ಮೂಡಲಗಿಯಲ್ಲಿ 7 ಭ್ರೂಣ ಪತ್ತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌!

  • Zee Media Bureau
  • Jul 1, 2022, 09:28 PM IST

ಬೆಳಗಾವಿಯ ಮೂಡಲಗಿಯಲ್ಲಿ 7 ಭ್ರೂಣಗಳು ಪತ್ತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ವಿ. ಕಿವಡಸಣ್ಣವರ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿದೆ. ಕಾರ್ಯವೈಖರಿ ಸಮರ್ಪಕವಾಗಿಲ್ಲ ಎಂದು ಡಿಸಿ ನಿತೇಶ ಪಾಟೀಲ್‌ ಆರೋಗ್ಯ ಇಲಾಖೆಗೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ಎ.ವಿ. ಕಿವಡಸಣ್ಣವರ ಅಧಿಕಾರ ಮೊಟಕು ಮಾಡಲಾಗಿದೆ. ಕಿವಡಸಣ್ಣವರ ಜಾಗಕ್ಕೆ ಡಾ.ತುಕ್ಕಾರ್‌ರನ್ನು ವರ್ಗಾವಣೆ‌ ಮಾಡಿ ಆದೇಶ ಮಾಡಲಾಗಿದೆ. 

Trending News