ನವದೆಹಲಿ: ಜೂನ್ 1 ರಿಂದ ಪಶ್ಚಿಮ ಬಂಗಾಳದ ಎಲ್ಲಾ ಧಾರ್ಮಿಕ ಸ್ಥಳಗಳು ತೆರೆದುಕೊಳ್ಳಲಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಲಾಕ್ಡೌನ್ 4 ಕೊನೆಗೊಳ್ಳಲು ಎರಡು ದಿನಗಳ ಮೊದಲು ಧಾರ್ಮಿಕ ಸ್ಥಳಗಳು ಮತ್ತೆ ತೆರೆಯಲಿವೆ, ಆದರೆ 10 ಕ್ಕಿಂತ ಹೆಚ್ಚು ಜನರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಘೋಷಿಸಿದರು.
ಚಹಾ ಮತ್ತು ಸೆಣಬಿನ ಉದ್ಯಮವು ಜೂನ್ 1 ರಿಂದ ಶೇ100 ರಷ್ಟು ಕಾರ್ಮಿಕರೊಂದಿಗೆ ತೆರೆಯಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಇದೇ ವೇಳೆ ಅವರು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.