ಬಾಡಿಗೆ ಕೊಡದ ಏರಸೆಲ್ ಹಾಗೂ ಜಿ.ಟಿ.ಎಲ್ ಕಂಪನಿಗೆ ದಂಡದ ಜೊತೆ ಟಾವರ್ ಖಾಲಿ ಮಾಡಿಕೊಂಡು ಹೋಗಲು ಆದೇಶ

ಹುಬ್ಬಳ್ಳಿಯ ಅಕ್ಷಯ ಕಾಲೋನಿಯ ನಿವಾಸಿಗಳಾದ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ರವರು ಧಾರವಾಡದ ಹಳೆ ಹುಲ್ಲಿನ ಮಾರುಕಟ್ಟೆಯಲ್ಲಿರುವ ತಮ್ಮ ಮಾಲೀಕತ್ವದ 700 ಚ.ಅ. ಖುಲ್ಲಾ ಜಾಗೆಯನ್ನು ಪ್ರತಿ ತಿಂಗಳ ಬಾಡಿಗೆ ಕೊಡುವ ಕರಾರಿನ ಮೇಲೆ ಏರಸೆಲ್ ಕಂಪನಿಗೆ ಟಾವರ್ ಹಾಕಿಕೊಳ್ಳಲು ಕೊಟ್ಟಿದ್ದರು.

Written by - Manjunath N | Last Updated : Dec 21, 2023, 04:21 PM IST
  • ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಬಾಕಿ ಇರುವ ರೂ.7,92,798/- ಬಾಡಿಗೆ ಮತ್ತು ತೀರ್ಪು ನೀಡಿದ ದಿನಾಂಕದಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಆದೇಶಿಸಿದೆ.
  • ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ.50,000/- ಪರಿಹಾರ ಮತ್ತು ರೂ.2,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎದುರುದಾರರಿಗೆ ಸೂಚಿಸಿದೆ
 ಬಾಡಿಗೆ ಕೊಡದ ಏರಸೆಲ್ ಹಾಗೂ ಜಿ.ಟಿ.ಎಲ್ ಕಂಪನಿಗೆ ದಂಡದ ಜೊತೆ ಟಾವರ್ ಖಾಲಿ ಮಾಡಿಕೊಂಡು ಹೋಗಲು ಆದೇಶ title=

ಧಾರವಾಡ: ಹುಬ್ಬಳ್ಳಿಯ ಅಕ್ಷಯ ಕಾಲೋನಿಯ ನಿವಾಸಿಗಳಾದ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ರವರು ಧಾರವಾಡದ ಹಳೆ ಹುಲ್ಲಿನ ಮಾರುಕಟ್ಟೆಯಲ್ಲಿರುವ ತಮ್ಮ ಮಾಲೀಕತ್ವದ 700 ಚ.ಅ. ಖುಲ್ಲಾ ಜಾಗೆಯನ್ನು ಪ್ರತಿ ತಿಂಗಳ ಬಾಡಿಗೆ ಕೊಡುವ ಕರಾರಿನ ಮೇಲೆ ಏರಸೆಲ್ ಕಂಪನಿಗೆ ಟಾವರ್ ಹಾಕಿಕೊಳ್ಳಲು ಕೊಟ್ಟಿದ್ದರು.

ಜೂನ್-2009 ರಿಂದ ಜೂನ-2024 ರವರೆಗೆ ಕರಾರು ಅವಧಿ ಇತ್ತು. ಪ್ರತಿ ತಿಂಗಳು ಸರಿಯಾಗಿ ಬಾಡಿಗೆ ಕೊಡುವಂತೆ ಕರಾರು ಇತ್ತು. ನವೆಂಬರ್-2017ರವರೆಗೆ ಬಾಡಿಗೆ ಕೊಡುತ್ತಾ ಬಂದ ಏರಸೆಲ್ ಕಂಪನಿಯವರು ನಂತರದ ಅವಧಿಗೆ ಬಾಡಿಗೆ ಕೊಡವುದನ್ನು ನಿಲ್ಲಿಸಿದ್ದರು. ಈ ಮಧ್ಯದಲ್ಲಿ ಏರಸೆಲ್ ಕಂಪನಿ ಜಿ.ಟಿ.ಎಲ್. ಕಂಪನಿಯಲ್ಲಿ ಸೇರಿಕೊಂಡಿದೆ ಅಂತಾ ಹೇಳಿದ್ದರು. ದೂರುದಾರರು ಹಲವಾರು ಬಾರಿ ಬಾಡಿಗೆ ಕೊಡುವಂತೆ ಕೇಳಿಕೊಂಡರೂ ಎದುರುದಾರರ ಕಂಪನಿಯವರು ಅವರಿಗೆ ಬಾಡಿಗೆ ಕೊಟ್ಟಿರಲಿಲ್ಲ. ತಮಗೆ ಎದುರುದಾರರು ಮೋಸ ಮಾಡಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಬ್ಬರೂ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:20/04/2023 ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ!

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಉಭಯತರ ಮಧ್ಯ ಆಗಿರುವ ಬಾಡಿಗೆ ಕರಾರಿನ ಪ್ರಕಾರ ಪ್ರತಿ ತಿಂಗಳು ಎದುರುದಾರರು ದೂರುದಾರರಿಗೆ ಬಾಡಿಗೆ ಕೊಡಬೇಕಾಗಿದೆ. ಡಿಸೆಂಬರ್-2017 ರಿಂದ ದೂರು ದಾಖಲಾದ ಎಪ್ರಿಲ್-2023 ರವರೆಗೆ ಸುಮಾರು 6 ವರ್ಷದ ಬಾಡಿಗೆ ರೂ.7,92,798/- ಆಗುತ್ತದೆ. ಹಲವು ಬಾರಿ ಕೇಳಿದರೂ ಎದುರುದಾರ ಏರಸೆಲ್ ಕಂಪನಿಯವರು ಬಾಡಿಗೆ ಕೊಡದೇ ದೂರುದಾರರಿಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಇದನ್ನೂ ಓದಿ: ಸಂಬಳ ಕೇಳಿದ ಸಿಬ್ಬಂದಿಗೆ ಬೆದರಿಕೆ ಹಾಕಿದ್ರಾ ಪಿಡಿಒ..?

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಬಾಕಿ ಇರುವ ರೂ.7,92,798/- ಬಾಡಿಗೆ ಮತ್ತು ತೀರ್ಪು ನೀಡಿದ ದಿನಾಂಕದಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಆದೇಶಿಸಿದೆ. ಬಾಡಿಗೆ ಕರಾರಿನ ಷರತ್ತನ್ನು ಏರಸೆಲ್ ಕಂಪನಿಯವರು ಉಲ್ಲಂಘಿಸಿರುವುದರಿಂದ ಟಾವರ್ ಹಾಕಿದ ಸಲಕರಣೆಗಳನ್ನು ಕಿತ್ತುಕೊಂಡು ಖುಲ್ಲಾ ಜಾಗೆಯ ಸ್ವಾಧೀನತೆಯನ್ನು ದೂರುದಾರರಿಗೆ ಕೊಡುವಂತೆ ಆಯೋಗ ಎದುರುದಾರರಿಗೆ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ.50,000/- ಪರಿಹಾರ ಮತ್ತು ರೂ.2,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎದುರುದಾರರಿಗೆ ಸೂಚಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

 

Trending News