ಮತ್ಸ್ಯಗಂಧದ ಕಡಲ ಒಡಲ ಮೇಲೆ ಹಾಡು ರಿಲೀಸ್ : ಕರಾವಳಿ ಸೊಗಡು ಸಾರುವ ಬಹುನೀರಿಕ್ಷಿತ ಚಿತ್ರ 23ಕ್ಕೆ ಬಿಡುಗಡೆ

ಮತ್ಸ್ಯ ಗಂಧ ಚಿತ್ರತಂಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸುತ್ತಿದೆ. ಇದೇ ತಿಂಗಳ 23ಕ್ಕೆ ಚಿತ್ರ ರಾಜ್ಯದಾದ್ಯಂತ ರಿಲೀಸ್  ಆಗುತ್ತಿದೆ. 

Written by - Ranjitha R K | Last Updated : Feb 8, 2024, 01:36 PM IST
  • ನಿರೀಕ್ಷೆ ಹುಟ್ಟಿಸಿದೆ ಭರವಸೆ ಹೆಚ್ಚಿಸಿದೆ ಮತ್ಸ್ಯಗಂಧ
  • ಚಿತ್ರದ ಕಡಲ ಒಡಲ ಹಾಡು ರಿಲೀಸ್
  • ಫೆ 23ಕ್ಕೆ ರಾಜ್ಯದಾದ್ಯಂತ ಚಿತ್ರ ಬಿಡುಗಡೆ
ಮತ್ಸ್ಯಗಂಧದ ಕಡಲ ಒಡಲ ಮೇಲೆ ಹಾಡು ರಿಲೀಸ್  : ಕರಾವಳಿ ಸೊಗಡು ಸಾರುವ ಬಹುನೀರಿಕ್ಷಿತ ಚಿತ್ರ 23ಕ್ಕೆ ಬಿಡುಗಡೆ  title=

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಮತ್ಸ್ಯಗಂಧ ಘಮಲು ದಿನೇ ದಿನೇ ಹೆಚ್ಚಾಗ್ತಿದೆ. ಚಿತ್ರಮಂದಿರದಲ್ಲಿ ಭರ್ಜರಿ ಮೀನೂಟಕ್ಕೆ ಎಲೆ ಹಾಸಲಾಗ್ತಿದೆ.ಮತ್ಸ್ಯಗಂಧ ಅಡುಗೆಯ ಪರಿಮಳ ಪ್ರೇಕ್ಷಕರ ಬಾಯಲ್ಲಿ ನೀರೂರಿಸುತ್ತಿದೆ.ಅಂತಹ ಬಗೆ ಬಗೆಯ ಕಂಟೆಂಟ್ಸ್ ಗಳನ್ನ ಚಿತ್ರತಂಡ ಒಂದೊಂದಾಗಿ ರಿಲೀಸ್ ಮಾಡ್ತಿದೆ.

ಇಂದು ಕಡಲ ಒಡಲ ಮೇಲೆ.. ಅನ್ನೋ ಸೊಗಡು ಭರಿತ ಉತ್ತರ ಕನ್ನಡ ಪರಿಸರ ಸಂಸ್ಕೃತಿ ಹಾಗೂ ಅಲ್ಲಿನ ಬದುಕಿನ ಚಿತ್ರಣವನ್ನ ಸಾರಿ ಹೇಳುವ ಹಾಡು ರಿಲೀಸ್ ಆಗಿದೆ. ಪ್ರಶಾಂತ್ ಸಿದ್ದಿ ಸಂಗೀತ, ದೇವರಾಜ್ ಪೂಜಾರಿ ಸಾಹಿತ್ಯ, ಹೇಮಂತ್ ಹಾಡಿರೋ ಈ ಹಾಡು ಮತ್ಸ್ಯಗಂಧ ಚಿತ್ರದ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ : Nethra Jadhav: ಮಾರ್ಡನ್‌ ಡ್ರೆಸ್‌ನಲ್ಲಿ 'ಶ್ರೀರಸ್ತು ಶುಭಮಸ್ತು' ಶಾರ್ವರಿ ಕಂಡ ನೆಟ್ಟಿಗರು ಶಾಕ್‌!

ಈಗಾಗಲೇ  ಮತ್ಸ್ಯಗಂಧ ಟೀಸರ್ 1.4 ಮಿಲಿಯನ್ ವ್ಯುವ್ಸ್ ದಾಟಿದೆ. ಭಾಗೀರಥಿ ಹಾಡು ಕೂಡಾ ಮಿಲಿಯನ್ ವ್ಯುವ್ಸ್ ಸನಿಹದಲ್ಲಿದೆ. ಕುವ್ವಾ ಕುವ್ವಾ ಕ್ಲಿಕ್ ಆಗಿದೆ. ಇದರ ಜೊತೆಗೆ ಮತ್ಸ್ಯ ಗಂಧ ಚಿತ್ರತಂಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸುತ್ತಿದೆ. ಇದೇ ತಿಂಗಳ 23ಕ್ಕೆ ಚಿತ್ರ ರಾಜ್ಯದಾದ್ಯಂತ ರಿಲೀಸ್  ಆಗುತ್ತಿದೆ. 

ಇದೀಗ ರಿಲೀಸ್ ಆಗಿರುವ ಕಡಲ ಒಡಲ ಹಾಡು ಚಿತ್ರದ ಥೀಮನ್ನು ವಿವರಿಸುತ್ತಿದೆ. ಈ ಹಾಡು ಮತ್ಸ್ಯಗಂಧದ ಮೇಲಿನ ನಿರೀಕ್ಷೆ ಹೆಚ್ಚಿಸುತ್ತಿದೆ. 

ಇದನ್ನೂ ಓದಿ : Vinod Prabhakar: ಮರಿ ಟೈಗರ್ ಕ್ಯಾರಾವನ್‌ನಲ್ಲಿ ಅಪ್ಪು ಫೋಟೋ: ಇದರ ಹಿಂದಿರುವ ರಹಸ್ಯವೇನು?

ಕನ್ನಡ ಪಿಚ್ಚರ್ ಅರ್ಪಿಸುವ  ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್  ನಿರ್ಮಾಣದಲ್ಲಿ ಮತ್ಸ್ಯಗಂಧ ಸಿದ್ದವಾಗಿದೆ. ಈ ಚಿತ್ರವನ್ನ ದೇವರಾಜ್ ಪೂಜಾರಿ ನಿರ್ದೇಶಿಸಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ್ ಛಾಯಾಗ್ರಹಣ ಚಿತ್ರಕ್ಕಿದ್ದು, ಪೃಥ್ವಿ ಅಂಬರ್, ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ತಾರಾಬಳಗ  ಈ ಚಿತ್ರದಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News