾಮವು ಮೇಷ ರಾಶಿಯವರ ಜೀವನದಲ್ಲಿ ಎಲ್ಲವೂ ಮಂಗಳಮಯವಾಗಿರಲಿದೆ. ಕೆಲಸ ಕಾರ್ಯಗಳಿಗೆ ಬಂದಿರುವ ಅಡೆ ತಡೆ ನಿವಾರಣೆಯಾಗುವುದು. ವ್ಯಾಪಾರ ವ್ಯವಹಾರದಿಂದ ಹೆಚ್ಚಿನ ಲಾಭವಾಗುವುದು. ಉದ್ಯೋಗಿಗಳು ಬಡ್ತಿಯನ್ನು ನಿರೀಕ್ಷಿಸಬಹುದು. ವೇತನದಲ್ಲಿಯೂ ಹೆಚ್ಚ್ಳವಾಗುವುದು.   

2 /5

ಕನ್ಯಾರಾಶಿ :  ನೀವು ಮಾಡುವ ಪ್ರತಿಯೊಂದು ಕೆಲಸವೂ ನಿಮಗೆ ಲಾಭ ತಂದು ಕೊಡುತ್ತದೆ. ತೆಗೆದುಕೊಳ್ಳುವ ಒಂದೊಂದು ನಿರ್ಧಾರ ಕೂಡಾ ಫಲಪ್ರದವಾಗಿರಲಿದೆ. ತಂದೆಯಿಂದ ಆರ್ಥಿಕ ಸಹಾಯ ಸಿಗಲಿದೆ. ಹಣದ ಹರಿವು ಹೆಚ್ಚಾಗುವುದು. 

3 /5

ಧನು ರಾಶಿ :ಸಂಪತ್ತು ಹೆಚ್ಚಾಗುವ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ. ಈ ಸಮಯದಲ್ಲಿ, ಸೂರ್ಯ ಮತ್ತು ಬುಧ ಎರಡೂ ಗ್ರಹಗಳು ಒಟ್ಟಿಗೆ ಸೇರಿ ಧನು ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತವೆ. ವ್ಯಾಪಾರದಲ್ಲಿ ಅಪಾರ ಪ್ರಮಾಣದ ಲಾಭವಾಗುವುದು. ಸಂಪತ್ತು ಹೆಚ್ಚಾಗುತ್ತದೆ.  

4 /5

ಸಿಂಹ ರಾಶಿ : ಅಕ್ಟೋಬರ್ ತಿಂಗಳ ಅವಧಿಯಲ್ಲಿ ವ್ಯಾಪಾರದಲ್ಲಿ ಅಪಾರವಾದ ಆರ್ಥಿಕ ಲಾಭಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳೂ ಇವೆ. ವಿದೇಶದಿಂದ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಪೂರ್ವಿಕರ ಆಸ್ತಿಯಲ್ಲಿ  ಪಾಲು ಸಿಗಬಹುದು. ಈ ಸಮಯದಲ್ಲಿ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.    

5 /5

ವೃಷಭ ರಾಶಿಯವರಿಗೂ ಅನುಕೂಲವಾಗಲಿದೆ.  ಹೂಡಿಕೆ ಮಾಡಲು ಈ ಸಮಯವು ಅನುಕೂಲಕರವಾಗಿರುತ್ತದೆ. ಬುಧಾದಿತ್ಯ ಯೋಗ ವೃಷಭ ರಾಶಿಯವರಿಗೆ ವರದಾನವಾಗಿರಲಿದೆ. ಈ ಸಮಯದಲ್ಲಿ, ವ್ಯವಹಾರದಲ್ಲಿ ಪ್ರಚಂಡ ಆರ್ಥಿಕ ಪ್ರಯೋಜನಗಳಾಗುವುದು. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)