ವೋಟ್ ಮಾತ್ರ ಮೋದಿಗೆ, ಕೆಲ್ಸಕ್ಕೆ ನಾನ್ ಬೇಕಾ?: ಸಿಎಂ ಕುಮಾರಸ್ವಾಮಿ ಕಿಡಿ

ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾನು ಬೇಕು, ವೋಟ್ ಮಾತ್ರ ಮೋದಿಗೆ ಹಾಕ್ತೀರಾ ಎಂದು ಸಿಎಂ ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.

Last Updated : Jun 26, 2019, 03:50 PM IST
ವೋಟ್ ಮಾತ್ರ ಮೋದಿಗೆ, ಕೆಲ್ಸಕ್ಕೆ ನಾನ್ ಬೇಕಾ?: ಸಿಎಂ ಕುಮಾರಸ್ವಾಮಿ ಕಿಡಿ title=

ರಾಯಚೂರು: ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾನು ಬೇಕು, ವೋಟ್ ಮಾತ್ರ ಮೋದಿಗೆ ಹಾಕ್ತೀರಾ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಭಟನಾಕಾರರ ವಿರುದ್ಧ ಕಿಡಿ ಕಾರಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೇಗುಡ್ಡಕ್ಕೆ ಬುಧವಾರ ಗ್ರಾಮವಾಸ್ತವ್ಯಕ್ಕಾಗಿ ಸಿಎಂ ತೆರಳುತ್ತಿದ್ದ ಸಾರಿಗೆ ಬಸ್ಸನ್ನು ಯರಮರಸ್ ಬಳಿ ಮುತ್ತಿಗೆ ಹಾಕಿದ ವೈಟಿಪಿಎಸ್‌ ಕಾರ್ಮಿಕರು, ಬಾಕಿ ವೇತನ ಪಾವತಿ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. 

ಇದೇ ಸಂದರ್ಭದಲ್ಲಿ ಬಸ್ಸಿನ ಕಿಟಕಿ ಬಳಿ ಕೆಲಸ ಕೊಡಿಸುವಂತೆ ಕೂಗಾಡಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರ ವಿರುದ್ಧ ಕೋಪಗೊಂಡ ಸಿಎಂ ಕುಮಾರಸ್ವಾಮಿ ಅವರು, ಮೋದಿಗೆ ವೋಟ್ ಹಾಕ್ತೀರ. ಕೆಲ್ಸಕ್ಕೆ ನಾನ್ ಬೇಕಾ? ಇದು ಕೇಳುವ ರೀತಿಯೇ? ನಿಮ್ಮ ಮೇಲೆ ಲಾಠಿ ಚಾರ್ಜ್ ಮಾಡಬೇಕಾ? ಎಂದು ಕಿಡಿ ಕಾರಿದರು.

ಈ ಹಿಂದೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿಯೂ ಸಿಎಂ ಇದೇ ರೀತಿ ಕಿಡಿ ಕಾರಿದ್ದರು. 
 

Trending News