ಇಂದು ಕೆ.ಸಿ. ರಾಮಮೂರ್ತಿ ಬಿಜೆಪಿ ಸೇರ್ಪಡೆ ಸಾಧ್ಯತೆ

ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕೆ.ಸಿ.‌ ರಾಮಮೂರ್ತಿ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ 2022ರ ಜುಲೈವರೆಗೂ ಇತ್ತು. 

Last Updated : Oct 17, 2019, 05:39 AM IST
ಇಂದು ಕೆ.ಸಿ. ರಾಮಮೂರ್ತಿ ಬಿಜೆಪಿ ಸೇರ್ಪಡೆ ಸಾಧ್ಯತೆ title=

ನವದೆಹಲಿ: ನಿನ್ನೆಯಷ್ಟೇ ತಮ್ಮ‌ ರಾಜ್ಯಸಭಾ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕೆ.ಸಿ. ರಾಮಮೂರ್ತಿ ಇಂದೇ ಬಿಜೆಪಿ ಸೇರುವ ಸಾಧ್ಯತೆ ಇದೆ.

50 ಲಕ್ಷ ರೂ. ಪ್ರವಾಹ‌ ಪರಿಹಾರ ನೀಡಿದ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ

ಬಿಜೆಪಿ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಇಂದು ದೆಹಲಿಯ ಬಿಜೆಪಿ ರಾಷ್ಟ್ರೀಯ ಕಚೇರಿಯಲ್ಲಿ ಕೆ.ಸಿ. ರಾಮಮೂರ್ತಿ ಕೇಸರಿ ಭಾವುಟ ಹಿಡಿಯಲಿದ್ದಾರೆ. ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕೆ.ಸಿ.‌ ರಾಮಮೂರ್ತಿ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ 2022ರ ಜುಲೈವರೆಗೂ ಇತ್ತು. ಆದರೂ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಗೊತ್ತಾಗಿದೆ.

'ಕೈ' ಬಿಟ್ಟು 'ಕಮಲ' ಹಿಡಿಯಲು ಸಜ್ಜಾದ ರಾಜ್ಯಸಭಾ ಸಂಸದ ಕೆ.ಸಿ. ರಾಮಮೂರ್ತಿ

ನಿನ್ನೆ ರಾತ್ರಿಯೇ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದ ಕೆ.ಸಿ. ರಾಮಮೂರ್ತಿ ಪಕ್ಷ ಸೇರ್ಪಡೆ ಕುರಿತು ಸಮಾಲೋಚನೆ ನಡೆಸಿದ್ದಾರೆ. ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Trending News