ಸಾಲುಮರದ ತಿಮ್ಮಕ್ಕ ಸೇರಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ

ಕರ್ನಾಟಕದಿಂದ ಆರ್ಟ್ ಡ್ಯಾನ್ಸರ್ ವಿಭಾಗದಲ್ಲಿ ಪ್ರಭುದೇವ್​, ವಿಜ್ಞಾನ ವಿಭಾಗದಲ್ಲಿ ರೋಹಿಣಿ ಗೊಡ್ಬೊಲೆ, ಪುರಾತತ್ವ ತಜ್ಞೆ ಶಾರಾದಾ ಶ್ರೀನಿವಾಸನ್​ ಹಾಗೂ ಸರೋದ್ ವಾದಕ ರಾಜೀವ್ ತಾರಾನಾಥ್ ಮತ್ತು ಸಮಾಜಸೇವೆ ಮತ್ತು ಪರಿಸರ ವಿಭಾಗದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಲಭಿಸಿದೆ. 

Last Updated : Jan 26, 2019, 08:30 AM IST
ಸಾಲುಮರದ ತಿಮ್ಮಕ್ಕ ಸೇರಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ title=

ನವದೆಹಲಿ: 70ನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ದೇಶದ 112 ಸಾಧಕರಿಗೆ ಕೇಂದ್ರ ಸರ್ಕಾರ ಅತ್ಯುನ್ನತ್ತ ನಾಗರಿಕ ಪ್ರಶಸ್ತಿಗಳನ್ನು ಶುಕ್ರವಾರ ಘೋಷಣೆ ಮಾಡಿದೆ. 

ಕೇಂದ್ರ ಸರ್ಕಾರದ ಗೃಹ ಇಲಾಖೆಯ ವತಿಯಿಂದ ಪದ್ಮಭೂಷಣ, ಪದ್ಮಶ್ರೀ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, 4 ಮಂದಿಗೆ ಪದ್ಮವಿಭೂಷಣ, 14 ಮಂದಿಗೆ ಪದ್ಮಭೂಷಣ ಹಾಗೂ 94 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕದಿಂದ ಆರ್ಟ್ ಡ್ಯಾನ್ಸರ್ ವಿಭಾಗದಲ್ಲಿ ಪ್ರಭುದೇವ್​, ವಿಜ್ಞಾನ ವಿಭಾಗದಲ್ಲಿ ರೋಹಿಣಿ ಗೊಡ್ಬೊಲೆ, ಪುರಾತತ್ವ ತಜ್ಞೆ ಶಾರಾದಾ ಶ್ರೀನಿವಾಸನ್​ ಹಾಗೂ ಸರೋದ್ ವಾದಕ ರಾಜೀವ್ ತಾರಾನಾಥ್ ಮತ್ತು ಸಮಾಜಸೇವೆ ಮತ್ತು ಪರಿಸರ ವಿಭಾಗದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಲಭಿಸಿದೆ. 

ಜಾನಪದ ಕಲಾವಿದೆ ತಿಜನ್​ ಬಾಯಿ, ಇಸ್ಮಾಯಿಲ್​ ಓಮರ್​,​ L&T ಮುಖ್ಯಸ್ಥ ಅನಿಲ್​ ಕುಮಾರ್​ ಮನಿಭಾಯ್​ ನಾಯ್ಕ್​ ಹಾಗೂ ಬಲವಂತ್ ಮೋರೆಶ್ವರ್​ ಪುರಂದರೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. 

ಅಲ್ಲದೇ, ನಟ ಖಾದರ್​ ಖಾನ್​(ಮರಣೋತ್ತರ), ನಟ ಮನೋಜ್​ ಬಾಜಪೇಯ್​, ಫುಟ್ಬಾಲ್​ ಆಟಗಾರ ಸುನೀಲ್​ ಚೆಟ್ರಿ, ಡೈರೆಕ್ಟರ್​ ಪ್ರಭುದೇವ್​, ಕ್ರಿಕೆಟರ್​ ಗೌತಮ್​ ಗಂಭೀರ್​, ಗಾಯಕ ಶಂಕರ್​ ಮಹದೇವನ್​ ಹಾಗೂ ಕುಸ್ತಿಪಟು ಭಜರಂಗಿ ಸೇರಿದಂತೆ 94 ಸಾಧಕರು ಪದ್ಮಶ್ರೀಗೆ ಪಾತ್ರರಾಗಿದ್ದಾರೆ. 

Trending News