ಸೇವಾ ನ್ಯೂನ್ಯತೆ ಎಸಗಿದ ಎಸ್.ಎಸ್.ವಿ ಶೇಲ್ಟರ್ಸ್‍ಗೆ ಬಡ್ಡಿಯೊಂದಿಗೆ ರೂ. 8 ಲಕ್ಷ 50 ಸಾವಿರ ಹಣ ಹಿಂದಿರುಗಿಸಲು ಗ್ರಾಹಕರ ಆಯೋಗದ ಆದೇಶ

ಹುಬ್ಬಳ್ಳಿಯ ವಿದ್ಯಾನಗರದ ವಿಜಯಕುಮಾರ ಬಗಾಡೆ ಎಂಬುವವರು 2013 ರಲ್ಲಿ ಹುಬ್ಬಳ್ಳಿಯ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ಮಾಡಲು ಇಚ್ಚಿಸಿ ಎದುರುದಾರ ಎಸ್.ಎಸ್.ವಿ. ಶೇಲ್ಟರ್ಸ್ ನಿರ್ಮಿಸುತ್ತಿದ್ದ ಹುಬ್ಬಳ್ಳಿ ಸೆಂಟರ್‍ನಲ್ಲಿ ನಂ.31ಎ, 165 ಚ.ಪೂ ವಿಸ್ರ್ತಿಣದ ಮಳಿಗೆ ಖರೀದಿಸಲು ರೂ.8 ಲಕ್ಷ 50 ಸಾವಿರಗಳಿಗೆ ದಿ.21/02/2013 ರಂದು ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಸದರಿ ಒಪ್ಪಂದದಂತೆ ದೂರುದಾರ ಎದುರುದಾರರಿಗೆ ಎಲ್ಲ ಹಣವನ್ನು ಸಂದಾಯ ಮಾಡಿದ್ದರು.

Written by - Manjunath N | Last Updated : Dec 20, 2023, 06:42 PM IST
  • ಎದುರುದಾರರು ಒಪ್ಪಂದ ಪತ್ರದ ಪ್ರಕಾರ ನಿಗಧಿತ ಅವಧಿಯಲ್ಲಿ ನಂ.31ಎ ಮಳಿಗೆಯ ಕಬ್ಜಾ ನೀಡಿರುವುದಿಲ್ಲ ಹಾಗೂ ಖರೀದಿ ಪತ್ರವನ್ನು ಮಾಡಿಕೊಟ್ಟಿರುವುದಿಲ್ಲ.
  • ಎಸ್.ಎಸ್ ವಿ ಶೇಲ್ಟರ್ಸ್‍ರವರ ಇಂತಹ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ
ಸೇವಾ ನ್ಯೂನ್ಯತೆ ಎಸಗಿದ ಎಸ್.ಎಸ್.ವಿ ಶೇಲ್ಟರ್ಸ್‍ಗೆ ಬಡ್ಡಿಯೊಂದಿಗೆ ರೂ. 8 ಲಕ್ಷ 50 ಸಾವಿರ ಹಣ ಹಿಂದಿರುಗಿಸಲು ಗ್ರಾಹಕರ ಆಯೋಗದ ಆದೇಶ title=

ಧಾರವಾಡ : ಹುಬ್ಬಳ್ಳಿಯ ವಿದ್ಯಾನಗರದ ವಿಜಯಕುಮಾರ ಬಗಾಡೆ ಎಂಬುವವರು 2013 ರಲ್ಲಿ ಹುಬ್ಬಳ್ಳಿಯ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ಮಾಡಲು ಇಚ್ಚಿಸಿ ಎದುರುದಾರ ಎಸ್.ಎಸ್.ವಿ. ಶೇಲ್ಟರ್ಸ್ ನಿರ್ಮಿಸುತ್ತಿದ್ದ ಹುಬ್ಬಳ್ಳಿ ಸೆಂಟರ್‍ನಲ್ಲಿ ನಂ.31ಎ, 165 ಚ.ಪೂ ವಿಸ್ರ್ತಿಣದ ಮಳಿಗೆ ಖರೀದಿಸಲು ರೂ.8 ಲಕ್ಷ 50 ಸಾವಿರಗಳಿಗೆ ದಿ.21/02/2013 ರಂದು ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಸದರಿ ಒಪ್ಪಂದದಂತೆ ದೂರುದಾರ ಎದುರುದಾರರಿಗೆ ಎಲ್ಲ ಹಣವನ್ನು ಸಂದಾಯ ಮಾಡಿದ್ದರು.

ಇದನ್ನೂ ಓದಿ: ‘ಕಾಟೇರ’ದಲ್ಲಿ ದರ್ಶನ್ ಜೊತೆ ನಟಿಸಲು ಮಾಲಾಶ್ರೀ ಮಗಳು ಆರಾಧನಾ ಪಡೆದ ಸಂಭಾವನೆ ಎಷ್ಟು?

ಎದುರುದಾರರು ಒಪ್ಪಂದ ಪತ್ರದ ಪ್ರಕಾರ ನಿಗಧಿತ ಅವಧಿಯಲ್ಲಿ ನಂ.31ಎ ಮಳಿಗೆಯ ಕಬ್ಜಾ ನೀಡಿರುವುದಿಲ್ಲ ಹಾಗೂ ಖರೀದಿ ಪತ್ರವನ್ನು ಮಾಡಿಕೊಟ್ಟಿರುವುದಿಲ್ಲ. ಎಸ್.ಎಸ್ ವಿ ಶೇಲ್ಟರ್ಸ್‍ರವರ ಇಂತಹ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ದಿ.25/10/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಐಶ್ವರ್ಯಾ ರೈ ಇಷ್ಟವಿರಲಿಲ್ಲ… ಈ ನಟಿಯನ್ನೇ ಅಭಿಷೇಕ್’ಗೆ ಮದುವೆ ಮಾಡಿಸಬೇಕೆಂದಿದ್ದರು ಜಯಾ ಬಚ್ಚನ್!

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ. ಹಿರೇಮಠ ಅವರು 2013 ರಲ್ಲಿ ದೂರುದಾರನಿಂದ ರೂ.8 ಲಕ್ಷ 50 ಸಾವಿರ ಹಣ ಪಡೆದುಕೊಂಡು ಎದುರುದಾರರು ದೂರುದಾರರಿಗೆ ಅವರು ಒಪ್ಪಂದ ಮಾಡಿಕೊಂಡ ಹುಬ್ಬಳ್ಳಿ ಸೆಂಟರ್‍ನ ಮಳಿಗೆ ಸಂಖ್ಯೆ. 31ಎ ಖರೀದಿ ಪತ್ರ ಬರೆದು ಕೊಡದೇ ಅವರಿಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರರು ಸಂದಾಯ ಮಾಡಿದ ರೂ.8 ಲಕ್ಷ 50 ಸಾವಿರ ಮತ್ತು ಅದರ ಮೇಲೆ ದಿ:09/02/2013 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎಸ್.ಎಸ್.ವಿ. ಶೇಲ್ಟರ್ಸ್‍ರವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

 

 

Trending News