ಮೀಟೂದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹೆಸರು! ಖುಷ್ಬೂ ಕೊಟ್ಟ ಉತ್ತರವೇನು ಗೊತ್ತೇ?

ದೇಶಾದ್ಯಂತ ಈಗ ಮೀಟೂ ಎಲ್ಲ ವಲಯದಲ್ಲೂ ಬಿರುಗಾಳಿ ಎಬ್ಬಿಸಿದೆ.ಅದರಲ್ಲೂ ಈಗ ಸಿನಿಮಾ ಕ್ಷೇತ್ರದಲ್ಲಿ ಈ ಅಭಿಯಾನ ಮಾಡುತ್ತಿರುವ ಎಫೆಕ್ಟ್ ನಿಂದಾಗಿ  ದೊಡ್ಡ ದೊಡ್ಡ  ತಾರಾಮಣಿಗಳು  ಮೀಟೂ ಬಲೆಯಲ್ಲಿ ಸಿಲುಕಿದ್ದಾರೆ.

Last Updated : Oct 14, 2018, 05:31 PM IST
ಮೀಟೂದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹೆಸರು! ಖುಷ್ಬೂ ಕೊಟ್ಟ ಉತ್ತರವೇನು ಗೊತ್ತೇ? title=

ಬೆಂಗಳೂರು: ದೇಶಾದ್ಯಂತ ಈಗ ಮೀಟೂ ಎಲ್ಲ ವಲಯದಲ್ಲೂ ಬಿರುಗಾಳಿ ಎಬ್ಬಿಸಿದೆ.ಅದರಲ್ಲೂ ಈಗ ಸಿನಿಮಾ ಕ್ಷೇತ್ರದಲ್ಲಿ ಈ ಅಭಿಯಾನ ಮಾಡುತ್ತಿರುವ ಎಫೆಕ್ಟ್ ನಿಂದಾಗಿ  ದೊಡ್ಡ ದೊಡ್ಡ  ತಾರಾಮಣಿಗಳು  ಮೀಟೂ ಬಲೆಯಲ್ಲಿ ಸಿಲುಕಿದ್ದಾರೆ.

ಈಗ ಇದೇ ಮೀಟೂ ವಿಚಾರವಾಗಿ ಟ್ವಿಟ್ಟರ್ ನಲ್ಲಿ  ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೆಸರನ್ನು ಖುಷ್ಬೂ ಅವರಿಗೆ ತಗುಲು ಹಾಕಿದ್ದಕ್ಕೆ ಖುಷ್ಬೂ ತಕ್ಷಣ ಉತ್ತರಿಸಿದ್ದಾಳೆ. ಅಷ್ಟಕ್ಕೂ  ಖುಷ್ಬೂ ಅವರು ನೀಡಿದ ಉತ್ತರ ನಿಮಗೆ ನಿಜಕ್ಕೂ ರವಿಚಂದ್ರನ್ ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸುತ್ತದೆ.

ಖುಷ್ಬೂ ತಮ್ಮ ಟ್ವೀಟ್ ನಲ್ಲಿ  ಪ್ರತಿಕ್ರಿಯಿಸುತ್ತಾ" ಇವತ್ತು  ನನ್ನ ತಾಯಿ ಬದುಕಿದ್ದರೆ ಅದಕ್ಕೆ ಕಾರಣ ವಿ ರವಿಚಂದ್ರನ್ ಮತ್ತು  ಅವರ ತಂದೆ ಎನ್ ವೀರಸ್ವಾಮಿ. ಅವರು ಉದಾರ ದಾನಿ ಮತ್ತು ಅವರೊಬ್ಬ ಉತ್ತಮ ಆತ್ಮವನ್ನು ಹೊಂದಿರುವ ವ್ಯಕ್ತಿ, ಬಹುತೇಕರಿಗೆ ಅವರು ನಿಜವಾದ ಸ್ನೇಹಿತ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ "ಎಂದು ಟ್ವೀಟರ ನಲ್ಲಿ  ಉತ್ತರಿಸಿದ್ದಾರೆ.,

 

Trending News