ಚುನಾವಣೆಗೂ ಮುನ್ನ ಬಜೆಟ್ ನ ಭರವಸೆಗಳೆಲ್ಲ ಜನರನ್ನು ಮೂರ್ಖರನ್ನಾಗಿ ಮಾಡುವಂತಿವೆ- ಯೆಚೂರಿ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನ್ನು ವ್ಯಂಗವಾಡಿರುವ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಈ ಮಧ್ಯಂತರ ಬಜೆಟ್ ನ ಭರವಸೆಗಳೆಲ್ಲ ಚುನಾವಣೆಗೂ ಮುನ್ನ ಜನರನ್ನು ಮೂರ್ಖರನ್ನಾಗಿ ಮಾಡುವಂತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Last Updated : Feb 1, 2019, 07:11 PM IST
ಚುನಾವಣೆಗೂ ಮುನ್ನ ಬಜೆಟ್ ನ ಭರವಸೆಗಳೆಲ್ಲ ಜನರನ್ನು ಮೂರ್ಖರನ್ನಾಗಿ ಮಾಡುವಂತಿವೆ- ಯೆಚೂರಿ  title=

ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನ್ನು ವ್ಯಂಗವಾಡಿರುವ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಈ ಮಧ್ಯಂತರ ಬಜೆಟ್ ನ ಭರವಸೆಗಳೆಲ್ಲ ಚುನಾವಣೆಗೂ ಮುನ್ನ ಜನರನ್ನು ಮೂರ್ಖರನ್ನಾಗಿ ಮಾಡುವಂತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಂತರ ಬಜೆಟ್ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಸೀತಾರಾಮ್ ಯೆಚೂರಿ " ಜನರ ತೀರ್ಪು ಏನಾಗಬಹುದು ಎನ್ನುವ ಭಯ ಮತ್ತು ಹತಾಶೆ ಬಿಜೆಪಿಗೆ ಇರುವುದರಿಂದ ಅದು ಈಡೇರಿಸಲು ಅಸಾಧ್ಯವಾದ ಎಲ್ಲ ಭರವಸೆಗಳನ್ನು ಮಧ್ಯಂತರ ಬಜೆಟ್ ಮೂಲಕ ಮಾಡಿದೆ" ಎಂದು ಟ್ವೀಟ್ ಮಾಡಿದ್ದಾರೆ.

 

ಇನ್ನು ಮುಂದುವರೆದು "ಹಂಗಾಮಿ ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ ಮೋದಿ ಸರ್ಕಾರದ ದಾಖಲೆಗಳ ಕುರಿತಾಗಿ ಮತ್ತು ಎಲ್ಲ ಭಾರತೀಯರಿಗೆ ಉತ್ತಮ ಭವಿಷ್ಯಕ್ಕಾಗಿ ನೀಡಿರುವ ಎಲ್ಲ ಭರವಸೆಗಳು ಸಂಕಷ್ಟದಲ್ಲಿರುವ ದೇಶದ ಜನರ ಮೇಲೆ ಮಾಡಿರುವ ಜೋಕ್ ಗಳು ಎಂದು ಅವರು ವ್ಯಂಗವಾಡಿದ್ದಾರೆ.
 

Trending News