ಮಂಡ್ಯ ಬಸ್ ದುರಂತ: ಚಾಲಕನ ಬಂಧನ

ಕಳೆದ ನವೆಂಬರ್ 24 ರಂದು ಕನಗನಮರಡಿ ಸಮೀಪದ ವಿಸಿ ನಾಲೆಗೆ ಬಸ್‌ ಬಿದ್ದು 30 ಮಂದಿ ಧಾರುಣ ಸಾವನ್ನಪ್ಪಿದ್ದರು.

Last Updated : Dec 10, 2018, 05:27 PM IST
ಮಂಡ್ಯ ಬಸ್ ದುರಂತ: ಚಾಲಕನ ಬಂಧನ title=
ಸಂಗ್ರಹ ಚಿತ್ರ

ಮಂಡ್ಯ: ಇತ್ತೀಚೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಸಂಭವಿಸಿದ್ದ ಬಸ್ ದುರಂತಕ್ಕೆ ಕಾರಣನಾದ ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 

ಕಳೆದ ನವೆಂಬರ್ 24 ರಂದು ಕನಗನಮರಡಿ ಸಮೀಪದ ವಿಸಿ ನಾಲೆಗೆ ಬಸ್‌ ಬಿದ್ದು 30 ಮಂದಿ ಧಾರುಣ ಸಾವನ್ನಪ್ಪಿದ್ದರು. ಆದರೆ ದುರಂತದ ಬಳಿಕ ಬಸ್ ತಲೆಮರೆಸಿಕೊಂಡಿದ್ದ ಬಸ್‌ ಚಾಲಕ ಶಿವಣ್ಣನನ್ನು ಪಾಂಡವಪುರ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಚಾಲಕನ ಅಜಾಗರೂಕತೆಯಿಂದೆ ದುರಂತ ಸಂಭವಿಸಿದೆ, ಆತನನ್ನು ಕೂಡಲೇ ಬಂಧಿಸಬೇಕೆಂದು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಘಟನೆ ತಲೆಮರೆಸಿಕೊಂಡಿದ್ದ ಚಾಲಕನನ್ನು ಇಂದು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Trending News