ಟಾಲ್ ಸ್ಟಾಯ್ ಅವರ ಯುದ್ಧ ಮತ್ತು ಶಾಂತಿ ಪುಸ್ತಕ ನಿಮ್ಮ ಬಳಿ ಇರುವುದೇಕೆ..?- ಬಾಂಬೆ ಹೈಕೋರ್ಟ್ ಜಡ್ಜ್ ಪ್ರಶ್ನೆ

ಎಲ್ಗರ್ ಪರಿಷತ್-ಭೀಮಾ ಕೋರೆಗಾಂವ್ ಪ್ರಕರಣದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಬುಧವಾರದಂದು ಕೆಲವು ಪುಸ್ತಕಗಳು ಮತ್ತು ಸಿಡಿಗಳ ಪ್ರತಿಗಳನ್ನು ಇಟ್ಟುಕೊಳ್ಳುವುದರ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದೆ. 

Last Updated : Aug 29, 2019, 01:13 PM IST
ಟಾಲ್ ಸ್ಟಾಯ್ ಅವರ ಯುದ್ಧ ಮತ್ತು ಶಾಂತಿ ಪುಸ್ತಕ ನಿಮ್ಮ ಬಳಿ ಇರುವುದೇಕೆ..?- ಬಾಂಬೆ ಹೈಕೋರ್ಟ್ ಜಡ್ಜ್ ಪ್ರಶ್ನೆ    title=

ಮುಂಬೈ: ಎಲ್ಗರ್ ಪರಿಷತ್-ಭೀಮಾ ಕೋರೆಗಾಂವ್ ಪ್ರಕರಣದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಬುಧವಾರದಂದು ಕೆಲವು ಪುಸ್ತಕಗಳು ಮತ್ತು ಸಿಡಿಗಳ ಪ್ರತಿಗಳನ್ನು ಇಟ್ಟುಕೊಳ್ಳುವುದರ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದೆ.

ಬಾಂಬೆ ಹೈಕೋರ್ಟ್ ಉಲ್ಲೇಖಿಸಿರುವ ಪುಸ್ತಕ ಮತ್ತು ಸಿಡಿಗಳಲ್ಲಿ ಮಾರ್ಕ್ಸಿಸ್ಟ್ ಆರ್ಕೈವ್ಸ್, ಕಬೀರ್ ಕಲಾ ಮಂಚ್ ಬಿಡುಗಡೆ ಮಾಡಿದ 'ರಾಜ್ಯ ದಮನ್ ವಿರೋಧಿ' ಎಂಬ ಸಿಡಿ ಮತ್ತು ಲಿಯೋ ಟಾಲ್ಸ್ಟಾಯ್ ಅವರ ಸಾಹಿತ್ಯಿಕ ಕ್ಲಾಸಿಕ್ ಪುಸ್ತಕ 'ವಾರ್ ಅಂಡ್ ಪೀಸ್' ಸೇರಿವೆ."ರಾಜ್ಯ ದಮನ್ ವಿರೋಡಿ'ಯ ಶೀರ್ಷಿಕೆ ಹೊಂದಿರುವ ಸಿಡಿ ರಾಜ್ಯಕ್ಕೆ ವಿರುದ್ಧವಾಗಿ ಏನನ್ನಾದರೂ ಹೊಂದಿದೆ ಎಂದು ಸೂಚಿಸುತ್ತದೆ, 'ಯುದ್ಧ ಮತ್ತು ಶಾಂತಿ' ಮತ್ತೊಂದು ದೇಶದಲ್ಲಿ ಯುದ್ಧದ ಬಗ್ಗೆ ಹೇಳುತ್ತದೆ. ನೀವು (ಗೊನ್ಸಾಲ್ವೆಸ್) ಈ ಪುಸ್ತಕಗಳು ಮತ್ತು ಸಿಡಿಗಳನ್ನು ಮನೆಯಲ್ಲಿ ಏಕೆ ಇಟ್ಟುಕೊಂಡಿದ್ದಿರಿ? ಇದನ್ನು ನ್ಯಾಯಾಲಯಕ್ಕೆ ವಿವರಿಸಿ " ಎಂದು ನ್ಯಾಯಮೂರ್ತಿ ಸಾರಂಗ್ ಕೊಟ್ವಾಲ್ ಅವರ ಏಕ-ನ್ಯಾಯಾಧೀಶರ ಪೀಠ ಪ್ರಶ್ನಿಸಿದೆ. 

ಗೊನ್ಸಾಲ್ವೆಸ್ ಅವರ ಜಾಮೀನು ಅರ್ಜಿಯನ್ನು ಆಲಿಸುವಾಗ ನ್ಯಾಯಾಧೀಶರು ಈ ಅವಲೋಕನಗಳನ್ನು ಮಾಡಿದರು. ಎಲ್ಗರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕರ್ತರ ನಿವಾಸಗಳು ಮತ್ತು ಕಚೇರಿಗಳಲ್ಲಿ ದಾಳಿ ನಡೆಸಿದ ನಂತರ ಗೊನ್ಸಾಲ್ವೆಸ್ ಅವರನ್ನು ಪುಣೆ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಬಂಧಿಸಿದ್ದರು.ಭೀಮಾ ಕೋರೆಗಾಂವ್ ಕದನದ 200 ನೇ ವಾರ್ಷಿಕೋತ್ಸವದ ನೆನಪಿಗಾಗಿ ಮರುದಿನ ನಡೆದ ಪುಣೆ ಜಿಲ್ಲೆಯ ಭೀಮಾ-ಕೋರೆಗಾಂವ್ ಗ್ರಾಮದ ಸುತ್ತ ನಡೆದ ಜಾತಿ ಹಿಂಸಾಚಾರಕ್ಕೆ 2017 ರ ಡಿಸೆಂಬರ್ 31 ರಂದು ಪರಿಷತ್‌ನಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಕಾರಣವೆಂದು ಪೊಲೀಸರು ಹೇಳಿಕೊಂಡಿದ್ದರು. ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇತರರು ಗಾಯಗೊಂಡಿದ್ದರು.

ಪುಣೆಯ ಐತಿಹಾಸಿಕ ಶನಿವಾರ ವಾಡದಲ್ಲಿ ಸಭೆ ಆಯೋಜಿಸುವಲ್ಲಿ ನಕ್ಸಲ್ ಸಂಪರ್ಕವಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈ ಪ್ರಕರಣದಲ್ಲಿ ಬಂಧಿತರಾಗಿರುವ ಇತರ ಆರೋಪಿಗಳಾದ ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರಾದ ಶೋಮಾ ಸೇನ್, ರೋನಾ ವಿಲ್ಸನ್, ಸುಧಾ ಭಾರದ್ವಾಜ್, ಅರುಣ್ ಫೆರೀರಾ, ಮತ್ತು ಗೌತಮ್ ನವಲಖಾ ಸೇರಿದ್ದರು.

 

Trending News