ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ವಿಶೇಷ ಪೊಲೀಸ್ ಆಯುಕ್ತರಾಗಿ ಎಸ್.ಎನ್. ಶ್ರೀವಾಸ್ತವ ನೇಮಕ

ಈಶಾನ್ಯ ದೆಹಲಿಯಲ್ಲಿನ ಗಲಭೆಗಳನ್ನು ನಿಯಂತ್ರಿಸಲು ದೆಹಲಿ ಪೊಲೀಸ್ ವಿಫಲವಾದ ಕಾರಣ, ಸರ್ಕಾರವು ತಕ್ಷಣವೇ 1985 ರ ಬ್ಯಾಚ್ ಐಪಿಎಸ್ ಅಧಿಕಾರಿ - ಎಸ್ ಎನ್ ಶ್ರೀವಾಸ್ತವನನ್ನು ಸಿಆರ್ಪಿಎಫ್ ನಿಂದ ದೆಹಲಿ ಪೊಲೀಸರಿಗೆ ವಾಪಸ್ ಕಳುಹಿಸಿತು ಮತ್ತು ಅವರನ್ನು ಕಾನೂನು ಮತ್ತು ಸುವ್ಯವಸ್ಥೆಯ ದೆಹಲಿ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿತು

Last Updated : Feb 25, 2020, 11:19 PM IST
ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ವಿಶೇಷ ಪೊಲೀಸ್ ಆಯುಕ್ತರಾಗಿ ಎಸ್.ಎನ್. ಶ್ರೀವಾಸ್ತವ ನೇಮಕ  title=
PHOTO COURTESY:ANI(file photo)

ನವದೆಹಲಿ: ಈಶಾನ್ಯ ದೆಹಲಿಯಲ್ಲಿನ ಗಲಭೆಗಳನ್ನು ನಿಯಂತ್ರಿಸಲು ದೆಹಲಿ ಪೊಲೀಸ್ ವಿಫಲವಾದ ಕಾರಣ, ಕೇಂದ್ರ ಸರ್ಕಾರವು ತಕ್ಷಣವೇ 1985 ರ ಬ್ಯಾಚ್ ಐಪಿಎಸ್ ಅಧಿಕಾರಿ - ಎಸ್ ಎನ್ ಶ್ರೀವಾಸ್ತವನನ್ನು ಸಿಆರ್ಪಿಎಫ್ ನಿಂದ ದೆಹಲಿ ಪೊಲೀಸಗೆ ವಾಪಸ್ ಕಳುಹಿಸಿತು ಮತ್ತು ಅವರನ್ನು ಕಾನೂನು ಮತ್ತು ಸುವ್ಯವಸ್ಥೆಯ ದೆಹಲಿ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿತು.

ಶ್ರೀವಾಸ್ತವ ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ನಿರ್ದೇಶಕ ಜನರಲ್ ಆಗಿ ನೇಮಿಸಲಾಯಿತು.ಅಮುಲ್ಯ ಪಟ್ನಾಯಕ್ ಅವರ ವಿವಾದಾತ್ಮಕ ಅಧಿಕಾರಾವಧಿ ಮುಗಿದಾಗ ಹಿರಿಯ ಐಪಿಎಸ್ ಅಧಿಕಾರಿ ಪೊಲೀಸ್ ಆಯುಕ್ತರಾಗಲು ಮೊದಲ ಸ್ಥಾನದಲ್ಲಿದ್ದರು.

ಟ್ರಾಫಿಕ್ ಪೋಲಿಸ್ ಮತ್ತು ಭಾರತೀಯ ಮುಜಾಹಿದ್ದೀನ್ ವಿರುದ್ಧದ ಪ್ರಮುಖ ತನಿಖೆಗಳು ಸೇರಿದಂತೆ ದೆಹಲಿ ಪೊಲೀಸರ ವಿವಿಧ ಘಟಕಗಳಲ್ಲಿ ಕೆಲಸ ಮಾಡಿದ ಅನುಭವ ಶ್ರೀವಾಸ್ತವ ಅವರದ್ದಾಗಿದೆ.ಅವರು ತಕ್ಷಣ ದೆಹಲಿ ಪೊಲೀಸನ್ನು ಸೇರಿಕೊಳ್ಳುತ್ತಾರೆ ಮತ್ತು ಪ್ರಸ್ತುತ ಈಶಾನ್ಯ ದೆಹಲಿಯ ಜಾಫ್ರಾಬಾದ್, ಸೀಲಾಂಪುರ್, ಬಾಬರ್ಪುರ್, ಮೌಜ್ಪುರ್, ಯಮುನಾ ವಿಹಾರ್ ವಿವಿಧ ಪ್ರದೇಶಗಳಿಂದ ವರದಿಯಾಗುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮೇಲೆ ನಿಗಾ ಇಡಲಿದ್ದಾರೆ.

ಮಂಗಳವಾರ ಸಂಜೆ ತನಕ ನಡೆದ ಘರ್ಷಣೆಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಪರಿಸ್ಥಿತಿಯನ್ನು ಪರಿಶೀಲಿಸಿದರು ಮತ್ತು ಪ್ರತಿಭಟನೆಯನ್ನು ನಿಯಂತ್ರಿಸಲು ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ.

Trending News