ಇಂದು ಭಗತ್ ಸಿಂಗ್ ಹುಟ್ಟುಹಬ್ಬ: ಇಲ್ಲಿವೆ ಕ್ರಾಂತಿಕಾರಿಯ ಪ್ರಸಿದ್ದ ನುಡಿಮುತ್ತುಗಳು

Last Updated : Sep 28, 2018, 01:49 PM IST
ಇಂದು ಭಗತ್ ಸಿಂಗ್ ಹುಟ್ಟುಹಬ್ಬ: ಇಲ್ಲಿವೆ ಕ್ರಾಂತಿಕಾರಿಯ ಪ್ರಸಿದ್ದ ನುಡಿಮುತ್ತುಗಳು  title=

ಸೆಪ್ಟೆಂಬರ್ 28 ಭಾರತದ  ಕ್ರಾಂತಿಕಾರಿ ಹೋರಾಟಗಾರ ಭಗತಸಿಂಗ್ ಹುಟ್ಟಿದ ದಿನ. ಈ ದಿನದಂದು ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ  ಬಂಗಾದಲ್ಲಿ  1907 ರಲ್ಲಿ  ಭಗತ್ ಸಿಂಗ್ ಜನ್ಮ ತಾಳಿದರು. ಮುಂದೆ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮದೇ ಆದ ಪ್ರಮುಖ ಪಾತ್ರವನ್ನು ವಹಿಸಿದರು.ಅವರ ಹುಟ್ಟುಹಬ್ಬದ ನಿಮಿತ್ತ ನಾವು ಅವರ ಕೆಲವು ನುಡಿಮುತ್ತುಗಳನ್ನು ಮತ್ತೊಮ್ಮೆ ಸ್ಮರಿಸಬೇಕಾಗಿದೆ.

  • ಕ್ರಾಂತಿಯು ಎಲ್ಲ ವ್ಯಕ್ತಿಯ ಶಕ್ತಿಯನ್ನು ಮೀರಿಸುವಂತಹದ್ದು . ಅದನ್ನು ಯಾವುದೇ ನಿಗದಿತ ದಿನಾಂಕದಂದು  ತರಲಾಗುವುದಿಲ್ಲ. ಬದಲಾಗಿ ಅದು ವಿಶೇಷ ಪರಿಸರ, ಸಾಮಾಜಿಕ ಮತ್ತು ಆರ್ಥಿಕತೆಯಿಂದ ಉಂಟಾಗುತ್ತದೆ. ಸಂಘಟಿತ ಪಕ್ಷದ ಕಾರ್ಯವು ಈ ಸಂದರ್ಭಗಳ ಮೂಲಕ ಅಂತಹ ಅವಕಾಶವನ್ನು ಬಳಸಿಕೊಳ್ಳಬೇಕು. 
  • ಮನುಷ್ಯನ ಕರ್ತವ್ಯವು ಪ್ರಯತ್ನಿಸುವಂತಾಗಿರಬೇಕು,ಆತನ ಯಶಸ್ಸು ಮತ್ತು ಸಾಧ್ಯತೆ  ಅವನ ಪರಿಸರದ ಮೇಲೆ ಅವಲಂಬಿಸಿರುತ್ತದೆ."
  • ಕರುಣೆಯಿಲ್ಲದ ವಿಮರ್ಶೆ ಮತ್ತು ಸ್ವತಂತ್ರ ಚಿಂತನೆಯು ಕ್ರಾಂತಿಕಾರಿ ಚಿಂತನೆಯ ಎರಡು ಅಗತ್ಯ ಲಕ್ಷಣಗಳಾಗಿವೆ.
  • ಕ್ರಾಂತಿಯು ರಕ್ತ ಪಿಪಾಸಿನ ಸಂಘರ್ಷನ್ನು ಒಳಗೊಂಡಿರುವುದಲ್ಲ. ಅದು ಬಾಂಬ್ ಮತ್ತು ಪಿಸ್ತೂಲಿನ ಆರಾಧನೆಯೂ ಅಲ್ಲ . 
  • ಬೂದಿಯ ಪ್ರತಿ ಸಣ್ಣ ಅಣು ಕೂಡ ನನ್ನ ಶಾಖದಿಂದ ಚಲನೆಯಲ್ಲಿದೆ, ನಾನು ಅಂತಹ ಒಬ್ಬ ಹುಚ್ಚ ಆದ್ದರಿಂದ ಮತ್ತು ನಾನು ಜೈಲಿನಲ್ಲಿಯೂ ಸಹ ಮುಕ್ತನಾಗಿರುತ್ತೇನೆ.
  • ನಾನು ನೇಣುಗಂಬಕ್ಕೆ ಸಂತೋಷದಿಂದ ಏರುತ್ತೇನೆ. ಆ ಮೂಲಕ ಕ್ರಾಂತಿಕಾರಿಗಳು ಒಂದು ಒಳ್ಳೆಯ ಸದುದ್ದೇಶಕ್ಕಾಗಿ ತಮ್ಮನ್ನು ತಾವೇ ತ್ಯಾಗಮಾಡಲು ಎಷ್ಟು ಧೈರ್ಯದಿಂದ ಸಿದ್ದರಾಗಿರುತ್ತಾರೆ ಎನ್ನುವುದನ್ನು ಜಗತ್ತಿಗೆ ತೋರಿಸುತ್ತೇವೆ.
  • ಇದು ಮದುವೆಯಾಗಲು ಸಮಯವಲ್ಲ. ದೇಶ ನನ್ನನ್ನು ಕರೆಯುತ್ತಿದೆ. ಆದ್ದರಿಂದ ನನ್ನ ಹೃದಯ ಮತ್ತು ಆತ್ಮದೊಂದಿಗೆ ದೇಶದ ಸೇವೆ ಮಾಡಲು ನಾನು ಶಪಥವನ್ನು ತೆಗೆದುಕೊಂಡಿದ್ದೇನೆ.
  • ಅವರು ನನ್ನನ್ನು ಕೊಲ್ಲುಬಹುದು, ಆದರೆ ನನ್ನ ಆಲೋಚನೆಗಳನ್ನಲ್ಲ. ಅವರು ನನ್ನ ದೇಹವನ್ನು ಚಿದ್ರ ಮಾಡಬಹುದು ,ಆದರೆ ಅವರು ನನ್ನ ಆತ್ಮವನ್ನು ಚಿದ್ರಗೊಳಿಸಲು ಸಾಧ್ಯವಾಗುವುದಿಲ್ಲ.
  • ವ್ಯಕ್ತಿಗಳನ್ನು ಕೊಲ್ಲುವುದು ಸುಲಭ ಆದರೆ ನೀವು ಆಲೋಚನೆಗಳನ್ನು ಕೊಲ್ಲಲು ಸಾಧ್ಯವಿಲ್ಲ.
  • ನಾನು ಮನುಷ್ಯನಾಗಿದ್ದೇನೆ ಮತ್ತು ಮನುಕುಲದ ಮೇಲಿನ ಎಲ್ಲ ಪರಿಣಾಮಗಳು ನನ್ನನ್ನು ಚಿಂತಿಸುವಂತೆ ಮಾಡುತ್ತವೆ.

 

Trending News