ಇಡಿಯಿಂದ ಬಂಧನ ಭೀತಿ; ಸುಪ್ರೀಂನಿಂದ ಚಿದಂಬರಂಗೆ ತಾತ್ಕಾಲಿಕ ರಿಲೀಫ್

ಆಗಸ್ಟ್ 26 ರವರೆಗೆ ಚಿದಂಬರಂ ಸಿಬಿಐ ಬಂಧನದಲ್ಲಿರುವುದರಿಂದ ಸಿಡಿಐ ಪ್ರಕರಣದಲ್ಲಿ ಚಿದಂಬರಂ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 26 ರಂದು ನಡೆಸಲಿದೆ.  

Last Updated : Aug 23, 2019, 02:51 PM IST
ಇಡಿಯಿಂದ ಬಂಧನ ಭೀತಿ; ಸುಪ್ರೀಂನಿಂದ ಚಿದಂಬರಂಗೆ ತಾತ್ಕಾಲಿಕ ರಿಲೀಫ್ title=
File Image

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ವಶದಲ್ಲಿರುವ ಕಾಂಗ್ರೆಸ್ ಮುಖಂಡ ಮತ್ತು ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಇಡಿ ಬಂಧನದಿಂದ ತಾತ್ಕಾಲ್ಲಿಕ ಪರಿಹಾರ ನೀಡಿದೆ. ವಾಸ್ತವವಾಗಿ, ಇಡಿ ಬಂಧನದಿಂದ ತನ್ನನ್ನು ರಕ್ಷಿಸುವಂತೆ ಚಿದಂಬರಂ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

ಈ ಕುರಿತು ವಿಚಾರಣೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯವರೆಗೆ ಜಾರಿ ನಿರ್ದೇಶನಾಲಯವು ಪಿ.ಚಿದಂಬರಂ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಆಗಸ್ಟ್ 26 ರಂದು ಸುಪ್ರೀಂ ಕೋರ್ಟ್ ಇಡಿ ಮತ್ತು ಸಿಬಿಐ ಪ್ರಕರಣಗಳನ್ನು ಆಲಿಸಲಿದೆ. 

ಆಗಸ್ಟ್ 26 ರವರೆಗೆ ಇಡಿಯಿಂದ ಪಿ.ಚಿದಂಬರಂ ಬಂಧನಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಪಿ.ಚಿದಂಬರಂ ಆಗಸ್ಟ್ 26 ರವರೆಗೆ ಸಿಬಿಐ ರಿಮಾಂಡ್‌ನಲ್ಲಿ ಇರಲಿದ್ದು, ಅದೇ ದಿನ ಸಿಡಿಐ ಪ್ರಕರಣದಲ್ಲಿ ಆಗಸ್ಟ್ 26 ರಂದು ಚಿದಂಬರಂ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಲಿಸಲಿದೆ. 

ವಿಚಾರಣೆಯ ಸಮಯದಲ್ಲಿ, ಪಿ. ಚಿದಂಬರಂ ಅವರ ವಕೀಲ ಅಭಿಷೇಕ್ ಮನು ಸಿಂಗ್ವಿ, ಹೈಕೋರ್ಟ್ ತನ್ನ ಆದೇಶದಲ್ಲಿ, ಪೂರ್ವ ಬಂಧನವನ್ನು ಕಾನೂನಿನಿಂದ ತೆಗೆದುಹಾಕಬೇಕು ಎಂದು ಹೇಳಿದೆ, ಆದರೆ ದೇಶಾದ್ಯಂತ ಪ್ರತಿ ರಾಜ್ಯದಲ್ಲಿ ನಿರೀಕ್ಷಿತ ಜಾಮೀನು ನೀಡುವ ಅವಕಾಶವಿದೆ. ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ವಿಚಾರಣೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರು ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದವನ್ನು ಪ್ರಸ್ತಾಪಿಸಿರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ. ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದಕ್ಕೂ ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೂ ಒಂದಕ್ಕೊಂದು ಯಾವುದೇ ಅರ್ಥವಿಲ್ಲ, ಆದರೆ ಆದೇಶದಲ್ಲಿ ಅದನ್ನು ಉಲ್ಲೇಖಿಸಲಾಗಿದೆ ಎಂದು ಅವರು ತಮ್ಮ ವಾದ ಮಂಡಿಸಿದರು.

ಸುಪ್ರೀಂಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ಬಳಿಕ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇಡಿ ತನಿಖೆಯ ವೇಳೆ ಸಂಗ್ರಹಿಸಿರುವ ದಾಖಲೆಗಳನ್ನು ನ್ಯಾಯಾಲಯದ ಮುಂದಿಡಲು ಇಚ್ಚಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಿದಂಬರಂ ಪರ ವಕೀಲರಾದ ಕಪಿಲ್ ಸಿಬಾಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ, ಈ ಹಿಂದೆ ಹೈಕೋರ್ಟ್ನಲ್ಲಿ ಇವೆಲ್ಲವೂ ನಡೆದಿದೆ ಎಂದರು. ಆದರೆ ಸಿಬಾಲ್ ಮತ್ತು ಸಿಂಘ್ವಿ ವಾದವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಆಗಸ್ಟ್ 26ರಂದು ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿ ಸಲ್ಲಿಸುವಂತೆ ಮೆಹ್ತಾಗೆ ಸೂಚಿಸಿತು.

ನಾವು ಪಡೆದ ದಾಖಲೆಗಳು ಡಿಜಿಟಲ್ ರೂಪದಲ್ಲಿವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಚಿದಂಬರಂ ಅವರನ್ನು ಕೇಳಲು ನಮ್ಮಲ್ಲಿ ಇ-ಮೇಲ್ ದಾಖಲೆಗಳಿವೆ. ಸಾಕಷ್ಟು ಹಣ ಸೆಲ್ ಕಂಪನಿಗಳಿಗೆ ಹೋಗಿದೆ ಮತ್ತು ಅದನ್ನು ಮುಂದೆ ಕಳುಹಿಸಲಾಗಿದೆ, ಅದನ್ನು ತನಿಖೆ ಮಾಡಬೇಕಾಗಿದೆ ಎಂದು ಮೆಹ್ತಾ ಹೇಳಿದ್ದಾರೆ.
 

Trending News