ನಂದಿನಿ ವಿರುದ್ಧದ ಮೂರು ಸಂಚುಗಳನ್ನ ಬಿಚ್ಚಿಟ್ಟ HDK

  • Zee Media Bureau
  • Apr 9, 2023, 01:08 AM IST

ರಾಜ್ಯದಲ್ಲಿ ಅಮುಲ್‌ ಡೇರಿ ಉದ್ಯಮ ವಿಸ್ತರಣೆ ವಿಚಾರ. ಸರ್ಕಾರದ ವಿರುದ್ಧ ಮಾಜಿ ಸಿಎಂ HDK ಕೆಂಡಾಮಂಡಲ. ನಂದಿನಿ ವಿರುದ್ಧದ ಮೂರು ಸಂಚುಗಳನ್ನ ಬಿಚ್ಚಿಟ್ಟ HDK. ಇಲ್ಲಿನ ಡಬಲ್ ಎಂಜಿನ್ ಬಿಜೆಪಿ ಸರಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್ʼನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಟ್ವೀಟ್‌ ಮಾಡಿ ಹೆಚ್‌ಡಿ ಕುಮಾರಸ್ವಾಮಿ ಕೆಂಡಾಮಂಡಲ.

Trending News