ಚುನಾವಣೆ ಬಗ್ಗೆ ಅಭಿಮಾನಿಯ ಕೋರಿಕೆಗೆ ಜಗ್ಗೇಶ್ ಉತ್ತರ ಏನ್ ಗೊತ್ತಾ?

ಜಗ್ಗು ದಾದಾ, ಈ ಬಾರಿ ಚುನಾವಣೆ ತುಂಬಾ ಮುಖ್ಯ ಎಂದಿರುವ ಅಭಿಮಾನಿ ನವರಸ ನಾಯಕ ಜಗ್ಗೇಶ್ ಅವರಿಗೆ ಒಂದು ಟಿಪ್ಸ್ ನೀಡಿದ್ದಾರೆ.

Last Updated : Mar 14, 2019, 09:08 AM IST
ಚುನಾವಣೆ ಬಗ್ಗೆ ಅಭಿಮಾನಿಯ ಕೋರಿಕೆಗೆ ಜಗ್ಗೇಶ್ ಉತ್ತರ ಏನ್ ಗೊತ್ತಾ?  title=
File Image

ಬೆಂಗಳೂರು: ಸದಾ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾ ನವರಸ ನಾಯಕ ಎಂದೇ ಖ್ಯಾತಿ ಪಡೆದಿರುವ ಜಗ್ಗೇಶ್, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಿನಿಮಾ ರಂಗದಲ್ಲಿ ಮಿಂಚಿರುವ ಈ ತಾರೆ, ರಾಜಕೀಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಇತ್ತೀಚಿಗೆ ಎಲ್ಲೆಡೆ, ಎಲ್ಲರ ಬಾಯಲ್ಲೂ ಲೋಕಸಭಾ ಚುನಾವಣೆಯದೇ ಮಾತು. ಅಂತೆಯೇ ಜಗ್ಗೇಶ್ ಅಭಿಮಾನಿಯೊಬ್ಬರು ಚುನಾವಣೆ ಕುರಿತು ಜಗ್ಗೇಶ್ ಅವರಿಗೆ ಕೋರಿಕೆಯೊಂದನ್ನು ಇಟ್ಟಿದ್ದು ಅದಕ್ಕೆ ಜಗ್ಗಣ್ಣನ ಉತ್ತರ ಏನು ಗೊತ್ತಾ?

ಟ್ವಿಟ್ಟರ್ ನಲ್ಲಿ ದಿವಾಕರ್ ಕೃಷ್ಣ ಎಂಬುವವರು, ಜಗ್ಗು ದಾದಾ , ಈ ಬಾರಿ ಚುನಾವಣೆ ತುಂಬಾ ಮುಖ್ಯ ( ನೀವ್ ಕಂಟೆಸ್ಟ್ ಮಾಡಿದ್ರೆ ನನಗಿಷ್ಟ ), ಆದರೆ ಶೂಟಿಂಗು ಮುಖ್ಯ, ಅದಕ್ಕೆ ಬೆಳಿಗ್ಗೆ ಪ್ರಚಾರ ಮಾಡಿ, ರಾತ್ರಿ ಶೂಟಿಂಗ್ ಅಟೆಂಡಾಗಿ, ಪ್ರೊಡ್ಯೂಸರ್ ಮಸ್ಟ್ ಬಿ ಹ್ಯಾಪಿ, ನಾವು ಮಸ್ಟ್ ಬಿ ಹ್ಯಾಪಿ, ಏನಂತೀರಾ , ಹಿಂದೆ ಕೂತಿದೀರಾ ಅಂತ ಕೈ ಬಿಟ್ಟೀರಾ /ಜೈ ಕರ್ನಾಟಕ ಮಾತೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್, ಚಿಂತೆ ಬೇಡ ಇಂದಿನಿಂದ ಏಪ್ರಿಲ್ 15ರ ವರೆಗೂ ನನ್ನ ಎಲ್ಲಾ ಚಿತ್ರೀಕರಣ ಬದಿಗೊತ್ತಿ ಭಾಜಪ ಅಭ್ಯರ್ಥಿ ಹಾಗೂ  @narendramodi ಪರವಾಗಿ ಎಷ್ಟು ಸಾಧ್ಯವೋ ಅಷ್ಟು ಶ್ರಮಿಸಿ ಪ್ರಚಾರದಲ್ಲಿ ಭಾಗಿಯಾಗುವೆ!
ನನ್ನಗುರಿ ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯೋದು ನೋಡೋದು.. ಜೈಹಿಂದ್..ವಂದೇಮಾತರಂ.. ಎಂದು ಅಭಯ ನೀಡಿದ್ದಾರೆ.

ಈ ಹಿಂದೆ ಅಂಗೈಯಲ್ಲೆ ಚಿನ್ನವಿದೆ!ಕನ್ನಡಿಯಲ್ಲಿ ನಿಕ್ಷೇಪ ತೋರುವರ ನಂಬದಿರಿ.! ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗೆಗೆ ಈ ರೀತಿ ಟ್ವೀಟ್ ಮಾಡಿದ್ದ ಜಗ್ಗೇಶ್, ಹಿಂದೆಮುಂದೆ ಕಿತ್ತುತಿನ್ನುವ ಬಂಧು ಬಳಗದ ಬಂಧನವಿಲ್ಲದೆ!ಭಾರತವೆ ನನ್ನ ಮನೆ ಭಾರತವಾಸಿಗಳೆ ನನ್ನಬಂಧುಗಳು ಎಂದು ಪ್ರಾಮಾಣಿಕವಾಗಿ ಭಾರತದ ಬೆಳವಣಿಗೆಗೆ ಶ್ರಮಿಸುತ್ತಿರುವ ಈ ಮಹನೀಯನನ್ನು ರಾಜಕೀಯ ಚದುರಂಗದ ಕುತಂತ್ರಕ್ಕೆ ಬಲಿಕೊಟ್ಟರೆ ನಮ್ಮರಾಷ್ಟ್ರ ಮತ್ತೆ ಹಿಂದುಳಿಯುತ್ತದೆ! ಅಂಗೈಯಲ್ಲೆ ಚಿನ್ನವಿದೆ!ಕನ್ನಡಿಯಲ್ಲಿ ನಿಕ್ಷೇಪ ತೋರುವರ ನಂಬದಿರಿ.! ಎಂದಿದ್ದರು.

ಎರಡು ಜೊತೆ ಬಟ್ಟೆಯೊಂದಿಗೆ ಬಂದ ಆತ, ಹೋಗುವಾಗಲೂ ಅಷ್ಟನ್ನೇ ಕೊಂಡೊಯ್ಯುತ್ತಾನೆ. ಅವನನ್ನು ಕಳೆದುಕೊಂಡರೆ ನಷ್ಟವಾಗುವುದು ನಮಗೆ ಮಾತ್ರ ಆತನಿಗಲ್ಲ ಎಂದು ಮೋದಿ ಅವರ ಸರಳತೆಯ ಚಿತ್ರವೊಂದನ್ನು ಹಂಚಿಕೊಂಡಿದ್ದರು.

 

Trending News