/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ʼಬಭ್ರುವಾಹನʼದ ಚಿತ್ರಾಂಗದೆಗೆ ರಾಜಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ

B.Sarojadevi : ಬಹುಭಾಷಾ ತಾರೆ, ಅಭಿನಯ ಸರಸ್ವತಿ ಪದ್ಮಭೂಷಣ ಡಾ.ಬಿ.ಸರೋಜಾದೇವಿ ಅವರಿಗೆ 2023ನೇ ಸಾಲಿನ ಡಾ.ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ ಶುಕ್ರವಾರ(ಸೆ.8) ರಂದು ನೀಡಿ ಗೌರವಿಸಲಾಗಿದೆ.

Written by - Zee Kannada News Desk | Last Updated : Sep 9, 2023, 09:55 AM IST
  • ಬಹುಭಾಷಾ ತಾರೆ, ಅಭಿನಯ ಸರಸ್ವತಿ ಪದ್ಮಭೂಷಣ ಡಾ.ಬಿ.ಸರೋಜಾದೇವಿ.
  • ಡಾ. ಬಿ.ಸರೋಜಾದೇವಿ ಅವರಿಗೆ 2023ನೇ ಸಾಲಿನ ಡಾ.ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ.
  • ಅವರೊಂದಿಗೆ ನಟಿಸಿದ ಚಿತ್ರಗಳಿಂದ ನಾನು ಕಲಿತ ಶಿಸ್ತು, ಜವಾಬ್ದಾರಿ ನನ್ನನ್ನು ಈ ಹಂತಕ್ಕೆ ತಲುಪಿಸಿದೆ.
ʼಬಭ್ರುವಾಹನʼದ ಚಿತ್ರಾಂಗದೆಗೆ ರಾಜಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ title=

A multi-lingual star : ಹಿರಿಯ ನಟಿ, ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ ಡಾ. ಬಿ.ಸರೋಜಾದೇವಿ ಅವರಿಗೆ 2023ನೇ ಸಾಲಿನ ಡಾ.ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿಯನ್ನು ಶುಕ್ರವಾರ(ಸೆಪ್ಟೆಂಬರ್‌ 8) ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಸಭಾಂಗಣದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಬಿ.ಸರೋಜಾದೇವಿ "ನನಗೆ ಸಿಕ್ಕ ಯಾವುದೇ ಪ್ರಶಸ್ತಿಗಳು ಈ ಡಾ.ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಸಮವಾಗಲಾರವು. ಅವರೊಂದಿಗೆ ನಟಿಸಿದ ಚಿತ್ರಗಳಿಂದ ನಾನು ಕಲಿತ ಶಿಸ್ತು, ಜವಾಬ್ದಾರಿ ನನ್ನನ್ನು ಈ ಹಂತಕ್ಕೆ ತಲುಪಿಸಿದೆ. ಅವರ ನಟನೆಯೇ ನನ್ನ ಅಭಿನಯಕ್ಕೆ ಸ್ಪೂರ್ತಿ. ಅದರ ಪರಿಣಾಮವೇ ಜನ ಮೆಚ್ಚುವ ಪಾತ್ರಗಳಲ್ಲಿ ಅಭಿನಯಿಸಲು ಕಾರಣವಾಯಿತು ಎಂದು ಮಾತನಾಡಿದರು. 

ಇದನ್ನು ಓದಿ - ಸೌಂದರ್ಯದ ಮೂಲಕವೇ ಸೌಂಡ್‌ ಮಾಡುತ್ತಿದ್ದಾಳೆ ಸೋನಿಯಾ..! ಈ ಚೆಲುವೆ ಯಾರು ಗೊತ್ತಾ..?

ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ, ಕನ್ನಡದ ಮೇರು ವ್ಯಕ್ತಿತ್ವದ ವರನಟ ಡಾ.ರಾಜಕುಮಾರ್‌ ಅಂದರೆ ಕನ್ನಡಿಗರ ಹೆಮ್ಮೆ, ಕನ್ನಡಿಗರ ಅಭಿಮಾನ, ಕನ್ನಡ ನಾಡಿನ ಶಕ್ತಿ. ಈ ಸಂಸ್ಥೆಯನ್ನು ರಾಜಕುಮಾರ್‌ ಅವರು ಸರಸ್ವತಿ ಮಂದಿರವೆಂದೇ ಕರೆಯುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಅತಿ ವಿಶ್ವಾಸರ್ಹ ಸಂಸ್ಥೆ ಜೊತೆಗೆ ಇದೊಂದು ಮಾದರಿ ಸಂಸ್ಥೆ ಎಂದು ತಿಳಿಸಿದರು. 

 ಡಾ.ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಬಿ.ಸರೋಜಾದೇವಿಯವರು ನಟನೆಯಲ್ಲಿ ಶಾರದೆ. ನಾಡಿನ ಅತ್ಯಂತ ಗೌರವಾನ್ವಿತ ಪ್ರಶಸ್ತಿ ಡಾ.ರಾಜ್‌ಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ ಈ ಪ್ರಶಸ್ತಿಯನ್ನು ಇನ್ಯಾವುದೇ ಪ್ರಶಸ್ತಿಗಳಿಗೆ ಹೋಲಿಕೆ ಮಾಡಲು ಅಸಾಧ್ಯ. ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ.ಚೆನ್ನೇಗೌಡ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.