ಯೋಗಿ ಸರ್ಕಾರದ ಮಂತ್ರಿ ಹಾಗೂ ಮಾಜಿ ಕ್ರಿಕೆಟಿಗ Chetan Chauhan ಮೆದಾಂತ್ ಆಸ್ಪತ್ರೆಗೆ ದಾಖಲು

ಚೇತನ್ ಚೌಹಾನ್ ಅವರನ್ನು ಗುರುಗ್ರಾಮ್ ನ ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.

Last Updated : Aug 15, 2020, 07:13 PM IST
ಯೋಗಿ ಸರ್ಕಾರದ ಮಂತ್ರಿ ಹಾಗೂ ಮಾಜಿ ಕ್ರಿಕೆಟಿಗ Chetan Chauhan ಮೆದಾಂತ್ ಆಸ್ಪತ್ರೆಗೆ ದಾಖಲು title=

ಲಖನೌ: ಮಾಜಿ ಕ್ರಿಕೆಟಿಗ ಹಾಗೂ ಉತ್ತರ ಪ್ರದೇಶ ಸರ್ಕಾರದಲ್ಲಿ ಮಂತ್ರಿಯಾಗಿರುವ ಚೇತನ್ ಚೌಹಾನ್ (Chetan Chauhan) ಅವರ ಆರೋಗ್ಯ ಸ್ಥಿತಿ ನಾಜೂಕಾಗಿದೆ. ಕೊರೊನಾ ಸೋಂಕಿಗೆ ಗುರಿಯಾಗಿರುವ ಉತ್ತರ ಪ್ರದೇಶದ ಹೋಮ್ ಗಾರ್ಡ್ ಸಚಿವ ಚೇತನ್ ಚೌಹಾನ್ ಅವರನ್ನು ಗುರುಗ್ರಾಮ್ ದ ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಒಂದು ಮೂತ್ರಪಿಂಡ ಫೇಲ್ ಆಗಿದೆ ಎಂದು ಹೇಳಲಾಗಿದೆ. ಪ್ರಸ್ತುತ ಅವರನ್ನು ಲೈಫ್ ಸಪೋರ್ಟ್ ಸಿಸ್ಟಂ ಮೇಲೆ ಇರಿಸಲಾಗಿದ್ದು, ಅವರ ಅರೋಗ್ಯ ಸ್ಥಿತಿ ಗಂಭೀರವಾಗಿದೆ. ಜುಲೈ 19 ರಂದು ಚೇತನ್ ಚೌಹಾನ್ ಅವರ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಬಳಿಕ ಅವರನ್ನು SGPGIಗೆ ದಾಖಲಿಸಲಾಗಿತ್ತು. ಕೊರೊನಾ ಸೋಂಕಿನಿಂದ ಮುಕ್ತಿ ಸಿಕ್ಕರೂ ಕೂಡ ಚೇತನ್ ಚೌಹಾನ್ ಅವರಲ್ಲಿ ಕಿಡ್ನಿ ಹಾಗೂ ಬ್ಲಡ್ ಪ್ರೆಶರ್ ಸಮಸ್ಯೆ ಕಾಣಿಸಿಕೊಂಡಿದೆ. 

ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಕಾರಣ ಅವರನ್ನು ಗುರುಗ್ರಾಮ್ ದ ಮೆದಾಂತಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 72 ವರ್ಷ ವಯಸ್ಸಿನ ಚೇತನ್ ಚೌಹಾನ್ ಎರಡು ಬಾರಿ ಬಿಜೆಪಿಯಾ ಲೋಕಸಭಾ ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಕಳೆದ ವರ್ಷ ಅವರು ಯೋಗಿ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದರು. ಪ್ರಸ್ತುತ, ಉತ್ತರ ಪ್ರದೇಶದ ಮಂತ್ರಿಮಂಡಲದಲ್ಲಿ ಅವರು ಸೈನಿಕ ಕಲ್ಯಾಣ, ಹೋಮ್ ಗಾರ್ಡ್, PRD ಹಾಗೂ ನಾಗರಿಕ ಸುರಕ್ಷಾ ಸಚಿವಾಲಯಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪ್ರದೇಶದ ಅಮರೋಹಾ ಜಿಲ್ಲೆಯ ನೌಗಾಮ್ ನಿಂದ ಚೇತನ್ ಚೌಹಾನ್ ಶಾಸಕರಾಗಿ ಆಯ್ಕೆಗೊಂಡಿದ್ದಾರೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಕಾನೂನು ಸಚಿವ ಬೃಜೆಸ್ ಪಾಠಕ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆಗಸ್ಟ್ 2ರಂದು ಯೋಗಿ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಕಮಲ ರಾಣಿ ವರುಣ್ ನಿಧನರಾಗಿದ್ದರು. ಅವರೂ ಕೂಡ ಕೊರೊನಾ ಸೋಂಕಿಗೆ ಗುರಿಯಾದ ಕಾರಣ SGPGI ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇವರನ್ನು ಹೊರತುಪಡಿಸಿ ಯುಪಿ ಸಂಪುಟದಲ್ಲಿ ಕ್ರೀಡಾ ಸಚಿವರಾಗಿರುವ ಉಪೇಂದ್ರ ತಿವಾರಿ, ರಾಜೇಂದ್ರ ಪ್ರತಾಪ್ ಸಿಂಗ್, ಧರ್ಮ ಸಿಂಗ್ ಸೋನಿ, ಕ್ಯಾಬಿನೆಟ್ ಸಚಿವ ಮೋತಿ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಆದರೆ, ಇವರೆಲ್ಲರೂ ಗುಣಮುಖರಾಗಿ ತಮ್ಮ ಮನೆಗೆ ಮರಳಿದ್ದಾರೆ. ಭಾರತೀಯ ಜನತಾ ಪಕ್ಷದ ಪ್ರದೇಶಾಧ್ಯಕ್ಷರಾಗಿರುವ ಸ್ವತಂತ್ರ ದೇವ್ ಸಿಂಗ್ ಕೂಡ ಕಳೆದ ವಾರ ಕೊರೊನಾ ಪಾಸಿಟಿವ್ ಕಂಡುಬಂದಿದ್ದರು.

Trending News