ಹೆಣ್ಣಿನೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಪಾತ್ರ ಮಾಡಲು ನಟ ಭಯಂಕರ ವಜ್ರಮುನಿ ʼಈʼ ಕಂಡಿಷನ್‌ ಹಾಕುತ್ತಿದ್ದರಂತೆ!!

 Actor Vajramuni: ಕನ್ನಡ ಚಿತ್ರರಂಗ ಕಂಡ ಮಹಾನ್‌ ಕಲಾವಿದರಲ್ಲಿ ನಟ ಭಯಂಕರ ವಜ್ರಮುನಿ ಕೂಡ ಒಬ್ಬರು.. ಇವರ ಅತ್ಯದ್ಭುತ ನಟನೆಗೆ ಮಾರು ಹೋಗದವರೇ ಇಲ್ಲ.. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಟನೆಯೇ ಅಲ್ಲ ಎಂಬುವಂತೆ ಅಭಿನಯಿಸುತ್ತಿದ್ದ ದಿಗ್ಗಜ ನಟರ ಪೈಕಿ ಇವರೂ ಒಬ್ಬರು ಎಂದರೇ ತಪ್ಪಾಗುವುದಿಲ್ಲ.. 

Written by - Savita M B | Last Updated : May 7, 2024, 05:35 PM IST
  • ಸ್ಯಾಂಡಲ್‌ವುಡ್‌ ಖಡಕ್‌ ವಿಲನ್‌ಗಳಲ್ಲಿ ಅಗ್ರಸ್ಥಾನದಲ್ಲಿ ಬರೋದು ನಟಭಯಂಕರ ವಜ್ರಮುನಿ
  • ದ್ಭುತ ಕಲೆಯನ್ನು ಹೊಂದಿದ್ದ ಕನ್ನಡ ಚಿತ್ರರಂಗದ ಮಹಾನ್‌ ಕಲಾವಿದ ವಜ್ರಮುನಿ..
ಹೆಣ್ಣಿನೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಪಾತ್ರ ಮಾಡಲು ನಟ ಭಯಂಕರ ವಜ್ರಮುನಿ ʼಈʼ ಕಂಡಿಷನ್‌ ಹಾಕುತ್ತಿದ್ದರಂತೆ!! title=

Vajramuni: ಸ್ಯಾಂಡಲ್‌ವುಡ್‌ ಖಡಕ್‌ ವಿಲನ್‌ಗಳಲ್ಲಿ ಅಗ್ರಸ್ಥಾನದಲ್ಲಿ ಬರೋದು ನಟಭಯಂಕರ ವಜ್ರಮುನಿ.. ತಮ್ಮ ಕಣ್ಣಿನ ಮೂಲಕವೇ ಅದ್ಭುತವಾಗಿ ಅಭಿನಯ ಮಾಡಿ ಎದುರಿಗಿರುವ ವ್ಯಕ್ತಿಯನ್ನು ಎದರಸಬಲ್ಲ ನಟ ಎಂದರೇ ಅದು ವಜ್ರಮುನಿ..

ನಟ ವಜ್ರಮುನಿ ಮಾಡಿರುವ ಎಲ್ಲ ಪಾತ್ರಗಳು ಇಂದಿಗೂ ಅಷ್ಟೇ ಕ್ರೇಜ್‌ ಹೊಂದಿವೆ.. ಅವರಂತೆ ಈವರೆಗೆ ಯಾರೂ ವಿಲನ್‌ ಪಾತ್ರವನ್ನು ನಿಭಾಯಿಸಲು ಸಾಧ್ಯವಾಗಿಲ್ಲ ಎಂದರೇ ತಪ್ಪಾಗುವುದಿಲ್ಲ.. ಅಂತಹ ಅದ್ಭುತ ಕಲೆಯನ್ನು ಹೊಂದಿದ್ದ ಕನ್ನಡ ಚಿತ್ರರಂಗದ ಮಹಾನ್‌ ಕಲಾವಿದ ವಜ್ರಮುನಿ..

ಇದನ್ನೂ ಓದಿ-Lakshmi nivasa serial: ಲಕ್ಷ್ಮಿ ನಿವಾಸ ಸಿರೀಯಲ್‌ ನಟಿ ಮಂಗಳ ನಿಜವಾದ ಹೆಸರೇನು ಗೊತ್ತಾ? ಇವರು ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ ಗೊತ್ತಾ?
 
ಅದ್ಭುತ ನಟನಾ ಕೌಶಲ್ಯದ ಮೂಲಕವೇ ಕನ್ನಡ ಚಿತ್ರರಂಗ ಕಂಡ ಗಣ್ಯವ್ಯಕ್ತಿಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ.. ತಮ್ಮದೇ ಆದ ಕಲೆಯ ಮೂಲಕ ಸಾಕಷ್ಟು ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದ ಇವರು ಯಾವುದೇ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸುವ ಪಾತ್ರ ಮಾಡುವ ಸನ್ನಿವೇಶ್‌ ಬಂದಾಗ ಒಂದು ಕಂಡೀಷನ್‌ ಹಾಕುತ್ತಿದ್ದರಂತೆ.. 

ಇದನ್ನೂ ಓದಿ-ವಿಷ್ಣುವರ್ಧನ್ ಕೈಗೆ ಧರಿಸುತ್ತಿದ್ದ ಕಡಗ ನೀಡಿದ್ದು ಇವರೇ ! ಈಗ ಯಾರ ಬಳಿ ಇದೆ ಗೊತ್ತಾ ಅದು ?

ಹೌದು ನಟ ವಜ್ರಮುನಿ ಹೆಚ್ಚಾಗಿ ರೋರಿಂಗ್‌ ಕ್ಯಾರೆಕ್ಟರ್‌ಗಳಲ್ಲಿಯೇ ಮಿಂಚಿದ್ದಾರೆ.. ಆದರೆ ನಿಜ ಜೀವನದಲ್ಲಿ ಸಾಕಷ್ಟು ಒಳ್ಳೆಯ ಮನುಷ್ಯರಾಗಿದ್ದರು.. ಶಾಂತ ಸ್ವಭಾವವುಳ್ಳವರಾಗಿದ್ದ ವಜ್ರಮುನಿ ನಟಿಯರೊಂದಿಗೆ ನೆಗೆಟಿವ್‌ ಪಾತ್ರ ಮಾಡುವಾಗ ಶೂಟಿಂಗ್‌ ಮೊದಲು ಅವರ ಬಳಿ ಹೋಗಿ "ಕೈ ಮುಗಿದು ಇದು ನನ್ನ ವೃತ್ತಿ, ನನ್ನ ಧರ್ಮವನ್ನು ನಾನು ಮಾಡಲೇಬೇಕು ಪಾತ್ರಕ್ಕಾಗಿ ನಾನು ಈ ದೃಶ್ಯದಲ್ಲಿ ಹಾಗೇ ನಟಿಸಬೇಕಿದೆ ಬೇಸರ ಮಾಡಿಕೊಳ್ಳಬೇಡಿ.. ಏನಾದರೂ ಅಚಾತುರ್ಯವೆದುರಾದರೆ ನನ್ನನ್ನು ಕ್ಷಮಿಸಿ" ಎಂದು ಕೇಳಿಕೊಳ್ಳುತ್ತಿದ್ದರಂತೆ.. 

ಇಷ್ಟೇ ಅಲ್ಲ ಇಂತಹ ಪಾತ್ರಗಳಿಂದ ನಟಿಯರಿಗೆ ಯಾವುದೇ ತೊಂದರೆಯಾಗದಂತೆ ನಟಿಸುವ ಮುನ್ನ ಮತ್ತು ನಟಿಸಿದ ಮೇಲೆ ಹೋಗಿ ಅವರಲ್ಲಿ ಕ್ಷಮೆಯಾಚಿಸುತ್ತಿದ್ದರಂತೆ.. ಹೀಗೆ ನಟ ವಜ್ರಮುನಿ ನಿಜಜೀವನದಲ್ಲಿ ಅಪ್ಪಟ ಬಂಗಾರದಂತಿದ್ದರು.. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News