ಕ್ರಿಕೆಟಿಗನಾಗಬೇಕೆಂದುಕೊಂಡಿದ್ದ ಈತ ಇಂದು ಸಿನಿರಂಗದ ಖಡಕ್ ವಿಲನ್..!‌ ಬಾಲಿವುಡ್ ನಿಂದ ಸೌತ್ ವರೆಗೂ ಕ್ರೇಜ್‌ ಸೃಷ್ಟಿಸಿದ ನಟ! ಯಾರು ಗೊತ್ತೇ?

Famous Villan: ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಪ್ರೇಕ್ಷಕರು ಸಾಕಷ್ಟು ವಿಲನ್‌ಗಳನ್ನು ನೋಡುತ್ತಿದ್ದಾರೆ. ಹಾಗಾದರೆ ಇಂದು ನಾವು ನಿಮಗೆ ಅಂತಹ ಖಡಕ್ ಮುಖದ ಬಗ್ಗೆ ಹೇಳಲಿದ್ದೇವೆ, ಅವರ ಬಗ್ಗೆ ತಿಳಿದರೆ ನೀವು ಕೂಡ ಶಾಕ್‌ ಆಗೋದು ಫಿಕ್ಸ್!‌   

Written by - Savita M B | Last Updated : Aug 25, 2024, 12:23 PM IST
  • ನಟ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಮತ್ತು ದಕ್ಷಿಣದ ಪ್ರಸಿದ್ಧ ತಾರೆಗಳೊಂದಿಗೆ ಕೆಲಸ ಮಾಡಿದ ನಟ
  • ವಿಲನ್ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಮೂಡಿಸಿದ್ದಾರೆ
ಕ್ರಿಕೆಟಿಗನಾಗಬೇಕೆಂದುಕೊಂಡಿದ್ದ ಈತ ಇಂದು ಸಿನಿರಂಗದ ಖಡಕ್ ವಿಲನ್..!‌ ಬಾಲಿವುಡ್ ನಿಂದ ಸೌತ್ ವರೆಗೂ ಕ್ರೇಜ್‌ ಸೃಷ್ಟಿಸಿದ ನಟ! ಯಾರು ಗೊತ್ತೇ? title=

mukesh rish: ನಟ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಮತ್ತು ದಕ್ಷಿಣದ ಪ್ರಸಿದ್ಧ ತಾರೆಗಳೊಂದಿಗೆ ಕೆಲಸ ಮಾಡಿದ ಈ ನಟ ಎಂದಿಗೂ ನಟರಾಗಲು ಬಯಸಲಿಲ್ಲ ಎಂದು ಕೆಲವೇ ಜನರಿಗೆ ತಿಳಿದಿದೆ. ವಿಲನ್ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಮೂಡಿಸಿದ್ದಾರೆ. ಆದರೆ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಈ ನಟ ಕ್ರಿಕೆಟರ್ ಆಗುವ ಕನಸು ಕಂಡಿದ್ದರು.

ಇಂದು ನಾವು ಹೇಳುತ್ತಿರುವ ನಟ ಬಾಲಿವುಡ್‌ನಲ್ಲಿ ಹೆಚ್ಚಾಗಿ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರ ಹೆಸರು ಮುಖೇಶ್ ರಿಷಿ. ಮುಕೇಶ್ ರಿಷಿಯನ್ನು ಆನ್‌ಸ್ಕ್ರೀನ್ ಮತ್ತು ಆಫ್‌ಸ್ಕ್ರೀನ್ ನೋಡಿ ಜನರು ಭಯಪಡುತ್ತಿದ್ದರು. ಮುಖೇಶ್ ರಿಷಿ 90 ರ ದಶಕ ಮತ್ತು 20 ರ ದಶಕದ ಆರಂಭದಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಖಡಕ್ ಖಳನಾಯಕರಲ್ಲಿ ಒಬ್ಬರಾಗಿದ್ದಾರೆ..‌ ಆದರೆ ಅವರು ನಿಜ ಜೀವನದಲ್ಲಿ ಮೌನವನ್ನೇ ಇಷ್ಟಪಡುತ್ತಾರೆ.

ಇದನ್ನೂ ಓದಿ-ʼವಿರಾಟ್‌ ಕೊಹ್ಲಿ ಕೆನ್ನೆಗೆ ಬಾರಿಸುವಷ್ಟು ಕೋಪ ಇದೆ..ʼ ದಿಗ್ಗಜ ಕ್ರಿಕೆಟಿಗನ ಶಾಕಿಂಗ್‌ ಕಾಮೆಂಟ್!!‌   

ನಟ ಮುಖೇಶ್ ರಿಷಿ ಅತ್ಯಂತ ಶಕ್ತಿಶಾಲಿ ಖಳನಾಯಕರಲ್ಲಿ ಒಬ್ಬರು. ಅವರು ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜಮ್ಮುವಿನಲ್ಲಿ ಜನಿಸಿದ ಮುಕೇಶ್ ಅವರ ತಂದೆ ಉದ್ಯಮಿಯಾಗಿದ್ದು, ತಮ್ಮ ಮಗ ತನ್ನ ಹೆಜ್ಜೆಯನ್ನು ಅನುಸರಿಸಬೇಕೆಂದು ಬಯಸಿದ್ದರು. ಅಷ್ಟೇ ಅಲ್ಲ, ಮುಖೇಶ್ ರಿಷಿಗೆ ಕ್ರಿಕೆಟರ್ ಆಗಬೇಕೆಂಬ ಆಸೆ ಇತ್ತು. ವಿಶೇಷವೆಂದರೆ ಮುಕೇಶ್ ರಿಷಿ ಕಾಲೇಜು ದಿನಗಳಲ್ಲಿ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು, ಆದರೆ ನಂತರ ಅವರ ಇಡೀ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತು. 

ರಿಷಿಯ ಮನೆಯವರು ಶಿಕ್ಷಣದ ನಂತರ ಅವನನ್ನು ವ್ಯಾಪಾರಕ್ಕೆ ಸೇರಿಸಿದರು, ಆದರೆ ಸ್ವಲ್ಪ ಸಮಯದ ನಂತರ ನಟ ತನ್ನ ತಂದೆಗೆ ನನಗೆ ಈ ಕೆಲಸದಲ್ಲಿ ಆಸಕ್ತಿ ಇಲ್ಲ. ವಿಶ್ವ ಪರ್ಯಟನೆ ಮಾಡಬೇಕೆಂದು ಹೇಳಿದರು. ಇದೇ ಇವರ ಜೀವನದ ಟರ್ನಿಂಗ್‌ ಪಾಯಿಂಟ್..‌ ಅಲ್ಲಿಂದ ಮುಖೇಶ್ ಮಾಡೆಲಿಂಗ್‌ನಲ್ಲಿ ತಮ್ಮ ಕೈಯನ್ನು ಪ್ರಯತ್ನಿಸುವ ಮೊದಲು ಡಿಪಾರ್ಟ್‌ಮೆಂಟ್ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ನಂತರ ಜನರು ಮುಖೇಶ್ ಅವರನ್ನು ಶೋಬಿಜ್‌ಗೆ ಹೋಗುವಂತೆ ಕೇಳಿಕೊಂಡರು.. ತಂದೆಯ ಮರಣದ ನಂತರ ಮುಖೇಶ್ ಮುಂಬೈಗೆ ಹೋದರು. ರಿಷಿಯ ಸ್ನೇಹಿತ ಯಶ್ ಚೋಪ್ರಾ ಅವರನ್ನು ಭೇಟಿಯಾದಾಗ ನಟನ ಅದೃಷ್ಟವೇ ಬೆಳಗಿತು.

ಇದನ್ನೂ ಓದಿ-ಮಹಿಳೆಯ ದೇಹದ ಈ ಭಾಗದಲ್ಲಿ ಕೂದಲು ಬೆಳೆದರೆ ಲಕ್ಷ್ಮಿಯ ಕೃಪಾಕಟಾಕ್ಷವಾದಂತೆ.. ಶ್ರೀಮಂತಿಕೆ ಬರುವ ಮುನ್ಸೂಚನೆ ಇದು !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News