ನ್ಯಾಯಾಂಗದ ಕಣ್ಣಿಗೆ ಮಣ್ಣೆರೆಚೋ ಯತ್ನ: ಆರೋಪಿಗಳು ಅಂದರ್

ಜನ ಯಾರಿಗೆ ಹೆದರುತ್ತಾರೋ ಇಲ್ಲವೋ ಗೊತ್ತಿಲ್ಲ. ನ್ಯಾಯಾಲಯಕ್ಕೆ ಪತರಗುಟ್ಟಿಹೋಗತ್ತಾರೆ.ಅಂಥದರಲ್ಲಿ ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿರೋ ಖತರ್ನಾಕ್ ಗ್ಯಾಂಗ್ ನ್ಯಾಯಾಂಗವನ್ನೇ ಯಾಮಾರಿಸೋ ಕೆಲಸವನ್ನು ಮಾಡಿದೆ.ಸಿಟಿ ಮಾರ್ಕೆಟ್ ಸರ್ಕಲ್ ನಲ್ಲಿ ಪೊಲೀಸರು ಏಪ್ರಿಲ್ 19 ರ ರಾತ್ರಿ ತಪಾಸಣೆ ಮಾಡುತ್ತಿದ್ದರು.ಈ ವೇಳೆ ಒರ್ವ ಪುರುಷ ಮತ್ತು ಮಹಿಳೆಯಿದ್ದ ಆಟೋ ತಪಾಸಣೆ ಮಾಡಿದ್ದಾರೆ.ಈ ವೇಳೆ ಆಟೋ ಚಾಲಕ ಇಳಿದು ಓಡಲು ಆರಂಭಿಸಿದ್ದಾನೆ.ಆಟೋಚಾಲಕನನ್ನು ಬೆನ್ನತ್ತಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆಟೋ ಪರಿಶೀಲನೆ ನಡೆಸಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Apr 23, 2022, 05:07 PM IST
  • ರಾತ್ರಿ ಆಟೋ ಪರಿಶೀಲನೆ ನಡೆಸಿದಾಗ ಆಟೋದಲ್ಲಿ ಸರ್ಕಾರಿ ಸೀಲುಗಳು, ಆರ್ ಟಿಸಿ ಮತ್ತು ಮ್ಯೂಟಿಯೇಷನ್ ಪಡೆದ ಕೆಲವು ದಾಖಲೆಗಳು ಲಭ್ಯವಾಗಿವೆ.
  • ನಕಲಿ ಡಾಕ್ಯೂಮೆಂಟ್ ಕಂಡು ತಕ್ಷಣವೇ , ಪುಟ್ಟಸ್ವಾಮಿ ಮತ್ತು ನಸ್ರಿನ್ ಸೇರಿ ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
 ನ್ಯಾಯಾಂಗದ ಕಣ್ಣಿಗೆ ಮಣ್ಣೆರೆಚೋ ಯತ್ನ: ಆರೋಪಿಗಳು ಅಂದರ್  title=

ಬೆಂಗಳೂರು: ಜನ ಯಾರಿಗೆ ಹೆದರುತ್ತಾರೋ ಇಲ್ಲವೋ ಗೊತ್ತಿಲ್ಲ. ನ್ಯಾಯಾಲಯಕ್ಕೆ ಪತರಗುಟ್ಟಿಹೋಗತ್ತಾರೆ.ಅಂಥದರಲ್ಲಿ ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿರೋ ಖತರ್ನಾಕ್ ಗ್ಯಾಂಗ್ ನ್ಯಾಯಾಂಗವನ್ನೇ ಯಾಮಾರಿಸೋ ಕೆಲಸವನ್ನು ಮಾಡಿದೆ.ಸಿಟಿ ಮಾರ್ಕೆಟ್ ಸರ್ಕಲ್ ನಲ್ಲಿ ಪೊಲೀಸರು ಏಪ್ರಿಲ್ 19 ರ ರಾತ್ರಿ ತಪಾಸಣೆ ಮಾಡುತ್ತಿದ್ದರು.ಈ ವೇಳೆ ಒರ್ವ ಪುರುಷ ಮತ್ತು ಮಹಿಳೆಯಿದ್ದ ಆಟೋ ತಪಾಸಣೆ ಮಾಡಿದ್ದಾರೆ.ಈ ವೇಳೆ ಆಟೋ ಚಾಲಕ ಇಳಿದು ಓಡಲು ಆರಂಭಿಸಿದ್ದಾನೆ.ಆಟೋಚಾಲಕನನ್ನು ಬೆನ್ನತ್ತಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆಟೋ ಪರಿಶೀಲನೆ ನಡೆಸಿದ್ದಾರೆ.

ರಾತ್ರಿ ಆಟೋ ಪರಿಶೀಲನೆ ನಡೆಸಿದಾಗ ಆಟೋದಲ್ಲಿ ಸರ್ಕಾರಿ ಸೀಲುಗಳು, ಆರ್.ಟಿ.ಸಿ ಮತ್ತು ಮ್ಯೂಟಿಯೇಷನ್ ಪಡೆದ ಕೆಲವು ದಾಖಲೆಗಳು ಲಭ್ಯವಾಗಿವೆ.ನಕಲಿ ಡಾಕ್ಯೂಮೆಂಟ್ ಕಂಡು ತಕ್ಷಣವೇ, ಪುಟ್ಟಸ್ವಾಮಿ ಮತ್ತು  ನಸ್ರಿನ್ ಸೇರಿ ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಬಮೂಲ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ: ತನಿಖೆಗೆ ಸರ್ಕಾರದ ಆದೇಶ

No description available.

ಕೋರ್ಟ್ ನಲ್ಲಿ ಜಾಮೀನು ಪಡೆಯಲು ಫೇಕ್ ಡಕ್ಯೂಮೆಂಟ್ ಸೃಷ್ಟಿ

ಜೈಲು ಸೇರಿರುವ ಆರೋಪಿ ಜಾಮೀನು ಪಡೆಯಲು ಶ್ಯೂರಿಟಿಯನ್ನು ಕೊಡಬೇಕು.ಶ್ಯೂರಿಟಿ ಕೊಡಲು ಪಹಣಿ ಪತ್ರ , ಆರ್ ಟಿಸಿ, ಸೇರಿದಂತೆ ಆಧಾರ್ ಕಾರ್ಡ್ ಮತ್ತು ಜಾಮೀನು ಕೊಡುವ ವ್ಯಕ್ತಿ ನ್ಯಾಯಾಲಯಕ್ಕೆ ಹಾಜರಾಗಬೇಕು.ಆದರೆ ಈ ಗ್ಯಾಂಗ್ ನವರು ರೈತರ ಹೆಸರಿನಲ್ಲಿರುವ ಪಹಣಿಯನ್ನು ನಕಲು ಮಾಡಿ ಬೇರೊಂದು ಹೆಸರಲ್ಲಿ ಸೃಷ್ಟಿಸುತ್ತಿದ್ದರು.ಆರ್ ಟಿಸಿ, ಸಾಲ್ವೆನ್ಸಿ ಸರ್ಟಿಫಿಕೇಟ್ ಸಹ ನಕಲು ಮಾಡುತ್ತಿದ್ದರು.ಆದರೇ ಇದ್ಯಾವುದು ರೈತರ ಗಮನಕ್ಕೆ ಬರುತ್ತಿರಲಿಲ್ಲ.ರೈತರಿಗೆ ಮೋಸ ಮಾಡುವ ಉದ್ದೇಶದಿಂದ ಇವರು ಅಸಲಿ ಡಾಕ್ಯೂಮೆಂಟ್ ನ ಬದಲಾವಣೆಯನ್ನು ಮಾಡುತ್ತಿರಲಿಲ್ಲ. ಕೇವಲ ಜಾಮೀನಿಗೆ ಬೇಕಾದಂತೆ ನಕಲಿ ದಾಖಲೆಯನ್ನು ಸೃಷ್ಟಿಸುತ್ತಿದ್ದರು.

ಫೇಕ್ ಆದಾರ್ ಗಾಗಿ ಕ್ಯೂ ಆರ್ ಕೋಡ್ ಮೇಕರ್ ಬಳಕೆ

ಆರೋಪಿಗಳು ಆದಾರ್ ನಕಲು ಮಾಡಲು ಕ್ಯೂ ಆರ್ ಕೋಡ್ ಮೇಕರ್ ಎಂಬ ಮೊಬೈಲ್ ಆ್ಯಪ್ ಬಳಕೆ ಮಾಡುತ್ತಿದ್ದರು.ಈ ಮೊಬೈಲ್ ಆ್ಯಪ್ ಮೂಲಕ ಬೇರೆ ಯಾರದ್ದೋ ಆಧಾರ್ ಸಂಖ್ಯೆಯಲ್ಲಿ ಮತ್ತೊಬ್ಬರ ಫೋಟೋ ಅಡ್ರಸ್ ಬರುವಂತೆ ಮಾಡುತ್ತಿದ್ದರು.ಜಾಮೀನು ನೀಡುವ ವೇಳೆ ನ್ಯಾಯಾಲಯದಲ್ಲಿ ಬಾರ್ ಕೋಡ್ ಸ್ಕ್ಯಾನ್ ಮಾಡಿದಾಗ ಹೆಸರು ಮತ್ತು ಅಡ್ರಸ್ ಮಾತ್ರ ಕಾಣಿಸುತ್ತದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ನ್ಯಾಯಾಲಯಕ್ಕೆ ಯಾಮಾರಿಸುತ್ತಿದ್ದರು. 

ಇದನ್ನೂ ಓದಿ: PSI Recruitment Scam: ಇನ್ನೂ ಪತ್ತೆಯಾಗದೆ ತಲೆಮರೆಸಿಕೊಂಡಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ!

ಇವರ ಬಳಿ ಕಂಪನಿಗಳ ಎಕ್ಸಿಪೀರಿಯನ್ಸ್ ಲೇಟರ್ , ಸೀಲ್, ಆಧಾರ್ ಕಾರ್ಡ್ ಲಭ್ಯ

ನ್ಯಾಯಾಲಯಕ್ಕೆ ಮಾತ್ರವಲ್ಲದೇ ಇವರು ವಿವಿಧ ಕಂಪನಿಯ ನಕಲಿ ಎಕ್ಸ್ ಪೀರಿಯನ್ಸ್ ಲೆಟರ್,14 ಸೀಲು, 40ಕ್ಕೂ ಹೆಚ್ಚು ಸಾಲ್ವೆನ್ಸೀ ಸರ್ಟಿಫಿಕೇಟ್,100 ಕ್ಕೂ ಹೆಚ್ಚು ಪಹಣಿಗಳನ್ನು ಸಿಟಿ ಮಾರ್ಕೆಟ್ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

ಇನ್ನೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಕ್ಕಬಳ್ಳಾಪುರದಲ್ಲಿ ಹರಿ ಗ್ರಾಫಿಕ್ಸ್ ಎಂಬ ಡಿಟಿಪಿ ಸೆಂಟರ್ ಮೇಲೆ ದಾಳಿ ಮಾಡಿ ಮಾಲೀಕ ಮಂಜುನಾಥ್ ನನ್ನು ಬಂಧಿಸಿದ್ದಲ್ಲದೇ 1 ಕಂಪ್ಯೂಟರ್, ಪ್ರಿಂಟರ್ ಕಂ ಸ್ಕ್ಯಾನರ್,1 ಲ್ಯಾಮಿನೇಷನ್ ಮಷಿನ್ ವಶಕ್ಕೆ ಪಡೆಯಲಾಗಿದೆ.ಈಗ ಪುಟ್ಟಸ್ವಾಮಿ, ನಸ್ರಿನ್, ರಾಜಣ್ಣ, ಮಂಜುನಾಥ್, ಆಂಜಿನಪ್ಪ,ಕುಮಾರ್, ಚಂದ್ರಗೌಡ, ಸೊಣ್ಣೆಗೌಡ, ಟಿಎಂ ರಾಜಪ್ಪ ಸೇರಿ 9 ಆರೋಪಿಗಳನ್ನು ಪೊಲೀಸರು ಬಂಧಿಸುವುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News