ಪ್ರಾದೇಶಿಕ ಪಕ್ಷ ಉಳಿಸಲು ಎಲ್ಲರೂ ಕೈಜೋಡಿಸಿ- ಮಾಜಿ ಪ್ರಧಾನಿ ದೇವೇಗೌಡ

     

Last Updated : Mar 3, 2018, 12:55 PM IST
ಪ್ರಾದೇಶಿಕ ಪಕ್ಷ ಉಳಿಸಲು ಎಲ್ಲರೂ ಕೈಜೋಡಿಸಿ- ಮಾಜಿ ಪ್ರಧಾನಿ ದೇವೇಗೌಡ title=

ಬೆಂಗಳೂರು: ಬಿಜೆಪಿ ಮುಖಂಡ ಕೆ.ಸಿ.ವೆಂಕಟೇಶರನ್ನು  ಜೆಡಿಎಸ್ ಗೆ ಬರಮಾಡಿಕೊಂಡ ನಂತರ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡಲು ಪ್ರಾದೇಶಿಕ ಪಕ್ಷವು ಅವಶ್ಯಕವಾಗಿದ್ದು ಆದ್ದರಿಂದ ಅದನ್ನು ಉಳಿಸಲು ಎಲ್ಲರು ಕೈ ಜೋಡಿಸಬೇಕೆಂದರು.

ರಾಜ್ಯದಲ್ಲಿ ಕಾವೇರಿ ಜೊತೆಗೆ ಹಲವಾರು ಸಮಸ್ಯೆಗಳಿದ್ದು ಇವುಗಳೆಲ್ಲವನ್ನು ಬಗೆಹರಿಸಲು ಕುಮಾರಸ್ವಾಮಿಯವರನ್ನು ಗೆಲ್ಲಿಸಿ ಎಂದು ವಿನಂತಿಸಿಕೊಂಡರು, ಪ್ರಾದೇಶಿಕ ಪಕ್ಷವನ್ನು ಬೆಳೆಸಲು ಇಂತಹ ಇಳಿ ವಯಸ್ಸಿನಲ್ಲಿಯೂ ಕೂಡಾ ಓಡಾಡುತ್ತಿದ್ದೇನೆ ಎಂದು ಅವರು ತಿಳಿಸಿದರು. 

ಇದೆ ಸಂದರ್ಭದಲ್ಲಿ ಸುಮಾರು 50ಕ್ಕೂ ಅಧಿಕ ವಿವಿಧ ಪಕ್ಷಗಳ ಮುಖಂಡರನ್ನು ಜೆಡಿಎಸ್ ಗೆ ಬರಮಾಡಿಕೊಂಡ ಅವರು ಎಲ್ಲರನ್ನು ಮನೆ ಮಕ್ಕಳಂತೆ ನೋಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ದೇವೇಗೌಡ ತಿಳಿಸಿದರು.

Trending News