Budget 2023: ಇನ್ಮುಂದೆ ಸಗಣಿ ಕೂಡ ಆದಾಯದ ಮೂಲವಾಗಲಿದೆ. ಕೇಂದ್ರ ಸಚಿವೆಯ ಮಹತ್ವದ ಬಜೆಟ್ ಘೋಷಣೆ

Union Budget 2023: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ 2023ನೇ ಸಾಲಿನ ಬಜೆಟ್ ಮಂಡಿಸಿದ್ದಾರ. ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸಲು 'ಪ್ರಧಾನ ಮಂತ್ರಿ ಪ್ರಣಾಮ್'  ಯೋಜನೆಯನ್ನು ಆರಂಭಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದೇ ವೇಳೆ ಗೋಬರ್ ಧನ ಯೋಜನೆಯ ಅಡಿ 500 ಹೊಸ ಪ್ಲಾಂಟ್ ಗಳನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.   

Written by - Nitin Tabib | Last Updated : Feb 1, 2023, 02:24 PM IST
  • ಈ ಯೋಜನೆಯ ಉದ್ದೇಶವು ಗ್ರಾಮೀಣ ಜೀವನೋಪಾಯಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು
  • ಮತ್ತು ರೈತರು ಮತ್ತು ಇತರ ಗ್ರಾಮೀಣ ಜನರಿಗೆ ಆದಾಯವನ್ನು ಹೆಚ್ಚಿಸುವುದಾಗಿದೆ.
  • ಇಂಧನ ಭದ್ರತೆ ಕ್ಷೇತ್ರದಲ್ಲಿ 35 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.
Budget 2023: ಇನ್ಮುಂದೆ ಸಗಣಿ ಕೂಡ ಆದಾಯದ ಮೂಲವಾಗಲಿದೆ. ಕೇಂದ್ರ ಸಚಿವೆಯ ಮಹತ್ವದ ಬಜೆಟ್ ಘೋಷಣೆ title=
ಗೋಬರ್ ಧನ ಯೋಜನೆ 2023

Union Budget 2023: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಮ್ಮ ಐದನೇ ಬಜೆಟ್ ಮಂಡಿಸಿದರು. ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ಪ್ರಣಾಮ್ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು. ಅದೇ ಸಮಯದಲ್ಲಿ, ಗೋಬರ್ ಧನ ಯೋಜನೆಯಡಿ 500 ಹೊಸ ಪ್ಲಾಂಟ್ ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. 

ಗೋಬರ್ ಧನ್ ಯೋಜನೆ ಎಂದರೇನು?
ಮೋದಿ ಸರ್ಕಾರವು ಪ್ರಾರಂಭಿಸಿದ ಗೋಬರ್ ಧನ ಯೋಜನೆಯ ಉದ್ದೇಶವು ಗ್ರಾಮೀಣ ಶುಚಿತ್ವದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಜಾನುವಾರು ಮತ್ತು ಸಾವಯವ ತ್ಯಾಜ್ಯದಿಂದ ಸಂಪತ್ತು ಮತ್ತು ಶಕ್ತಿಯನ್ನು ಉತ್ಪಾದಿಸುವುದಾಗಿದೆ.

ಇದನ್ನೂ ಓದಿ-Budget 2023 Update: ಯಾವುದು ಅಗ್ಗವಾಯ್ತು, ಯಾವುದು ದುಬಾರಿಯಾಯ್ತು? ಇಲ್ಲಿದೆ ಲಿಸ್ಟ್

ಈ ಯೋಜನೆಯ ಉದ್ದೇಶವು ಗ್ರಾಮೀಣ ಜೀವನೋಪಾಯಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ರೈತರು ಮತ್ತು ಇತರ ಗ್ರಾಮೀಣ ಜನರಿಗೆ ಆದಾಯವನ್ನು ಹೆಚ್ಚಿಸುವುದಾಗಿದೆ. ಇಂಧನ ಭದ್ರತೆ ಕ್ಷೇತ್ರದಲ್ಲಿ 35 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ 20,700 ಕೋಟಿ ರೂ.ಹೂಡಿಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Budget 2023 For Education: 157 ಹೊಸ ಕಾಲೇಜುಗಳು, 8000 ಬೋಧನಾ ಸಿಬ್ಬಂದಿಗಳ ಭರ್ತಿ, ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ಕೊಡುಗೆ

3 ಲಕ್ಷ ರೂ. ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ
ವೈಯಕ್ತಿಕ ಆದಾಯ ತೆರಿಗೆಯ ಹೊಸ ತೆರಿಗೆ ದರ 0 ರಿಂದ 3 ಲಕ್ಷ ರೂಪಾಯಿವರೆಗೆ ಶೂನ್ಯ ತೆರಿಗೆ, 3 ರಿಂದ 6 ಲಕ್ಷ ರೂಪಾಯಿಗಳವರೆಗೆ 5%, 6 ರಿಂದ 9 ಲಕ್ಷ ರೂಪಾಯಿಗಳವರೆಗೆ 10%, 9 ರಿಂದ 12 ಲಕ್ಷ ರೂಪಾಯಿಗಳವರೆಗೆ 15%, 12 ರಿಂದ 15 ಲಕ್ಷ ರೂ. ಆದಾಯ ಹೊಂದಿದವರಿಗೆ ಶೇ.10 ಮತ್ತು 15 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ಶೇ.30 ತೆರಿಗೆಯನ್ನು ವಿಧಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News