Perfume Bomb : ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ 'ಪರ್ಫ್ಯೂಮ್ ಬಾಂಬ್' ಪತ್ತೆ! 

Jammu-Kashmir Terrorism : ಜಮ್ಮು-ಕಾಶ್ಮೀರ ಪೊಲೀಸರಿಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನರ್ವಾಲ್ ಪ್ರದೇಶದಲ್ಲಿ ನಡೆದ ಡಬಲ್ ಸ್ಫೋಟದಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿದ್ದಾರೆ.

Written by - Channabasava A Kashinakunti | Last Updated : Feb 3, 2023, 01:45 PM IST
  • ಜಮ್ಮು-ಕಾಶ್ಮೀರ ಪೊಲೀಸರಿಗೆ ಭರ್ಜರಿ ಕಾರ್ಯಾಚರಣೆ
  • ನರ್ವಾಲ್ ಪ್ರದೇಶದಲ್ಲಿ ನಡೆದ ಡಬಲ್ ಸ್ಫೋಟ
  • ಪರ್ಫ್ಯೂಮ್ ಬಾಂಬ್ ಸಿಕ್ಕ ಬಳಿಕ ಡಿಜಿಪಿ ಹೇಳಿದ್ದು ಹೀಗೆ
Perfume Bomb : ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ 'ಪರ್ಫ್ಯೂಮ್ ಬಾಂಬ್' ಪತ್ತೆ!  title=

Jammu-Kashmir Terrorism : ಜಮ್ಮು-ಕಾಶ್ಮೀರ ಪೊಲೀಸರಿಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನರ್ವಾಲ್ ಪ್ರದೇಶದಲ್ಲಿ ನಡೆದ ಡಬಲ್ ಸ್ಫೋಟದಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಉಗ್ರಗಾಮಿ ಐಇಡಿ 'ಪರ್ಫ್ಯೂಮ್' ಬಳಸಿದ್ದ. ಪೊಲೀಸರು ಅದರಲ್ಲಿ 'ಪರ್ಫ್ಯೂಮ್' ಐಇಡಿಯನ್ನು ವಶಪಡಿಸಿಕೊಂಡಿದ್ದಾರೆ, ಅದು ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ಜನವರಿ 21 ರಂದು ಕಣಿವೆಯಲ್ಲಿ ಈ ದಾಳಿ ನಡೆದಿತ್ತು. ಈ ವೇಳೆ 9ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕಣಿವೆಯಲ್ಲಿ ಮೊದಲ ಬಾರಿಗೆ, ಪರ್ಫ್ಯೂಮ್ ಐಇಡಿ ಪತ್ತೆಯಾದ ನಂತರ ಆತಂಕ ಹೆಚ್ಚಾಗಿದೆ. ಈ ಐಇಡಿ ಎಷ್ಟು ಅಪಾಯಕಾರಿ ಎಂದರೆ ಅದನ್ನು ತೆರೆಯಲು ಅಥವಾ ಒತ್ತಿದರೆ ಅದು ಸ್ಫೋಟಗೊಳ್ಳುತ್ತದೆ. 

ಈ ಕೃತ್ಯಕ್ಕೆ ಸಂಬಂಧಿಸಿದಂತೆ ಆರಿಫ್ ಎಂಬ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ವರ್ಷಗಳಿಂದ ಪಾಕಿಸ್ತಾನದಲ್ಲಿ ಕುಳಿತಿದ್ದ ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕದಲ್ಲಿದ್ದ. ಮಾಹಿತಿ ಪ್ರಕಾರ, ಜನವರಿ 20 ರಂದು ಎರಡು ಬಾಂಬ್‌ಗಳನ್ನು ಇಟ್ಟಿದ್ದ ಮತ್ತು ಜನವರಿ 21 ರಂದು ಕಣಿವೆಯಲ್ಲಿ 20 ನಿಮಿಷಗಳ ಮಧ್ಯಂತರದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ. ಕಣಿವೆಯಿಂದ ವಶಪಡಿಸಿಕೊಂಡ ಪರ್ಫ್ಯೂಮ್ ಬಾಂಬ್ ಸ್ಥಳದಲ್ಲೇ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ.

ಇದನ್ನೂ ಓದಿ : ಈ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಂಗಾಪುರದಲ್ಲಿ ಸಿಗಲಿದೆ ಟ್ರೈನಿಂಗ್

ಪರ್ಫ್ಯೂಮ್ ಬಾಂಬ್ ಸಿಕ್ಕ ಬಳಿಕ ಡಿಜಿಪಿ ಹೇಳಿದ್ದು ಹೀಗೆ

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್‌ಬಾಗ್ ಸಿಂಗ್, ಜನವರಿ 21 ರಂದು ಜಮ್ಮುವಿನ ನರ್ವಾಲ್‌ನಲ್ಲಿ 2 ಐಇಡಿ ಸ್ಫೋಟಗಳು ನಡೆದಿವೆ. ಘಟನೆಗೆ ಸಂಬಂಧಿಸಿದಂತೆ ರಿಯಾಸಿ ನಿವಾಸಿ ಆರಿಫ್ ಎಂಬ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಈತ ಕಳೆದ 3 ವರ್ಷಗಳಿಂದ ಗಡಿಯುದ್ದಕ್ಕೂ ಲಷ್ಕರ್-ಎ-ತೊಯ್ಬಾ ಹ್ಯಾಂಡ್ಲರ್‌ಗಳೊಂದಿಗೆ ಸಂಬಂಧ ಹೊಂದಿದ್ದ. ಫೆಬ್ರವರಿ 2022 ರಲ್ಲಿ, ಶಾಸ್ತ್ರಿ ನಗರದಲ್ಲಿ ಐಇಡಿ ಸ್ಫೋಟ ಸಂಭವಿಸಿತು. ಆ ಸ್ಫೋಟದ ಹಿಂದೆ ಆರಿಫ್ ಇದ್ದ. ಕತ್ರಾ ಸ್ಫೋಟಗೊಂಡು ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್‌ನಲ್ಲಿ ಐಇಡಿ ಅಳವಡಿಸಿರುವುದಾಗಿ ಆರಿಫ್ ಒಪ್ಪಿಕೊಂಡಿದ್ದಾನೆ. ಇದರಿಂದ ಐಇಡಿ ಕೂಡ ವಶಪಡಿಸಿಕೊಳ್ಳಲಾಗಿದೆ. ಡಿಸೆಂಬರ್‌ನಲ್ಲಿ ಆರಿಫ್‌ಗೆ ಮೂರು ಐಇಡಿಗಳು ಬಂದಿವೆ ಎಂದು  ಹೇಳಿದರು. ಇವುಗಳಲ್ಲಿ ಎರಡನ್ನು ನರ್ವಾಲ್ ನಲ್ಲಿ ಬಳಸಿದ್ದಾನೆ. ಈ ಪ್ರದೇಶದಲ್ಲಿ ಆತ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾನೆ.

ಆರಿಫ್ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಪಾಕಿಸ್ತಾನವು ತನ್ನ ಭೂಮಿಯನ್ನು ಭಯೋತ್ಪಾದಕರಿಗೆ ಬಳಸಲು ಅವಕಾಶ ನೀಡುತ್ತಿದೆ. ಇದನ್ನೇ ಬಳಸಿಕೊಂಡು ಭಯೋತ್ಪಾದಕರು ಜಗತ್ತಿನಾದ್ಯಂತ ಅಮಾಯಕರನ್ನು ಕೊಲ್ಲುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರ ನಡುವೆ ಕೋಮು ವಿಭಜನೆಯನ್ನು ಸೃಷ್ಟಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅದಾನಿಯ ಈ ನಿರ್ಧಾರದಿಂದ ನಿಟ್ಟುಸಿರು ಬಿಟ್ಟ ಹೂಡಿಕೆದಾರರು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News