ಕೋವಿಡ್ ಹಗರಣ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಿ : ಪಿಎಸಿ ಶಿಫಾರಸು

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ  ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಿ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ವರದಿಯಲ್ಲಿ ಶಿಫಾರಸು‌ ಮಾಡಿದೆ.   

Written by - RACHAPPA SUTTUR | Edited by - Savita M B | Last Updated : Jul 17, 2023, 02:27 PM IST
  • ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯನ್ನು ಮಂಡಿಸಲಾಯಿತು.
  • ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು‌ ಉಲ್ಲೇಖ ಮಾಡಲಾಗಿದೆ.
  • ಸಮಗ್ರ ಮಾಹಿತಿ ಮತ್ತು ಪೂರಕ ದಾಖಲೆಗಳನ್ನು ಆರೋಗ್ಯ ಇಲಾಖೆ ಸಲ್ಲಿಸಿಲ್ಲ
ಕೋವಿಡ್ ಹಗರಣ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಿ : ಪಿಎಸಿ ಶಿಫಾರಸು title=

ಬೆಂಗಳೂರು: ಸೋಮವಾರ ವಿಧಾನಸಭೆಯಲ್ಲಿ ರಾಮಲಿಂಗಾ ರೆಡ್ಡಿ ನೇತೃತ್ವದ 2020-21 ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯನ್ನು ಮಂಡಿಸಲಾಯಿತು. ಕೊರೋನಾ ನಿಯಂತ್ರಣ ದಲ್ಲಿ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಕುರಿತು ವಿಶ್ಲೇಷಣಾತ್ಮಕ ವರದಿ ಯಲ್ಲಿ,ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು‌ ಉಲ್ಲೇಖ ಮಾಡಲಾಗಿದೆ.

ಆರೋಗ್ಯ ಇಲಾಖೆ ನಡೆಸಿದ ಉಪಕರಣಗಳು,ಔಷಧ ಸಾಮಾಗ್ರಿಗಳ ಖರೀದಿ ಮತ್ತು ಸದ್ಭಳಕೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಂಚಿಕೆ,ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಿದ್ದ ಮೊತ್ತ, ವಿವಿಧ ಇಲಾಖೆಗಳಿಂದ ಭರಿಸಲಾಗಿದ್ದ ವೆಚ್ಚ ಕುರಿತಂತೆ ಸಮಗ್ರ ಮಾಹಿತಿ ಮತ್ತು ಪೂರಕ ದಾಖಲೆಗಳನ್ನು ಆರೋಗ್ಯ ಇಲಾಖೆ ಸಲ್ಲಿಸಿಲ್ಲ.‌ಸಾಕಷ್ಟು ಕಾಲಾವಕಾಶ ನೀಡಿದ್ದರೂ ಆರೋಗ್ಯ ಇಲಾಖೆ ಸಲ್ಲಿಸಿಲ್ಲ ಎಂದು‌ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ-ರೈತರ ಜಮೀನಿನಲ್ಲಿ ಬಿಯರ್ ಬಾಟಲಿ ಸದ್ದು, ಬೆಳೆಗೆ ಕಾಡುತ್ತಿವೆ ಚಿಗರಿ

ವರದಿಯ ಹೈಲೈಟ್ಸ್
*ಕೋವಿಡ್ ನಿಯಂತ್ರಣಕ್ಕೆ 2021 ಫೆಬ್ರವರಿಯಲ್ಲಿ ಹೆಮಟಾಲಜಿ ಸೆಲ್ ಕೌಂಟ್ ಯೂನಿಟ್ ಖರೀದಿಯಲ್ಲಿ 19,85,85,100 ರೂ. ನಷ್ಟು ಅಧಿಕ ವೆಚ್ಚ.

*ಆರೋಗ್ಯ ಇಲಾಖೆಯಿಂದ ವಾಸ್ತವಿಕ ಸತ್ಯ ಮರೆಮಾಚಿ ಪಿಎಸಿಗೆ ತಪ್ಪು ಉತ್ತರ ಸಲ್ಲಿಕೆ.

*ರಾಜ್ಯದ ಹಿತ ಬದಿಗೊತ್ತಿ ಸರಬರಾಜುದಾರರಿಂದ ಪ್ರತಿಫಲ ನಿರೀಕ್ಷಿಸಿ ಖರೀದಿ ಪ್ರಕ್ರಿಯೆ ನಡೆಸಿರುವ ಸಂದೇಹ.

*ಬೊಕ್ಕಸಕ್ಕೆ ನಷ್ಟ ಉಂಟುಮಾಡಲು ಕಾರಣಕರ್ತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.

*2021 ಏಪ್ರಿಲ್ ನಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್ ಖರೀದಿಯಲ್ಲಿ ಅಧಿಕ ವೆಚ್ಚ.

*ಮೆ/ ಸುದರ್ಶನ್ ಫಾರ್ಮಾ ಇಂಡಸ್ಟ್ರೀಸ್ ನಿಂದ ಒಪ್ಪಿದಂತಹ ಆರ್ ಎಟಿ ಕಿಟ್ ಸರಬರಾಜು ಆಗದಿದ್ದರೂ ಕಂಪನಿಗೆ ತೋರಿಕೆ ನೋಟೀಸ್.

*ಆರೋಗ್ಯ ಇಲಾಖೆ ಮತ್ತು ಸರಬರಾಜುದಾರರ ನಡುವೆ ಕಾನೂನು ಬಾಹಿರ ಹೊಂದಾಣಿಕೆಯ ಸಂದೇಹ.

*ಮೆ/ ಟ್ರಿವಿಟ್ರಾನ್ ಹೆಲ್ತ್ ಕೇರ್ ಪ್ರೈ. ಲಿ. ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಆರೋಗ್ಯ ಇಲಾಖಾಧಿಕಾರಿಗಳಿಂದ ಲೋಪ.

*ಸರ್ಕಾರದ ಸೂಚನೆ ಗಾಳಿಗೆ ತೂರಿ ಏಕಪಕ್ಷೀಯವಾಗಿ ಐವರ್ ಮೆಕ್ಟಿನ್ ಔಷಧ ಖರೀದಿ.

*ಕಪ್ಪು ಶಿಲೀಂಧ್ರ ರೋಗದ ಚಿಕಿತ್ಸೆಗೆ 1 ಲಕ್ಷ ವಯಲ್ಸ್ ಆಂಪೋಟೆರೆಸಿನ್ ಔಷಧಿ ಖರೀದಿ ವೇಳೆ ಎರಡನೇ ಕನಿಷ್ಠ ಬಿಡ್ ದಾರರಾಗಿದ್ದ ಮೆ/ ಮೈಲಾನ್ ಫಾರ್ಮಾಸಿಟಿಕಲ್ ಸಂಸ್ಥೆಯಿಂದ ಖರೀದಿಸಿ 1.14 ಕೋ.ರೂ. ಅಧಿಕ ವೆಚ್ಚ

*ಆಪ್ತಮಿತ್ರ ಟೆಲಿಮೆಡಿಸಿನ್ ಖರೀದಿ ಗುತ್ತಿಗೆ ಪ್ರತ್ಯೇಕ ಕಂಪನಿಗಳಿಗೆ ನೀಡಿ ಪ್ರಚಲಿತ ಟೆಂಡರ್ ನಿಯಮ ಪಾಲಿಸದೇ ಲೋಪ ಮತ್ತು ಖಾಸಗಿ ಸಂಸ್ಥೆಗಳಿಗೆ ಹೆಚ್ಚಿನ ಲಾಭ ಮಾಡಿಕೊಡುವ ಹುನ್ನಾರ.

*ಪಿಎಂ ಕೇರ್ಸ್ ನಿಧಿಯಿಂದ ಸ್ವೀಕರಿಸಲಾದ ವೆಂಟಿಲೇಟರ್ ಗಳನ್ನು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ನೀಡದೇ ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆ.

*ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳ ಅಭಾವ ಇರಲಿಲ್ಲವೆಂದು ಸರ್ಕಾರಕ್ಕೆ ತಪ್ಪು ಮಾಹಿತಿ ಸಲ್ಲಿಕೆ.

*ಪ್ರಮಾದದ ಅಮಾನವೀಯ, ಅಸತ್ಯ, ದುರಂಹಕಾರದ ಉತ್ತರ ನೀಡಿ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸಂವಿಧಾನ ಮಾನ್ಯತೆಯುಳ್ಳ ಸಮಿತಿಗೆ ಅವಮಾನ.

*ಪಿಎಂ ಕೇರ್ಸ್ ನಿಂದ ಹಂಚಿಕೆ ಮಾಡಲಾದ ವೆಂಟಿಲೇಟರ್ ಗಳನ್ನು ಹಿಂಪಡೆಯಬೇಕು.

*ಔಷಧಗಳ ಖರೀದಿಯಲ್ಲಿ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಮಂದಗತಿಯ ಕಾರ್ಯನಿರ್ವಹಣೆ.

*ಡೆತ್ ಆಡಿಟ್ ಮತ್ತು 2021 ರ ಕೋವಿಡ್ ಮರಣ ಪ್ರಮಾಣ ಹೋಲಿಸಿದರೆ 2020 ಕ್ಕಿಂತ ಬಹಳ ಏರಿಕೆ.

*ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಇತರೆ ಮಹಾನಗರಗಳಿಂತ ಮರಣ ಪ್ರಮಾಣ ಸಾಕಷ್ಟು ಹೆಚ್ಚಳ

*ರಾಜ್ಯದಲ್ಲಿನ ಚಿಕಿತ್ಸಾ ವ್ಯವಸ್ಥೆ, ಸೋಂಕಿತರನ್ನು ಪತ್ತೆ ಮಾಡುವಲ್ಲಿನ ವಿಳಂಬತೆ, ಪರೀಕ್ಷಾ ಸಾಮರ್ಥ್ಯ, ಪರೀಕ್ಷಾ ವರದಿ ನೀಡುವಲ್ಲಿ ವಿಳಂಬ, ಔಷಧಿ ಕೊರತೆ, ಆಕ್ಸಿಜನ್ ಕೊರತೆ ಮುಂದಾದವುಗಳಲ್ಲಿ ಇಲಾಖಾ ದೋಷಗಳು.

ಇದನ್ನೂ ಓದಿ-ಕೊಟ್ಟ ಮಾತಿನಂತೆ PTCL ಕಾಯ್ದೆ ತಿದ್ದುಪಡಿ ತರಲು ಮುಂದಾಗಿದ್ದೇವೆ: ಸಿದ್ದರಾಮಯ್ಯ

*ಬೇಜವಾಬ್ದಾರಿಯಿಂದ ಸುಮಾರು 1,20,708 ರಷ್ಟು ಮರಣ ಸಂಖ್ಯೆ ಕಡಿಮೆ ತೋರಿಸಿ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಘೋರ ಅಪರಾಧ.

*ಐಸಿಎಂಆರ್ ಮಾರ್ಗದರ್ಶಿ ಪ್ರಕಾರ ಕೊರೋನಾ ರೋಗಿಗಳಿಗೆ ಕ್ಯಾನ್ಸರ್, ಅಸ್ತಮಾ, ಹೃದ್ರೋಗ ಸಂಬಂಧಿತ ಖಾಯಿಲೆಗಳಿದ್ದು ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದರೆ ಅದು ಕೋವಿಡ್ ಸಾವು ಅಲ್ಲ ಎಂದು ತೀರ್ಮಾನಿಸಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಮೃತರ ಕುಟುಂಬಕ್ಕೆ ಪರಿಹಾರ ಕೊಡಬೇಕು.

*ಖಾಸಗಿ ಸಂಸ್ಥೆಗಳಿಂದ ಪಡೆಯಲಾಗಿರುವ ಲಸಿಕೆಗಳ ಸಂಖ್ಯೆ ಮತ್ತು ಸಾರ್ವಜನಿಕರಿಗೆ ನೀಡಲಾಗಿರುವ ಮಾಹಿತಿ ವಿವರ ಸೂಚನೆ ನೀಡಿದ್ದರೂ ಪಿಎಸಿಗೆ ಒದಗಿಸಿಲ್ಲ

*ಲಸಿಕೆ ಸೇವಾ ಶುಲ್ಕ ನಿಗದಿಯಲ್ಲಿ ಇಲಾಖೆಯ ಮಾನದಂಡಗಳಿಂದ ಜನಸಾಮಾನ್ಯರಿಗೆ ಹೆಚ್ಚಿನ ಹೊರೆ.

*ನಿರ್ದಿಷ್ಟ ಸಮಯದಲ್ಲಿ ವ್ಯಾಕ್ಸಿನ್ ಬುಕ್ಕಿಂಗ್ ಪೋರ್ಟಲ್ ತೆರೆಯದೇ ಇದ್ದದ್ದರಿಂದ ತೊಂದರೆ.

*ಬೆಡ್ ಹಂಚಿಕೆ ಕುರಿತಂತೆ ನಡೆದಿದೆಯೆನ್ನಲಾದ ಅಕ್ರಮದ ಕುರಿತು ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಬೇಜವಾಬ್ದಾರಿತನದ ಉತ್ತರ

*ಕೊರೋನಾ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ವೈಫಲ್ಯ ಮತ್ತು ಸಮನ್ವಯದ ಕೊರತೆಯಿಂದ ರೋಗಿಗಳ ಸಾವು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News