Vikram Accident : ನಟ ವಿಕ್ರಮ್‌ಗೆ ಅಪಘಾತ : ಪಕ್ಕೆಲುಬು ಮುರಿತ, ಆಸ್ಪತ್ರೆಗೆ ದಾಖಲು

Vikram Thangalaan : ಕಾಲಿವುಡ್‌ ನಟ ಚಿಯಾನ್‌ ವಿಕ್ರಮ್‌ ಪಾತ್ರಕ್ಕೆ ತಕ್ಕಂತೆ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಪ್ರವೃತ್ತಿ ವಿಕ್ರಮ್‌ ಹೊಂದಿದ್ದಾರೆ. ಎಷ್ಟೇ ಕಷ್ಟವಾದ್ರೂ ಸಹ ಕಥೆಗೆ ನ್ಯಾಯ ಒದಗಿಸುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಕೆಲವೊಂದು ಸಮಯದಲ್ಲಿ ಸಾಹಸ ದೃಶ್ಯಗಳ ಶೂಟಿಂಗ್‌ ವೇಳೆ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದುಂಟು. ಇದೀಗ ಮತ್ತೇ ಅವರು ತಂಗಳನ್‌ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Written by - Krishna N K | Last Updated : May 3, 2023, 01:42 PM IST
  • ಶೂಟಿಂಗ್‌ ವೇಳೆ ತಮಿಳು ನಟ ವಿಕ್ರಮ್‌ಗೆ ಗಂಭೀರ ಗಾಯ.
  • ತಂಗಳನ್‌ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
  • ವಿಶ್ರಾಂತಿ ಪಡೆಯಬೇಕಿರುವ ಕಾರಣ ಚಿತ್ರದ ಶೂಟಿಂಗ್‌ಗೆ ಬ್ರೇಕ್‌ ನೀಡಲಾಗಿದೆ.
 Vikram Accident : ನಟ ವಿಕ್ರಮ್‌ಗೆ ಅಪಘಾತ : ಪಕ್ಕೆಲುಬು ಮುರಿತ, ಆಸ್ಪತ್ರೆಗೆ ದಾಖಲು title=

Vikram Accident : ತಮಿಳು ನಟ ಚಿಯಾನ್ ವಿಕ್ರಮ್ ಸದ್ಯ ಪಾ ರಂಜಿತ್ ನಿರ್ದೇಶನದ ʼತಂಗಲಾನ್‌ʼ ಎಂಬ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈಗ ಈ ಸಿನಿಮಾದ ಶೂಟಿಂಗ್ ನಿಲ್ಲಿಸಲಾಗಿದೆಯಂತೆ. ಶೂಟಿಂಗ್ ವೇಳೆ ವಿಕ್ರಮ್ ಗಾಯಗೊಂಡಿದ್ದು, ಅವರ ಪಕ್ಕೆಲುಬುಗಳು ಮುರಿದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ವಿಕ್ರಮ್‌ಗೆ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಿರುವ ಕಾರಣ ಚಿತ್ರದ ಶೂಟಿಂಗ್‌ಗೆ ಬ್ರೇಕ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ.

ತಂಗಲಾನ್‌ ಸಿನಿಮಾವನ್ನು ಜ್ಞಾನವೇಲ್ ರಾಜ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂಗೀತ ಜಿವಿ ಪ್ರಕಾಶ್‌ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಂಗಲಾನ್‌ ಚಿತ್ರದಲ್ಲಿ ಪಾರ್ವತಿ, ಮಾಳವಿಕಾ ಮೋಹನನ್, ಪಶುಪತಿ, ಹರಿ ಮತ್ತು ಬ್ರಿಟಿಷ್ ನಟ ಡೇನಿಯಲ್ ಕ್ಯಾಲ್ಟಗಿರೋನ್ ನಟಿಸಿದ್ದಾರೆ. ಕಳೆದ ವರ್ಷ ಪ್ರಾರಂಬವಾದ ಸಿನಿಮಾದ ಶೂಟಿಂಗ್, ಇನ್ನೂ ಸಾಗುತ್ತಿದೆ. ಇತ್ತೀಚೆಗಷ್ಟೇ ವಿಕ್ರಮ್ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಪೋಸ್ಟರ್‌ಗಳು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. 

ಇದನ್ನೂ ಓದಿ: ದಿ ಕೇರಳ ಸಿನಿಮಾ ಇಷ್ಟವಾದರೇ ಅದುವೇ ನಮಗೆ ದೊಡ್ಡ ಬಹುಮಾನ - ನಿರ್ದೇಶಕ ಸುದೀಪ್ತೋ ಸೇನ್

ವಿಕ್ರಮ್‌ ಕಥೆಯಗಾಗಿ ಸಂಪೂರ್ಣವಾಗಿ ಬದಲಾಗಿದೆ. ಪಾತ್ರಕ್ಕೆ ತಕ್ಕಂತೆ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಪ್ರವೃತ್ತಿ ವಿಕ್ರಮ್‌ ಅವರದ್ದು. ಈ ಚಿತ್ರದ ಟ್ರೈಲರ್‌ ನೋಡಿದ್ರೆ, ಅಸಲಿಗೆ ಇದು ವಿಕ್ರಮ್‌ ಅವರೇನಾ ಎಂದು ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಆದರೆ ಈಗ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ತಂಗಳನ್‌ಗಾಗಿ ಅಭ್ಯಾಸ ಮಾಡುವಾಗ ಪಕ್ಕೆಲುಬು ಮುರಿತವಾಗಿದ್ದು, ಚೆನ್ನೈನ ಪ್ರಸಿದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಪಕ್ಕೆಲುಬು ಮುರಿತದಿಂದಾಗಿ ಅವರು ಕೆಲವು ದಿನಗಳವರೆಗೆ ವಿಶ್ರಾಂತಿ ಪಡೆಯಬೇಕಿದೆ. ಆರೋಗ್ಯ ಸುಧಾರಣೆ ಬಳಿಕ ಮತ್ತೆ ವಿಕ್ರಮ್ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆಯಂತೆ. ಸದ್ಯ ವಿಕ್ರಮ್ ಅಭಿಮಾನಿಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಈ ಅವಘಡದಿಂದಾಗಿ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ವಿಕ್ರಮ್ ಸೀರಿಯಸ್ ಆಗಿಲ್ಲ, ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾಗಿ ತಿಳಿದು ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News