ದಕ್ಷಿಣ ಭಾರತದದಲ್ಲಿ ಉಗ್ರರ ದಾಳಿ ಸಾಧ್ಯತೆ ; ಹೈಅಲರ್ಟ್ ಘೋಷಣೆ

ದಕ್ಷಿಣ ಭಾರತದ ಭಾಗದಲ್ಲಿ ಭಯೋತ್ಪಾದಕರು ದಾಳಿ ಮಾಡಬಹುದು ಎಂದು ಸೇನೆಯು ಗುಪ್ತಚರ ಮಾಹಿತಿ ಪಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

Last Updated : Sep 9, 2019, 06:12 PM IST
ದಕ್ಷಿಣ ಭಾರತದದಲ್ಲಿ ಉಗ್ರರ ದಾಳಿ ಸಾಧ್ಯತೆ ; ಹೈಅಲರ್ಟ್ ಘೋಷಣೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ದಕ್ಷಿಣ ಭಾರತದ ಭಾಗದಲ್ಲಿ ಭಯೋತ್ಪಾದಕರು ದಾಳಿ ಮಾಡಬಹುದು ಎಂದು ಸೇನೆಯು ಗುಪ್ತಚರ ಮಾಹಿತಿ ಪಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಗುಜರಾತ್‌ನ ಸರ್ ಕ್ರೀಕ್‌ನಲ್ಲಿ ಕೆಲವು ಹಾಗೆ ಬಿಟ್ಟಿರುವ ದೋಣಿಗಳುಕಂಡು ಬಂದಿರುವ ಈ ಹಿನ್ನಲೆಯಲ್ಲಿ ಪಾಕಿಸ್ತಾನದ ಉಗ್ರರು ಕಚ್ ಪ್ರದೇಶದ ಮೂಲಕ ಭಾರತಕ್ಕೆ ಒಳನುಸುಳಿ ಕೋಮುಗಲಭೆ ಅಥವಾ ಉಗ್ರ ದಾಳಿ ನಡೆಸುವ ಬಗ್ಗೆ ಸುಳಿವು ದೊರೆತಿದೆ ಎನ್ನಲಾಗಿದೆ.

ಈಗ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕಮಾಂಡಿನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ ) ಆಗಿರುವ ಎಸ್ಓ ಸೈನಿ ಮಾತನಾಡಿ 'ಭಾರತದ ದಕ್ಷಿಣ ಭಾಗ ಮತ್ತು ಪರ್ಯಾಯ ದ್ವೀಪದಲ್ಲಿ ಭಯೋತ್ಪಾದಕ ದಾಳಿ ಇರಬಹುದೆಂದು ನಮಗೆ ಅನೇಕ ಸುಳಿವು ದೊರೆತಿದೆ. ಸರ್ ಕ್ರೀಕ್ ಪ್ರದೇಶದಲ್ಲಿ ಕೆಲವು ಕೈಬಿಟ್ಟ ದೋಣಿಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಅಲರ್ಟ್ನಿಂದ ಎಚ್ಚೆತ್ತುಕೊಂಡಿರುವ ಸೈನ್ಯವು ಈಗ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎನ್ನಲಾಗಿದೆ. ಈಗ ಸೇನಾಧಿಕಾರಿಯ ಹೇಳಿಕೆಯ ನಂತರ ಕೇರಳ ಪೋಲಿಸ್ ಆಡಳಿತವು ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದು, ವಿಶೇಷವಾಗಿ ಕರಾವಳಿ ತೀರದಲ್ಲಿ ಜಾಗರೂಕರಾಗಿರಲು ಸೂಚನೆ ನೀಡಿದೆ. ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಶಾಪಿಂಗ್ ಮಾಲ್‌ಗಳು ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ.

ಕಳೆದ ತಿಂಗಳು ದೇಶದ ಅತಿದೊಡ್ಡ ಖಾಸಗಿ ಬಂದರನ್ನು ನಿರ್ವಹಿಸುವ ಅದಾನಿ ಪೋರ್ಟ್ ಮತ್ತು ಲಾಜಿಸ್ಟಿಕ್ಸ್, ಕೋಚ್ ಗಾರ್ಡ್ ನಿಲ್ದಾಣದಿಂದ ಒಳಹರಿವುಗಳನ್ನು ಸ್ವೀಕರಿಸಲಾಗಿತ್ತು , ಪಾಕಿಸ್ತಾನದ ಕಮಾಂಡೋಗಳು ಕಚ್ ಪ್ರದೇಶದ ಮೂಲಕ ಭಾರತೀಯ ಭೂಪ್ರದೇಶಕ್ಕೆ ಒಳನುಸುಳುವ ಸಾಧ್ಯತೆಯಿದೆ ಎಂದು ಕೋಚ್ ಪ್ರದೇಶದ ಮೂಲಕ ಕೋಮು ಗಲಭೆ ಅಥವಾ  ಗುಜರಾತ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಬಗ್ಗೆ ಗುಪ್ತಚರ ಇಲಾಖೆ ಸುಳಿವು ನೀಡಿತ್ತು.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಸದಸ್ಯರಿಗೆ ನೀರೊಳಗಿನ ದಾಳಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಗುಪ್ತಚರ ವರದಿಗಳನ್ನು ಉಲ್ಲೇಖಿಸಿ ಹೇಳಿದ್ದರು.

 

Trending News