ʼಮಹಾʼ ಬಿಕ್ಕಟ್ಟು: ಬಂಡಾಯ ಶಾಸಕರ ಮನವೊಲಿಸಲು ಕಣಕ್ಕಿಳಿದ ಠಾಕ್ರೆ ಪತ್ನಿ!

ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಬಂಡಾಯ ಶಾಸಕರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ನಿರಂತರವಾಗಿ ಶಾಸಕರ ಪತ್ನಿಯರನ್ನು ಸಂಪರ್ಕಿಸುತ್ತಿದ್ದಾರಂತೆ. ಬಂಡಾಯ ಶಾಸಕರ ಪತ್ನಿಯರ ಮೂಲಕ ತಮ್ಮ ಮಾತುಗಳನ್ನು ತಿಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

Written by - Bhavishya Shetty | Last Updated : Jun 26, 2022, 09:48 AM IST
  • ಬಂಡಾಯ ಶಾಸಕರ ಮನವೊಲಿಸಲು ರಶ್ಮಿ ಠಾಕ್ರೆ ಪ್ರಯತ್ನ
  • ಮಹಾ ರಾಜಕೀಯ ಕಾಪಾಡಲು ಠಾಕ್ರೆ ಪತ್ನಿ ಸಾಹಸ
  • ಬಂಡಾಯ ಶಾಸಕರ ಪತ್ನಿಯರನ್ನು ಸಂಪರ್ಕಿಸಿದ ರಶ್ಮಿ
ʼಮಹಾʼ ಬಿಕ್ಕಟ್ಟು: ಬಂಡಾಯ ಶಾಸಕರ ಮನವೊಲಿಸಲು ಕಣಕ್ಕಿಳಿದ ಠಾಕ್ರೆ ಪತ್ನಿ!  title=
Uddhav Thackeray

ದಿನೇ ದಿನೇ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಮಹತ್ತರವಾದ ಮಾಹಿತಿಯೊಂದು ಹೊರಬಿದ್ದಿದೆ. ಮೂಲಗಳ ಪ್ರಕಾರ ಬಂಡಾಯ ಶಾಸಕರ ಮನವೊಲಿಸಲು ಶಿವಸೇನೆ ಶತಪ್ರಯತ್ನ ನಡೆಸುತ್ತಿದೆ. ಇದರ ನಡುವೆ ಶಿವಸೇನೆಯ ಹಿರಿಯ ನಾಯಕರ ನಂತರ ಇದೀಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ಶಾಸಕರ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಉದ್ಧವ್‌ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಶಾಸಕರನ್ನು ವಾಪಸ್ ಪಕ್ಷಕ್ಕೆ ಕರೆತರಲು ವಿಶೇಷ ಯೋಜನೆ ರೂಪಿಸಿದ್ದಾರೆ. ಮಾಹಿತಿ ಪ್ರಕಾರ, ಸಿಎಂ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಬಂಡಾಯ ಶಾಸಕರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ನಿರಂತರವಾಗಿ ಶಾಸಕರ ಪತ್ನಿಯರನ್ನು ಸಂಪರ್ಕಿಸುತ್ತಿದ್ದಾರಂತೆ. ಬಂಡಾಯ ಶಾಸಕರ ಪತ್ನಿಯರ ಮೂಲಕ ತಮ್ಮ ಮಾತುಗಳನ್ನು ತಿಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: Vegetable Price: ಮತ್ತೆ ಏರಿಕೆಯಾಯ್ತು ತರಕಾರಿ ಬೆಲೆ: ಇಂದಿನ ಮಾರುಕಟ್ಟೆ ಬೆಲೆ ಇಂತಿದೆ

ಬಂಡಾಯ ಶಾಸಕರ ಪತ್ನಿಯರೊಂದಿಗೆ ಸಂಪರ್ಕ: 
ರಶ್ಮಿ ಠಾಕ್ರೆ ಅವರು ಬಂಡಾಯ ಶಾಸಕರ ಪತ್ನಿಯರನ್ನು ಸಂಪರ್ಕಿಸಿದ್ದು, ತಮ್ಮ ಸಂದೇಶಗಳನ್ನು ಅವರ ಮೂಲಕವೇ ತಿಳಿಸುತ್ತಿದ್ದಾರೆ. ಆದರೆ, ಬಂಡಾಯ ಶಾಸಕರ ಪತ್ನಿಯರು ಸಹ ರಶ್ನಿ ಠಾಕ್ರೆ ಅವರ ಮಾತಿಗೆ ಬೆಲೆ ನೀಡದೆ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. 

ಇನ್ನು ಕಳೆದ ಶುಕ್ರವಾರದಂದು ಶಿವಸೇನೆ ವಿರುದ್ಧ ಸಿಡಿದೆದ್ದ ಏಕನಾಥ್ ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರು ಸೂರತ್‌ನಿಂದ ಅಸ್ಸಾಂನ ಗುವಾಹಟಿಗೆ ತೆರಳಿದ್ದರು. ಆ ಬಳಿಕ ಏಕನಾಥ್ ಶಿಂಧೆ ಮುಂಬೈಗೆ ಆಗಮಿಸಿ ಉಪಸಭಾಪತಿಯನ್ನು ಭೇಟಿಯಾಗುತ್ತಾರೆ ಎಂಬ ಮಾಹಿತಿಗಳೂ ಲಭಿಸಿದ್ದವು. ಶಿಂಧೆ ಜೊತೆ 40 ಮಂದಿ ಶಾಸಕರಿದ್ದು, ಆ ಪೈಕಿ 34 ಮಂದಿ ಶಿವಸೇನೆ ಮತ್ತು 6 ಮಂದಿ ಪಕ್ಷೇತರರು ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಶಾಸಕರ ಪತ್ನಿಯರನ್ನು ಠಾಕ್ರೆ ಪತ್ನಿ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ: Gold-Sliver Price: ಏರಿಕೆ ಕಂಡ ಹಳದಿಲೋಹದ ಬೆಲೆ: ಗ್ರಾಹಕರಿಗೆ ಬಿಸಿಮುಟ್ಟಿಸಿದ ಚಿನ್ನದ ದರ
 
ಜೊತೆಗೆ ಉದ್ಧವ್‌ ಠಾಕ್ರೆಗೆ ಶಾಕ್‌ ನೀಡಲು ಏಕನಾಥ್‌ ಶಿಂಧೆ ಬಣ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಶಿಂಧೆ ಬೆಂಬಲಿಗರು ತಮ್ಮ ಪ್ರತ್ಯೇಕ ಬಣವನ್ನು ನಿರ್ಮಿಸಲು ಸಿದ್ಧತೆ ನಡೆಸಿದ್ದಾರಂತೆ. ಜೊತೆಗೆ ಆ ಪಕ್ಷಕ್ಕೆ 'ಶಿವಸೇನೆ-ಬಾಳಾಸಾಹೇಬ್ ಠಾಕ್ರೆ ಬಣ' ಎಂಬ ಹೆಸರನ್ನು ಇಡಲು ನಿರ್ಧರಿಸಿದ್ದಾರಂತೆ. ಶಿಂಧೆ ಬೆಂಬಲಿಗರು ಈ ಹೆಸರಿನ ಬಗ್ಗೆ ಘೋಷಣೆಯನ್ನು ಶೀಘ್ರದಲ್ಲೇ ಮಾಡುವ ಸಾಧ್ಯತೆ ಇದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News