'ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ' ಸಂದೇಶ ರವಾನಿಸಿದ ರಾಷ್ಟ್ರಪತಿ ಕೊವಿಂದ್

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು 71ನೇ ಗಣರಾಜ್ಯೋತ್ಸವದ ಮುನ್ನಾ ದಿನದಂದು ರಾಷ್ಟ್ರವನ್ನುದ್ದೇಶಿಸಿ ಸಂವಿಧಾನದ ಆದರ್ಶಗಳನ್ನು ಎತ್ತಿಹಿಡಿಯುವ ಬಗ್ಗೆ ಒತ್ತಿ ಹೇಳಿದರು.

Last Updated : Jan 25, 2020, 08:13 PM IST
 'ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ' ಸಂದೇಶ ರವಾನಿಸಿದ ರಾಷ್ಟ್ರಪತಿ ಕೊವಿಂದ್  title=
Photo courtesy: Twitter

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು 71ನೇ ಗಣರಾಜ್ಯೋತ್ಸವದ ಮುನ್ನಾ ದಿನದಂದು ರಾಷ್ಟ್ರವನ್ನುದ್ದೇಶಿಸಿ ಸಂವಿಧಾನದ ಆದರ್ಶಗಳನ್ನು ಎತ್ತಿಹಿಡಿಯುವ ಬಗ್ಗೆ ಒತ್ತಿ ಹೇಳಿದರು.

ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ಪಾಲಿಸುವುದು ದೇಶದ ಜನರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ರಾಷ್ಟ್ರದ ಯುವಕರು ಒಂದು ಕಾರಣಕ್ಕಾಗಿ ಹೋರಾಡುವಾಗ, ಮಹಾತ್ಮ ಗಾಂಧಿ ಮಾನವೀಯತೆಗೆ ನೀಡಿದ ಅಹಿಂಸಾ ಉಡುಗೊರೆಯನ್ನುಮರೆಯಬಾರದು ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದರು.

"ನಮ್ಮ ಸಂವಿಧಾನವು ಮುಕ್ತ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಾಗಿ ನಮಗೆ ಹಕ್ಕುಗಳನ್ನು ನೀಡಿತು, ಆದರೆ ನಮ್ಮ ಪ್ರಜಾಪ್ರಭುತ್ವದ ಕೇಂದ್ರ ಸಿದ್ಧಾಂತಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸದಾ ಪಾಲಿಸುವ ಜವಾಬ್ದಾರಿಯನ್ನು ನಮ್ಮ ಮೇಲೆ ಇದೆ" ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

"ನಮ್ಮ ರಾಷ್ಟ್ರಪಿತ ಗಾಂಧೀಜಿಯವರ ಜೀವನ ಮತ್ತು ಮೌಲ್ಯಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಂಡರೆ ಈ ಸಾಂವಿಧಾನಿಕ ಆದರ್ಶಗಳನ್ನು ಅನುಸರಿಸುವುದು ನಮಗೆ ಸುಲಭವಾಗುತ್ತದೆ. ಹಾಗೆ ಮಾಡುವುದರಿಂದ, ಗಾಂಧೀಜಿ ಅವರ 150 ನೇ ಜನ್ಮದಿನಾಚರಣೆಯ ಆಚರಣೆಗಳಿಗೆ ನಾವು ಅರ್ಥಪೂರ್ಣ ಆಯಾಮವನ್ನು ಸೇರಿಸುತ್ತೇವೆ, 'ಎಂದು ಹೇಳಿದರು.

ರಾಷ್ಟ್ರಪಟಿ ಕೋವಿಂದ್ ಅವರು ಮಹಾತ್ಮ ಗಾಂಧಿಯವರ ಆದರ್ಶಗಳು ದೇಶದಲ್ಲಿ ಪ್ರಸ್ತುತವಾಗಿವೆ, ಮತ್ತು ಅವರ ಸತ್ಯ ಮತ್ತು ಅಹಿಂಸೆಯ ಸಂದೇಶವನ್ನು ಜನಸಾಮಾನ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗೆ ಸರ್ಕಾರ ಮತ್ತು ಪ್ರತಿಪಕ್ಷಗಳು ತಮ್ಮ "ತಾಲಿಸ್ಮನ್" ಅನ್ನು ಅನ್ವಯಿಸಬಹುದು, ಅವರು ದೇಶದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

"ಒಂದು ಕ್ರಿಯೆ ಸರಿ ಅಥವಾ ತಪ್ಪು ಎಂದು ನಿರ್ಧರಿಸುವ ಗಾಂಧೀಜಿಯ ತಾಲಿಸ್ಮನ್ ನಮ್ಮ ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗೆ ಸಹ ಅನ್ವಯಿಸುತ್ತದೆ. ಸರ್ಕಾರ ಮತ್ತು ವಿರೋಧ ಎರಡೂ ಪ್ರಮುಖ ಪಾತ್ರಗಳನ್ನು ಹೊಂದಿವೆ. ತಮ್ಮ ರಾಜಕೀಯ ವಿಚಾರಗಳಿಗೆ ಅಭಿವ್ಯಕ್ತಿ ನೀಡುವಾಗ, ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಇಬ್ಬರೂ ಒಟ್ಟಾಗಿ ಮುಂದುವರಿಯಬೇಕು, ದೇಶದ ಮತ್ತು ಅದರ ಜನರ ಕಲ್ಯಾಣವನ್ನು ಸ್ಥಿರವಾಗಿ ಉತ್ತೇಜಿಸಲಾಗುತ್ತದೆ "ಎಂದು ಅವರು ಹೇಳಿದರು.

Trending News