ಸಿದ್ದರಾಮಯ್ಯ ₹1000 ನೋಟಿನಂತೆ, ಡಿಕೆಶಿ ₹2000 ನೋಟಿನಂತೆ: ಬಿಜೆಪಿ ಟೀಕೆ

Congress Vs BJP: 1000 ರೂ. ನೋಟು ಬದಲಾವಣೆಗೆ ಬ್ಯಾಂಕ್‌ ಬಾಗಿಲು ಮುಚ್ಚಿದಂತೆ ಸಿದ್ದರಾಮಯ್ಯರಿಗೆ ಮಲ್ಲಿಕಾರ್ಜುನ್ ಖರ್ಗೆ ಬಂದ ಮೇಲಂತೂ ಹೈಕಮಾಂಡ್ ಬಾಗಿಲು ಮುಚ್ಚೇ ಹೋಗಿದೆ ಎಂದು ಬಿಜೆಪಿ ಕುಟುಕಿದೆ.

Written by - Puttaraj K Alur | Last Updated : Jan 4, 2023, 03:32 PM IST
  • ಸಿದ್ದರಾಮಯ್ಯ ಹಳೇ ₹1000 ನೋಟಿನಂತೆ, ತಕ್ಷಣಕ್ಕೆ ಜನ ನೋಡಿ ಕಣ್ಣಿಗೊತ್ತಿಕೊಂಡರೂ ಪ್ರಯೋಜನವಿಲ್ಲ
  • ಸಾವಿರ ರೂ. ಮುಖಬೆಲೆಯ ನೋಟು ರದ್ದಾಗಿ 2 ಸಾವಿರದ ನೋಟು ಬಂದಂತೆ ಡಿ.ಕೆ.ಶಿವಕುಮಾರ್ ಬಂದಿದ್ದಾರೆ
  • ಮಲ್ಲಿಕಾರ್ಜುನ್ ಖರ್ಗೆ ಬಂದ ಮೇಲಂತೂ ಸಿದ್ದರಾಮಯ್ಯರಿಗೆ ಹೈಕಮಾಂಡ್ ಬಾಗಿಲು ಮುಚ್ಚೇ ಹೋಗಿದೆ
ಸಿದ್ದರಾಮಯ್ಯ ₹1000 ನೋಟಿನಂತೆ, ಡಿಕೆಶಿ ₹2000 ನೋಟಿನಂತೆ: ಬಿಜೆಪಿ ಟೀಕೆ title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ 1000 ರೂ.ನೋಟಿನಂತೆ ಕಾಂಗ್ರೆಸ್‍ನಲ್ಲಿ ಬೆಲೆ ಇಲ್ಲದಂತಾಗಿದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 2000 ರೂ.ನೋಟಿನಂತೆ ಚಲಾವಣೆಯಲ್ಲಿದ್ದಾರೆಂದು ಬಿಜೆಪಿ ಟೀಕಿಸಿದೆ. #CorruptCongress ಹ್ಯಾಶ್‍ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದೆ.

ಕಾಂಗ್ರೆಸ್ ಪಾಳಯದಲ್ಲಿ ಇತ್ತೀಚೆಗೆ ಒಂದು ಮಾತು ಕೇಳಿ ಬರುತ್ತಿದೆ. ಸಿದ್ದರಾಮಯ್ಯನವರು ಹಳೇ 1000 ರೂ. ನೋಟಿನ ಹಾಗೆ. ತಕ್ಷಣಕ್ಕೆ ಜನರು ನೋಡಿ ಕಣ್ಣಿಗೊತ್ತಿಕೊಂಡರೂ ಅದು ಚಲಾವಣೆಯಲ್ಲಿಲ್ಲವೆಂಬುದು ಎಲ್ಲರಿಗೂ ತಿಳಿದಿದೆ. ನೋಟು ಅಮಾನ್ಯೀಕರಣವಾದಾಗ ಬಹಳ ಅವಕಾಶವಿದ್ದರೂ ಅವರು ನೋಟು ಬದಲಾವಣೆಗೆ ಬ್ಯಾಂಕ್‌ಗೆ ಹೋಗಲೇ ಇಲ್ಲ. ಬದಲಿಗೆ ನಾನೇ ಅಂತಿಮ ಎಂದುಕೊಂಡರು’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: Viral video : ಜೀವದ ಹಂಗು ತೊರೆದು ಕಾಗೆ ರಕ್ಷಣೆ ಮಾಡಿದ ಟ್ರಾಫಿಕ್ ಹೆಡ್ ಕಾನ್ಸಟೇಬಲ್

‘ಸಾವಿರ ರೂ. ನೋಟು ರದ್ದಾಗಿ 2 ಸಾವಿರದ ನೋಟು ಬಂದಂತೆ ಡಿ.ಕೆ.ಶಿವಕುಮಾರ್ ಬಂದಿದ್ದಾರೆ. ದುರಂತ ಏನು ಎಂದರೆ ಈಗ 1000 ರೂ. ನೋಟು ಬದಲಾವಣೆಗೆ ಬ್ಯಾಂಕ್‌ ಬಾಗಿಲು ಮುಚ್ಚಿದಂತೆ ಸಿದ್ದರಾಮಯ್ಯರಿಗೆ ಮಲ್ಲಿಕಾರ್ಜುನ್ ಖರ್ಗೆ ಬಂದ ಮೇಲಂತೂ ಹೈಕಮಾಂಡ್ ಬಾಗಿಲು ಮುಚ್ಚೇ ಹೋಗಿದೆ’ ಎಂದು ಕುಟುಕಿದೆ.

‘ತಮ್ಮ ಪರಿಸ್ಥಿತಿಯೇ ಪಕ್ಷದಲ್ಲಿ ಕರೆಂಟ್ ತಂತಿಗೆ ಸಿಕ್ಕ ಗಾಳಿಪಟದಂತಾಗಿರುವಾಗ, ಸಿದ್ದರಾಮಯ್ಯನವರು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಸಾರ್ವಜನಿಕ ಸಭೆಯಲ್ಲಿ ನಿಂದಿಸಿದ್ದಾರೆ‌. ಸಿದ್ದರಾಮಯ್ಯನವರು ಬೊಮ್ಮಾಯಿವರು ಯಾರು ಎಂದು‌ ಹೇಳುವುದು ಹಾಗಿರಲಿ, ಡಿಕೆಶಿ ಮತ್ತು  ಖರ್ಗೆ ಸೇರಿ ಎಲ್ಲಿ ಖೆಡ್ಡಾ ತೋಡಿದ್ದಾರೆ ನೋಡಿಕೊಳ್ಳಲಿ’ ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Mysuru: ಅಗ್ನಿಶಾಮಕ ವಸತಿ ಗೃಹದಲ್ಲಿ ಸಿಲೆಂಡರ್ ಸ್ಫೋಟ, 10ಕ್ಕೂ ಹೆಚ್ಚು ಮಂದಿಗೆ ಗಾಯ!

‘ರಾಜ್ಯದ ಜನತೆ ಕಾಂಗ್ರೆಸ್‌ನಿಂದ ದೂರ ಉಳಿಯಬೇಕಿದೆ. ಇವರಿವರೇ ಕುರ್ಚಿಗಾಗಿ ಕಿತ್ತಾಡುತ್ತಿದ್ದರೆ, ಅತ್ತ ಪಿಎಫ್‌ಐ‌ ಉಗ್ರ ಸಂಘಟನೆಗಳಿಂದ‌‌ ಕೊಲೆ, ಲವ್ ಜಿಹಾದ್,‌ ಮತಾಂತರ ಆಗುತ್ತಿರುತ್ತದೆ.‌ ಇದೇ ಕಾರಣಕ್ಕೆ ಇವರ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೊಗೆದಿದ್ದಲ್ಲವೇ? ಬಿಜೆಪಿಯ ಸರ್ಕಾರವಷ್ಟೇ ಇವರ ಉಪಟಳಕ್ಕೆ ಮದ್ದು’ ಎಂದು ಬಿಜೆಪಿ ಕಿಡಿಕಾರಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News