Success Story: ಕೇವಲ 70 ಸಾವಿರ ಹೂಡಿಕೆ ಮಾಡಿ, 20 ಲಕ್ಷ ರೂ.ಗಳಿಸಿದ ಈ ಯುವ ರೈತನ ಸಕ್ಸೆಸ್ ಸ್ಟೋರಿ ನೀವೂ ಓದಿ!

Business Concept: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಯುವ ರೈತ ಸಿದ್ಧೇಶ್ವರ ಬರ್ಬಡೆ ಪದವಿ ಮುಗಿಸಿ ನರ್ಸರಿ ಉದ್ಯಮ ಆರಂಭಿಸಿ ಇಂದು ವಾರ್ಷಿಕ 20 ಲಕ್ಷ ಲಾಭ ಗಳಿಸುತ್ತಿರುವ ಯುವ ರೈತ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ.

Written by - Nitin Tabib | Last Updated : Sep 3, 2023, 08:29 PM IST
  • ಸಿದ್ಧೇಶ್ವರ ನರ್ಸರಿ ವ್ಯಾಪಾರದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.
  • 70 ಸಾವಿರದಲ್ಲಿ ಆರಂಭವಾದ ಅವರ ವಹಿವಾಟಿನ ವಾರ್ಷಿಕ ಆದಾಯ 20 ಲಕ್ಷಕ್ಕೂ ಅಧಿಕವಾಗಿದೆ.
  • ಅವರು ಸೊಲ್ಲಾಪುರ ಜಿಲ್ಲೆಯ 3000ಕ್ಕೂ ಹೆಚ್ಚು ರೈತರಿಗೆ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ.
  • ತಮ್ಮ ಸಂಸ್ಥೆಯಲ್ಲಿ 6 ಮಂದಿಗೆ ಉದ್ಯೋಗವನ್ನೂ ಕೂಡ ಸಿದ್ಧೇಶ್ವರ ನೀಡಿದ್ದಾರೆ.
Success Story: ಕೇವಲ 70 ಸಾವಿರ ಹೂಡಿಕೆ ಮಾಡಿ, 20 ಲಕ್ಷ ರೂ.ಗಳಿಸಿದ ಈ ಯುವ ರೈತನ ಸಕ್ಸೆಸ್ ಸ್ಟೋರಿ ನೀವೂ ಓದಿ! title=

Business Idea: ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಯುವಕರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಕಷ್ಟು ಯಶಸ್ಸು ಗಳಿಸುತ್ತಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಯುವ ರೈತ ಸಿದ್ಧೇಶ್ವರ ಬರ್ಬಡೆ ಪದವಿ ಮುಗಿಸಿ ನರ್ಸರಿ ಉದ್ಯಮ ಆರಂಭಿಸಿ ಇಂದು ವಾರ್ಷಿಕ 20 ಲಕ್ಷ ಲಾಭ ಗಳಿಸುತ್ತಿದ್ದಾರೆ

ಕೃಷಿ ಪದವೀಧರರಾದ ಸಿದ್ಧೇಶ್ವರ ಬರ್ಬಡೆ,  ತಮ್ಮ ಕುಟುಂಬದಲ್ಲಿ ನರ್ಸರಿ ನಡೆಸುತ್ತಿರುವ ಮೊದಲ ತಲೆಮಾರಿನ ವ್ಯಕ್ತಿಯಾಗಿದ್ದಾರೆ. ಸಿದ್ಧೇಶ್ವರ ಅವರಿಗೆ ಅವರ ವ್ಯಾಪಾರದ ಶೇ. 55ರಷ್ಟು ಚಿಲ್ಲರೆ ಮಾರಾಟದಿಂದ ಗಳಿಕೆ ಮಾಡುತ್ತಾರೆ ಮತ್ತು ಉಳಿದ ಆದಾಯ ಭೂದೃಶ್ಯ ವಿಭಾಗದಿಂದ ಬರುತ್ತದೆ ಎಂದು ಹೇಳುತ್ತಾರೆ.

ವ್ಯವಸ್ಥಾಪಕರ ಪ್ರಕಾರ, ಸಿದ್ಧೇಶ್ವರ್ ವಡಾಲಾದ ಶ್ರೀ ರಾಮ್ ಗ್ರಾಮೀಣ ಸನಿಧನ್ ಏವಂ ವಿಕಾಸ್ ಪ್ರತಿಷ್ಠಾನದಲ್ಲಿ ಆಯೋಜಿಸಲಾದ ಅಗ್ರಿ-ಕ್ಲಿನಿಕ್ ಮತ್ತು ಅಗ್ರಿ-ಬಿಸಿನೆಸ್ ಸೆಂಟರ್ (AC&ABC) ಯೋಜನೆಯಡಿಯಲ್ಲಿ ತರಬೇತಿಗೆ ಹಾಜರಾಗಿದ್ದರು. ತರಬೇತಿ ಪಡೆದ ನಂತರ ಸ್ವಂತವಾಗಿ 70 ಸಾವಿರ ಬಂಡವಾಳ ಹೂಡಿ ನರ್ಸರಿ ಸ್ಥಾಪಿಸಿದ್ದಾರೆ. ಆರಂಭದಲ್ಲಿ ಅಲಂಕಾರಿಕ ಗಿಡಗಳ ಸಸಿಗಳನ್ನು ಮಾರಾಟ ಮಾಡುವತ್ತ ಗಮನ ಹರಿಸಿದ್ದಾರೆ.

ಇದನ್ನೂ ಓದಿ-ನಿಮ್ಮ ಬಳಿ ಕೇವಲ 20 ಸಾವಿರ ಹೂಡಿಕೆ ಇದ್ದರೆ ಸಾಕು, ಈ ಉದ್ಯಮ ಆರಂಭಿಸಿ ನೀವೂ ಕೂಡ ಸ್ವಾವಲಂಭಿಯಾಗಬಹುದು!

ಅವರ ನರ್ಸರಿ ಸೊಲ್ಲಾಪುರ ಹೆದ್ದಾರಿಯಲ್ಲಿದೆ. ರೈತರಿಂದ ಹಣ್ಣಿನ ಗಿಡಗಳ ಬೇಡಿಕೆಯನ್ನು ಕಂಡು ತಮ್ಮ ವ್ಯಾಪಾರವನ್ನು ವಿಸ್ತರಿಸಿ ಎಲ್ಲಾ ರೀತಿಯ ಗಿಡಗಳನ್ನು ಅವರು ತಮ್ಮ ನರ್ಸರಿಗೆ ಸೇರಿಸಿದ್ದಾರೆ.

ಇದನ್ನೂ ಓದಿ-ಇದೆ ತಿಂಗಳ ಕೊನೆಯಲ್ಲಿ ಸರ್ಕಾರಿ ನೌಕರರ ವೇತನದಲ್ಲಿ 27000 ರೂ.ಗಳ ಬಂಪರ್ ಹೆಚ್ಚಳ!

ರೂ 20 ಲಕ್ಷ ವಹಿವಾಟು
ಸಿದ್ಧೇಶ್ವರ ನರ್ಸರಿ ವ್ಯಾಪಾರದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. 70 ಸಾವಿರದಲ್ಲಿ ಆರಂಭವಾದ ಅವರ ವಹಿವಾಟಿನ ವಾರ್ಷಿಕ ಆದಾಯ 20 ಲಕ್ಷಕ್ಕೂ ಅಧಿಕವಾಗಿದೆ. ಅವರು ಸೊಲ್ಲಾಪುರ ಜಿಲ್ಲೆಯ 3000ಕ್ಕೂ ಹೆಚ್ಚು ರೈತರಿಗೆ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ತಮ್ಮ ಸಂಸ್ಥೆಯಲ್ಲಿ 6 ಮಂದಿಗೆ ಉದ್ಯೋಗವನ್ನೂ ಕೂಡ ಸಿದ್ಧೇಶ್ವರ ನೀಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News