BBK 10 : ನೀನು ಬಾತ್‌ ರೂಂ ತೊಳಿ.. ನೀನು.. ಟಾಯ್ಲೆಟ್ ತಿಕ್ಕು, ನಾನು..! ತುಕಾಲಿ ಮಾತು ಕೇಳಿದ್ರೆ ಪಕ್ಕಾ ನಗ್ತೀರಾ..

Bigg boss 10 : ತುಕಾಲಿ ಸಂತು ಆಗಾಗ ದೊಡ್ಮನೆಯಲ್ಲಿ ತಮ್ಮ ಮಾತುಗಳಿಂದ ಜಗಳಕ್ಕೆ ಕಾರಣವಾದ್ರೆ, ಇನ್ನೂ ಕೆಲವು ಬಾರಿ ಸ್ಪರ್ಧಿಗಳ ನಗುವಿಗೆ ಕಾರಣವಾಗುತ್ತಾರೆ. ಸಧ್ಯ ಡ್ರೋನ್‌ ಪ್ರತಾಪ್‌ ಮತ್ತು ವರ್ತೂರು ಸಂತೋಷ್‌ ಮುಂದೆ ಬಾತ್‌ ರೂಂ ತಿಕ್ಕಿ, ಟಾಯ್ಲೆಟ್‌ ತೊಳೆಯರಿ ಅಂತ ಹೇಳಿದ ಮಾತುಗಳು ವೈರಲ್‌ ಆಗುತ್ತಿವೆ.

Written by - Krishna N K | Last Updated : Dec 2, 2023, 02:52 PM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಪೈನಲ್‌ ದಿನ ಹತ್ತಿರ ಬರುತ್ತಿದೆ.
  • ದೊಡ್ಮನೆಯಲ್ಲಿ ಟಾಸ್ಕ್‌ಗಳು ದಿನದಿಂದ ದಿನಕ್ಕೆ ಕಠಿಣವಾಗುತ್ತಿವೆ.
  • ಇದೀಗ ತುಕಾಲಿ ಸಂತೋಷ್‌ ಹೇಳಿಕೆ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿವೆ.
BBK 10 : ನೀನು ಬಾತ್‌ ರೂಂ ತೊಳಿ.. ನೀನು.. ಟಾಯ್ಲೆಟ್ ತಿಕ್ಕು, ನಾನು..! ತುಕಾಲಿ ಮಾತು ಕೇಳಿದ್ರೆ ಪಕ್ಕಾ ನಗ್ತೀರಾ.. title=

Bigg Boss Kannada 10 : ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಪೈನಲ್‌ ದಿನ ಹತ್ತಿರ ಬರುತ್ತಿದೆ. ದೊಡ್ಮನೆಯಲ್ಲಿ ಟಾಸ್ಕ್‌ಗಳು ದಿನದಿಂದ ದಿನಕ್ಕೆ ಕಠಿಣವಾಗುತ್ತಿವೆ. ಇಷ್ಟು ದಿನ ಒಂದು ಲೆಕ್ಕವಾಗಿದ್ರೆ, ಇನ್ಮೇಲೆ ಒಂದು ಲೆಕ್ಕ ಅಂತ ಸ್ಪರ್ಧಿಗಳು ಸಹ ಗೆಲ್ಲಲು ಸಖತ್‌ ಆಕ್ಟಿವ್‌ ಆಗಿ ಆಟವಾಡುತ್ತಿದ್ದಾರೆ. ಇದೀಗ ತುಕಾಲಿ ಸಂತು, ಡ್ರೋನ್‌ ಪ್ರತಾಪ್‌ ಮತ್ತು ವರ್ತೂರು ಸಂತೋಷ್‌ ಮುಂದೆ ನೀಡಿದ ಬಾತ್‌ ರೂಂ ಮತ್ತು ಟಾಯ್ಲೆಟ್‌ ಕ್ಲೀನ್‌ ಹೇಳಿಕೆ ಸಖತ್‌ ವೈರಲ್‌ ಆಗುತ್ತಿದೆ.

ಹೌದು.. ತುಕಾಲಿ ಸಂತು ಆಗಾಗ ದೊಡ್ಮನೆಯಲ್ಲಿ ತಮ್ಮ ಮಾತುಗಳಿಂದ ಜಗಳಕ್ಕೆ ಕಾರಣವಾದ್ರೆ, ಇನ್ನೂ ಕೆಲವು ಬಾರಿ ಸ್ಪರ್ಧಿಗಳ ನಗುವಿಗೆ ಕಾರಣವಾಗುತ್ತಾರೆ. ಅಲ್ಲದೆ, ಪ್ರೇಕ್ಷರಿಗೆ ಮನರಂಜನೆ ವಿಚಾರಕ್ಕೆ ಬಂದ್ರೆ, ತುಕಾಲಿ ಸಂತು ಮಾತುಗಳು, ಇನ್ನೊಬ್ಬರ ಕಾಲೆಳೆಯುವುದು ಇಷ್ಟವಾಗುತ್ತದೆ. ಕೆಲವೊಮ್ಮೆ ಅದೇ ಅವರಿಗೆ ಮುಳ್ಳಾಗುತ್ತದೆ.

ಇದನ್ನೂ ಓದಿ:ಸಿಲ್ಕ್ ಸ್ಮಿತಾ ಹುಟ್ಟುಹಬ್ಬ.. ಮತ್ತೊಂದು ಬಯೋಪಿಕ್ ಅನೌನ್ಸ್.. ಅವರಂತೆ ನಟಿಸುವ ನಾಯಕಿ ಯಾರು ಗೊತ್ತಾ?

ಸಧ್ಯ ತುಕಾಲಿ ಸಂತು ಸಂಗೀತಾ ಶೃಂಗೇರಿ ಕುರಿತು ಮಾತನಾಡಿದ್ದ ಮಾತುಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಈ ಕುರಿತು ವಿಡಿಯೋ ಬಿಗ್‌ಬಾಸ್‌ ಹಂಚಿಕೊಂಡಿದ್ದು, ವಿಡಿಯೋ ನೋಡಿದ ಪ್ರೇಕ್ಷಕರು ಸಂತು ಅಭಿನಯ ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ.. ಹಾಗಿದ್ರೆ ವಿಡಿಯೋದಲ್ಲಿ ಏನಿದೆ ಅಂತ ನೋಡೋಣ ಬನ್ನಿ

ಸಂಗೀತಾ ಎಲಿಜಬೆತ್ ರಾಣಿ, ನಾವೇಲ್ಲ ಅವರ ಸೇವಕರು.. ಅವರು ಹೂಕುಂ.. ಈಗಿಂದೀಗಲೇ ಎಲ್ಲರೂ ಊರು ಬಿಟ್ಟು ತೊಲಗಿ, ಅಂದ ತಕ್ಷಣ ನಾವೆಲ್ಲ ಗಂಡು ಮೂಟೆ ಕಟ್ಕೊಂಡು.. ಈ ತರ ತಲೆಮೇಲೆ ಇಟ್ಕೊಂಡು ನಾಯಿ ಮರಿ ತರ ಹೋಗ್ಬೇಕು.. ಅಂತ ಸಂತು ಆಕ್ಟ್‌ ಮಾಡಿ ತೋರಿಸಿದರು.

ಇದನ್ನೂ ಓದಿ:ಪ್ರಭಾಸ್ ಆಧಾರ್ ಕಾರ್ಡ್ ನೋಡಿದ್ದೀರಾ.. ಡಾರ್ಲಿಂಗ್ ನಿಜವಾದ ವಯಸ್ಸು ಇದೇನಾ..?

ಅಲ್ಲದೆ, ಆ ಕಡೆಯಿಂದ ಇನ್ನೊಂದು ಮಾತು ಬರುತ್ತೆ.. ಸಂತು... ಪ್ರಜೆಗಳಲ್ಲೇ ಇಲ್ಲೆ ಇರ್ಬೇಕು ಅಂದಾಗ.. ಬಕ್‌..ಬಕ್‌.. ಬಕಾಕ್‌.. ಅಂತ ನೀವು ಹಣ್ಣ, ನಾನು ಗಂಧದ ಕಡ್ಡಿ ಪ್ರತಾಪ ಕರ್ಪೂರ ತಗೊಂಡು.. ದೇವಿ ತರ ಕೂತಿರ್ತಾಳೆ ಅವಳು, ನಾವು ಪೂಜೆ ಮಾಡಿ ಗಂಟೆ ಹೊಡೆದು ತಾಯಿ... ನಮ್ಮವ್ವ.. ನಾವ್‌ ಇವತ್ತು ಏನ್‌ ಮಾಡ್ಬೇಕವ್ವ.. ಬೆಳಿಗ್ಗೆ ಬೆಳಿಗ್ಗೆ ಎದ್ದು ಬಿಟ್ಟಿದಿವಿ ಅಂತ ಕೇಳ್ಬೇಕು

ಆಗ ಅವಳು, ಹೋಗಿ.. ಒಬ್ಬರು ಬಾತ್‌ ರೂಮ್‌ ತೊಳಿರಿ ಇನ್ನೋಬ್ಬರು ಟಾಯ್ಲೆಟ್‌ ಕ್ಲೀನ್‌ ಮಾಡಿ, ಮತ್ತೊಬ್ಬರು ಅನ್ನದ ಪಾತ್ರೆ ತೊಳಿರಿ ಅಂತಾರೆ.. ಅದ್ಯಾವುದು ನಡ್ಯಾಕಿಲ್ಲ ಇಲ್ಲಿ.. ಅಂತ ಸಂಗೀತಾ ಶೃಂಗೇರಿ ಕುರಿತು ಸಂತು ಡ್ರೋನ್‌ ಪ್ರತಾಪ್‌ ಮತ್ತು ಸಂತೋಷ್‌ ಮುಂದೆ ಹೇಳಿಕೊಂಡಿದ್ದಾರೆ. ತುಕಾಲಿ ಮಾತುಗಳು ಪ್ರೇಕ್ಷಕರಿಗೆ ನಗು ತರಿಸುವಂತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News