ಸರ್ಕಾರ ಬೀಳಿಸುವುದು ಕನಸಿನ ಮಾತು; ಬಿಜೆಪಿಗರು ಬೇಕಿದ್ದರೆ ಜೋಗದ ಗುಂಡಿಗೆ ಹಾರಲಿ!

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಕ್ಕೆ ನೆರೆಯ ಮಹಾರಾಷ್ಟ್ರದಲ್ಲಿ ತಂತ್ರಗಾರಿಕೆ ಹೆಣೆಯಲಾಗುತ್ತಿದೆ ಎಂಬ ಸುಳಿವನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗಿದೆ. 

Written by - Puttaraj K Alur | Last Updated : May 13, 2024, 06:03 PM IST
  • ರಾಜ್ಯ ಸರ್ಕಾರವನ್ನು ಬೀಳಿಸಲು ಬಿಜೆಪಿಗರು ಏಕನಾಥ್ ಶಿಂಧೆ ಸಹಕಾರ ಕೊರಿದ್ದಾರಂತೆ
  • ಕಾಂಗ್ರೆಸ್‌ ಸರ್ಕಾರ ಬೀಳಿಸಲು ಬಿಜೆಪಿ ನಡೆಸುತ್ತಿರುವ ʼಆಪರೇಷನ್‌ ನಾಥ್ʼ ವರ್ಕ್‌ ಆಗಲ್ಲ
  • ಬಿಜೆಪಿಗರು ಬೇಕಿದ್ದರೆ ಜೋಗದ ಗುಂಡಿಗೆ ಹಾರಿ ಬದುಕುತ್ತೇವೆ ಎಂದು ಕನಸು ಕಾಣಲಿ
ಸರ್ಕಾರ ಬೀಳಿಸುವುದು ಕನಸಿನ ಮಾತು; ಬಿಜೆಪಿಗರು ಬೇಕಿದ್ದರೆ ಜೋಗದ ಗುಂಡಿಗೆ ಹಾರಲಿ! title=
ʼಆಪರೇಷನ್‌ ನಾಥ್‌ʼ ವರ್ಕ್‌ ಆಗಲ್ಲ!

ಬೆಂಗಳೂರು: ಸರ್ಕಾರ ಬೀಳಿಸಲು ಬಿಜೆಪಿ ನಡೆಸುತ್ತಿರುವ ʼಆಪರೇಷನ್‌ ನಾಥ್ʼ ವರ್ಕ್‌ ಆಗಲ್ಲವೆಂದು ಕರ್ನಾಟಕ ಕಾಂಗ್ರೆಸ್‌ ತಿರುಗೇಟು ನೀಡಿದೆ. ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ʼಮಹಾರಾಷ್ಟ್ರ ಮಾದರಿಯಲ್ಲೇ ಕರ್ನಾಟಕದಲ್ಲಿ ಸರ್ಕಾರ ಬೀಳಿಸಲು ನಿಮ್ಮ ಸಹಕಾರ ಬೇಕು ಎಂದು ಇಲ್ಲಿನ ಬಿಜೆಪಿಗರು ಏಕನಾಥ್ ಶಿಂಧೆಗೆ ಹೇಳಿದ್ದಾರಂತೆ. ಆದರೆ ಇದು ಕನಸಿನ ಮಾತುʼ ಎಂದು ಕುಟುಕಿದೆ.

ʼಕಾಂಗ್ರೆಸ್‌ ಸರ್ಕಾರ ಬೀಳಿಸುತ್ತೇವೆ ಎನ್ನುವುದು ಬಿಜೆಪಿಗರ ಭ್ರಮೆಯಷ್ಟೇ, ಬಿಜೆಪಿಗರು ಬೇಕಿದ್ದರೆ ಜೋಗದ ಗುಂಡಿಗೆ ಹಾರಿ ಬದುಕುತ್ತೇವೆ ಎಂದು ಕನಸು ಕಾಣಲಿ, ನನಸಾಗಬಹುದೇನೋ! ಸರ್ಕಾರ ಬೀಳಿಸುವ ಕನಸು ಕಂಡರೆ ಅದು ವ್ಯರ್ಥ. ಮಾಜಿ ಸಿಎಂ ಜೆ.ಹೆಚ್.ಪಟೇಲರು ಹೇಳಿದ ಹೋರಿ, ನರಿಯ ಕತೆಯನ್ನು ಒಮ್ಮೆ ಬಿಜೆಪಿ ನಾಯಕರು ನೆನಪು ಮಾಡಿಕೊಳ್ಳಲಿ!ʼ ಎಂದು ಕಾಂಗ್ರೆಸ್‌ ಟೀಕಿಸಿದೆ.

ಇದನ್ನೂ ಓದಿಲೋಕಸಭೆ ಫಲಿತಾಂಶ ಬಂದ ನಂತರ ಶಿಂದೆಯೇ ಮಾಜಿ ಆಗುತ್ತಾರೆ - ಎಂ ಬಿ ಪಾಟೀಲ್

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಕ್ಕೆ ನೆರೆಯ ಮಹಾರಾಷ್ಟ್ರದಲ್ಲಿ ತಂತ್ರಗಾರಿಕೆ ಹೆಣೆಯಲಾಗುತ್ತಿದೆ ಎಂಬ ಸುಳಿವನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಿಟ್ಟುಕೊಟ್ಟಿದ್ದಾರೆ. ರಾಜ್ಯದ ಬಿಜೆಪಿ ನಾಯಕರೇ ಸರ್ಕಾರ ಉರುಳಿಸಲು ನೆರವು ಕೋರಿದ್ದಾರೆ ಅಂತಾ ಶಿಂಧೆ ಹೇಳಿದ್ದಾರೆ ಎಂದು ವರದಿಯಾಗಿದೆ. 

ರಾಜ್ಯದ ಅಭಿವೃದ್ಧಿಗೆ ವೇಗ ಸಿಕ್ಕಿದೆ!

ಇಂದಿಗೆ ಒಂದು ವರ್ಷದ ಹಿಂದೆ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದಿತ್ತು. ಬಿಜೆಪಿಯ ದುರಾಡಳಿತದಿಂದ ಬೇಸತ್ತಿದ್ದ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ನೀಡಿ ಹಾರೈಸಿದ್ದರು. ಗ್ಯಾರಂಟಿ ಸರ್ಕಾರಕ್ಕೆ ಜನತೆ ಆಶೀರ್ವದಿಸಿ ಒಂದು ವರ್ಷ ಕಳೆದಿರುವ ಈ ಹೊತ್ತಿನಲ್ಲಿ ನಮ್ಮ ಐದೂ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಕೋಟ್ಯಂತರ ಫಲಾನುಭವಿಗಳ ಬದುಕಿಗೆ ಆಸರೆಯಾಗಿವೆ. ರಾಜ್ಯದ ಅಭಿವೃದ್ಧಿಗೆ ವೇಗ ಸಿಕ್ಕಿದೆ, ಭ್ರಷ್ಟಾಚಾರ ಮುಕ್ತ ಆಡಳಿತ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಮತ್ತೊಂದು ಟ್ವೀಟ್‌ನಲ್ಲಿ ಹೇಳಿಕೊಂಡಿದೆ. 

ಇದನ್ನೂ ಓದಿ: ಲೋಕಸಭೆ ನಂತರ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ:ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News