ಕರೋನಾ ಮಾರ್ಗಸೂಚಿ ಉಲ್ಲಂಘನೆ: ಉತ್ತರಖಂಡದ ಮಾಜಿ ಸಿಎಂ ಹರೀಶ್ ರಾವತ್ ವಿರುದ್ಧ ಕೇಸ್

ಕರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹರಿದ್ವಾರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಮೂವರು ಕಾಂಗ್ರೆಸ್ ಶಾಸಕರು ಮತ್ತು 150 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

Last Updated : Aug 18, 2020, 12:13 AM IST
ಕರೋನಾ ಮಾರ್ಗಸೂಚಿ ಉಲ್ಲಂಘನೆ: ಉತ್ತರಖಂಡದ ಮಾಜಿ ಸಿಎಂ ಹರೀಶ್ ರಾವತ್ ವಿರುದ್ಧ ಕೇಸ್ title=
file photo(PTI)

ನವದೆಹಲಿ: ಕರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹರಿದ್ವಾರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಮೂವರು ಕಾಂಗ್ರೆಸ್ ಶಾಸಕರು ಮತ್ತು 150 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದು  ಎತ್ತಿನ ಗಾಡಿ ರ್ಯಾಲಿಯನ್ನು ಎನ್‌ಎಚ್ -58 ಉತ್ತರಾಖಂಡವನ್ನು ದೆಹಲಿಯೊಂದಿಗೆ ಸಂಪರ್ಕಿಸುವ ಮಾರ್ಗ ದಲ್ಲಿ ನಡೆಸಿದರು.ಅವರೊಂದಿಗೆ ಭಗವಾನ್‌ಪುರ ಶಾಸಕ ಮಮತಾ ರಾಕೇಶ್, ಮಾಂಗ್ಲೌರ್ ಶಾಸಕ ಖಾಜಿ ನಿಜಾಮುದ್ದೀನ್ ಮತ್ತು ಕಲಿಯಾರ್ ಶಾಸಕ ಫರ್ಕನ್ ಅಹ್ಮದ್ ಸಾಥ್ ನೀಡಿದರು.

ಸಾಮಾಜಿಕ ಅಂತರದ ಮಾನದಂಡಗಳು ಮತ್ತು ಕೊರೋನಾ-19 ಮಾರ್ಗಸೂಚಿಗಳನ್ನು ಉಲ್ಲಂಘಿಸುವ ರ್ಯಾಲಿಗೆ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸೆಂಥಿಲ್ ಅವುದೈ ಕೃಷ್ಣ ರಾಜ್ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಆದೇಶಿಸಲು ಅಸಹಕಾರ) ಮತ್ತು 150 (ಕಾನೂನುಬಾಹಿರ ಸಭೆ) ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದೆ.

ಡೆಹ್ರಾಡೂನ್‌ನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬನ್ಸಿಧರ್ ಭಗತ್ ಅವರು ಮಾಜಿ ಮುಖ್ಯಮಂತ್ರಿಯನ್ನು "ಮಾಧ್ಯಮಗಳ ಗಮನ ಸೆಳೆಯಲು ಜನರ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ" ಎಂದು ಟೀಕಿಸಿದರು.

Trending News