Mysuru Kodagu Lokasabha Election Result :ಮೈಸೂರು ಕೊಡಗು ಕ್ಷೇತ್ರದಲ್ಲಿ ಮಹಾರಾಜ ಜಯಭೇರಿ : ದಾಖಲೆ ಅಂತರದಲ್ಲಿ ಗೆಲುವು ದಾಖಲಿಸಿದ ಯದುವೀರ್

Mysuru Kodagu Lokasabha Election Result 2024 :ಈ ಬಾರಿ ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ರಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಣದಲ್ಲಿದ್ದರೆ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ರಿಂದ ಎಂ.ಲಕ್ಷ್ಮಣ್ ಅಭ್ಯರ್ಥಿಯಾಗಿದ್ದಾರೆ.

Written by - Ranjitha R K | Last Updated : Jun 4, 2024, 06:23 PM IST
  • ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮಹಾರಾಜರ ಗೆಲುವು
  • ಕಣದಲ್ಲಿ ಇರುವ ಪ್ರಮುಖರು ಯಾರು ?
  • ಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಚಾರ ಹೇಗೆ ?
Mysuru Kodagu Lokasabha Election Result :ಮೈಸೂರು ಕೊಡಗು ಕ್ಷೇತ್ರದಲ್ಲಿ ಮಹಾರಾಜ ಜಯಭೇರಿ : ದಾಖಲೆ ಅಂತರದಲ್ಲಿ ಗೆಲುವು ದಾಖಲಿಸಿದ ಯದುವೀರ್  title=

Mysuru Kodagu Lokasabha Election Result 2024 :ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ಪಕ್ಷದ ಯದುವೀರ್ ಇತಿಹಾಸ ನಿರ್ಮಿಸಿದ್ದಾರೆ. ಯದುವೀರ್ 1,39,262 ಮತ ಅಂತರ ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಸಂಸದರ ಪೈಕಿ ಅತಿ ಹೆಚ್ಚು ಲೀಡ್ ಪಡೆದ ಅಭ್ಯರ್ಥಿ ಎನ್ನುವ ಹೆಗ್ಗಳಿಕೆಗೆ ಯದುವೀರ್ ಭಾಜನರಾಗಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್ ಸೇರಿ ಐದು ಬಾರಿ ಬಿಜೆಪಿ ಗೆದ್ದಿದೆ.
 
ಈ ಕ್ಷೇತ್ರದಲ್ಲಿ ಎರಡು ಬಾರಿ ಸಿ.ಎಚ್. ವಿಜಯ್‌ಶಂಕರ್, ಎರಡು ಬಾರಿ ಪ್ರತಾಪ್ ಸಿಂಹ ಗೆಲುವು ಸಾಧಿಸಿದ್ದಾರೆ. ಇದೀಗ ಯದುವೀರ್ ಭರ್ಜರಿ ಗೆಲುವು  ಸಾಧಿಸಿದ್ದಾರೆ.ಕಳೆದ ಬಾರಿ ಪ್ರತಾಪ್ ಸಿಂಹ 1,38,647 ಮತಗಳ ಲೀಡ್ ಪಡೆದಿದ್ದರು. ಇದೀಗ ಯದುವೀರ್ 1,39,232 ಮತ ಲೀಡ್ ಪಡೆದು ದಾಖಲೆ ಬರೆದಿದ್ದಾರೆ. 

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಮೊದಲಿನಿಂದಲೂ ಕುತೂಹಲ ಕೆರಳಿಸಿದ್ದ ಕ್ಷೇತ್ರ. ಇಲ್ಲಿ ರಾಜ ಮನೆತನ ಮತ್ತು ಜನ ಸಾಮಾನ್ಯನ ನಡುವೆ ಫೈಟ್ ಎಂದೇ ಬಿಂಬಿತವಾಗಿತ್ತು. ಅಲ್ಲದೆ, 47 ವರ್ಷಗಳ ನಂತರ ಒಕ್ಕಲಿಗ ಸಮುದಾಯಕ್ಕೆ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ಒಕ್ಕಲಿಗರು ಹೆಚ್ಚಾಗಿರುವ ಕ್ಷೇತ್ರವಾಗಿರುವ ಕಾರಣ ಕಾಂಗ್ರೆಸ್ ಒಂದು ಲೆಕ್ಕಾಚಾರದ ಜೊತೆಗೆ ಎಂ. ಲಕ್ಷ್ಮಣ್ ಗೆ ಟಿಕೆಟ್ ನೀಡಿತ್ತು.  

ಇದನ್ನೂ ಓದಿ : ಚಾಮರಾಜನಗರದಲ್ಲಿ ಕಾಂಗ್ರೆಸ್- ಬಿಜೆಪಿ ಜಿದ್ದಾಜಿದ್ದಿ: ಯಾರೇ ಗೆದ್ದರೂ ಮೊದಲ ಬಾರಿ ಸಂಸತ್ ಗೆ ಪ್ರವೇಶ

ಗೆಲುವಿನ ಲೆಕ್ಕಾಚಾರ ಹೇಗೆ ? : 

ಈ ವ್ಯಾಪ್ತಿಯಲ್ಲಿ ಹೆಚ್ಚು ಜನ ಕಾಂಗ್ರೆಸ್‌ ಶಾಸಕರಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಭರ್ಜರಿ ಪ್ರಚಾರ ಮಾಡಿದ್ದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ದಲಿತ, ಮುಸ್ಲಿಂ, ಕುರುಬ ಹಾಗೂ ಇತರ ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್‌ ಕಡೆಗೆ ವಾಲಿದ್ದಾರೆ ಎಂದೇ ಹೇಳಲಾಗಿತ್ತು. ಹಾಗಾಗಿ ಕೈ ಅಭ್ಯರ್ಥಿ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರವೂ ಇತ್ತು. ಆದರೆ, ಮಹಾರಾಜರ ಜನಪ್ರಿಯತೆ ಹಾಗೂ ಮೋದಿ ಅಲೆ ಕಾಂಗ್ರೆ ಸ್ ಗೆ ಹೊಡೆತ ನೀಡಿದೆ. 

ಇದನ್ನೂ ಓದಿ ಸಚಿವ ನಾಗೇಂದ್ರ ರಾಜಿನಾಮೆ ಕೇಳಿಲ್ಲ:ಮುಖ್ಯಮಂತ್ರಿ ಸಿದ್ದರಾಮಯ್ಯ

ಹೀಗಿತ್ತು ಕಳೆದ ಬಾರಿಯ ಫಲಿತಾಂಶ : 

ಕಳೆದ ಬಾರಿ ಅಂದರೆ 2019 ರ ಲೋಕಸಭಾ ಚುನಾವಣೆಯಲ್ಲಿ,ಬಿ ಜೆ ಪಿ ಅಭ್ಯರ್ಥಿ ಪ್ರತಾಪ್ ಸಿಂಹ 6,88,974 ಮತಗಳನ್ನು ಪಡೆದಿದ್ದರು. ಮತ್ತು ಐ ಎನ್ ಸಿ ಯ ವಿಜಯಶಂಕರ್ 5,50,327 ಮತಗಳನ್ನು ಗಳಿಸಿದ್ದರು. ಈ ಚುನಾವಣೆಯಲ್ಲಿ  ಬಿಜೆಪಿಯ ಪ್ರತಾಪ್ ಸಿಂಹ 1,38,647 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News