ಚಂದನವನದ "ಕ" ಅಕ್ಷರದ ಸಿನಿಮಾಗಳು ಇತಿಹಾಸದ ಪುಟ ಸೇರಿವೆ.ಇದೀಗ 'ಕಬ್ಜ' ಸಿನಿಮಾ ಕೂಡ ಅದೇ ಸಾಲಿನಲ್ಲಿ..!

"ಕ" ಅಕ್ಷರದಿಂದ ಶುರುವಾದ ಕೆಜಿಎಫ್ ,ಕಾಂತಾರ ಸಿನಿಮಾ ಕ್ರಿಯೇಟ್  ಹಿಸ್ಟರಿ ಮಾಡಿದೆ.. ಅದೇ ಸಾಲಿನಲ್ಲಿ ಇದೀಗ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹುನಿರೀಕ್ಷೆಯ 'ಕಬ್ಜ' ಸಿನಿಮಾ ಕೂಡ ಇತಿಹಾಸದ ಪುಟ ಸೇರೋ ಎಲ್ಲಾ ಲಕ್ಷಣ ಕಂಡುಬರುತ್ತಿದೆ.ಯೆಸ್ ಮಾರ್ಚ್ 17 ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದು "ಕಬ್ಜ" ಚಿತ್ರ ರಿಲೀಸ್ ಆಗುತ್ತಿದೆ.

Written by - YASHODHA POOJARI | Last Updated : Jan 25, 2023, 11:28 AM IST
  • "ಕ" ಅಕ್ಷರದಿಂದ ಶುರುವಾದ ಕೆಜಿಎಫ್ ,ಕಾಂತಾರ ಸಿನಿಮಾ ಕ್ರಿಯೇಟ್ ಹಿಸ್ಟರಿ ಮಾಡಿದೆ.
  • ಮಾರ್ಚ್ 17 ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದು "ಕಬ್ಜ" ಚಿತ್ರ ರಿಲೀಸ್
  • ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ
ಚಂದನವನದ "ಕ" ಅಕ್ಷರದ ಸಿನಿಮಾಗಳು ಇತಿಹಾಸದ ಪುಟ ಸೇರಿವೆ.ಇದೀಗ 'ಕಬ್ಜ' ಸಿನಿಮಾ ಕೂಡ ಅದೇ ಸಾಲಿನಲ್ಲಿ..! title=

"ಕ" ಅಕ್ಷರದಿಂದ ಶುರುವಾದ ಕೆಜಿಎಫ್ ,ಕಾಂತಾರ ಸಿನಿಮಾ ಕ್ರಿಯೇಟ್  ಹಿಸ್ಟರಿ ಮಾಡಿದೆ.. ಅದೇ ಸಾಲಿನಲ್ಲಿ ಇದೀಗ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹುನಿರೀಕ್ಷೆಯ 'ಕಬ್ಜ' ಸಿನಿಮಾ ಕೂಡ ಇತಿಹಾಸದ ಪುಟ ಸೇರೋ ಎಲ್ಲಾ ಲಕ್ಷಣ ಕಂಡುಬರುತ್ತಿದೆ.ಯೆಸ್ ಮಾರ್ಚ್ 17 ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದು "ಕಬ್ಜ" ಚಿತ್ರ ರಿಲೀಸ್ ಆಗುತ್ತಿದೆ. ಇತ್ತೀಚಿಗೆ ರಿಲೀಸ್ ಆಗಿರೋ ಕೆಜಿಎಫ್ ಪಾರ್ಟ್ 1 ಮತ್ತು 2 ಮಾಡಿದ ಮೋಡಿ ಎಂತದ್ದು ಅಂತ ನಿಮ್ಗೆ ಗೊತ್ತಿದೆ.

ಪ್ರತಿಯೊಬ್ಬರೂ ಮಾತನಾಡೋ ಲೆವೆಲ್ಲಿಗೆ ಹವಾ ಕ್ರಿಯೇಟ್ ಮಾಡಿದೆ. ಅದರ ಬೆನ್ನಲ್ಲೇ "ಕಾಂತಾರ" ಸಿನಿಮಾ ಕೂಡ ಭರ್ಜರಿ ಸಕ್ಸಸ್ ಮೂಲಕ ಯಶಸ್ ಕಂಡಿದೆ. ಸ್ಯಾಂಡಲ್‌ ವುಡ್‌ ನಲ್ಲಿ ಅದೇನೋ ಗೊತ್ತಿಲ್ಲ  ಇತ್ತೀಚಿಗೆ 'ಕ' ಅಕ್ಷರದ ಸಿನಿಮಾಗಳು ಸಖತ್ ಆಗೇ ಶೈನ್ ಆಗುತ್ತಿವೆ. ಅಂತೆಯೇ 'ಕಬ್ಜ' ಸಿನಿಮಾದ ಟೀಸರ್ ನೋಡಿ ಸಂಥಿಂಗ್ ಏನೋ ಈ ಸಿನಿಮಾದಲ್ಲಿದೆ ಅಂತ ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಈ ಟೈಟಲ್ ಕೂಡ ಕ ಅಕ್ಷರದಿಂದಲೇ ಶುರುವಾಗುತ್ತಿರೋದ್ರಿಂದ ಚಂದನವನಕ್ಕೆ 'ಕ' ಅಕ್ಷರದ ಸಿನಿಮಾಗಳು ಹೆಸ್ರು ತಂದುಕೊಡುತ್ತಿದೆ ಅಂತ ಗಾಂಧಿನಗರದ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Bholaa teaser : ಭೋಲಾ ಟೀಸರ್‌ ರಿಲೀಸ್‌.. ಅಜಯ್‌ ಹೈ-ಫ್ಲೈಯಿಂಗ್ ಆಕ್ಷನ್‌ಗೆ ಪ್ರೇಕ್ಷಕ ಫಿದಾ..!
 ಕಬ್ಜ ಸಿನಿಮಾದ   ಬಿಡುಗಡೆ ದಿನಾಂಕವು ಘೋಷಣೆಯಾದ ಕೆಲವೇ ಕ್ಷಣದಲ್ಲಿ ಕಬ್ಜ ಚಿತ್ರವು ಟ್ವಿಟರ್ ಟ್ರೆಂಡಿಂಗ್'ನಲ್ಲಿ #1 ಸ್ಥಾನದಲ್ಲಿ ರಾರಾಜಿಸುತ್ತಿದೆ.ಇದು ಕನ್ನಡ ಸಿನಿಮಾದ ತಾಕತ್ತು  ಅನ್ನೋದು ನಮ್ಮ ಖುಷಿ. ಕಬ್ಜ ಸಿನಿಮಾದಲ್ಲಿ ಉಪ್ಪಿ ಇಲ್ಲಿಯವರೆಗೆ ಕಾಣದ ಲುಕ್ ನಲ್ಲಿ ನೀವು ಅವರನ್ನ ಕಂಡು ಥ್ರಿಲ್ ಆಗಬೋದು.

ಇದನ್ನೂ ಓದಿ: ಕ್ರೈಮ್ ಥ್ರಿಲ್ಲರ್ ಜಾನರ್ ಸಿನಿಮಾ "ಜ್ಯೂಲಿಯೆಟ್ 2" ಟೀಸರ್ ರಿಲೀಸ್...!
ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News