ನಾಳೆ ಬಿಜೆಪಿ ನಾಯಕರಿಗೆ ಮಹತ್ವದ ದಿನ

ನಾಳೆ ದೆಹಲಿಯಲ್ಲಿ ನಡೆಯಲಿದೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸಭೆ.

Last Updated : Apr 7, 2018, 01:38 PM IST
ನಾಳೆ ಬಿಜೆಪಿ ನಾಯಕರಿಗೆ ಮಹತ್ವದ ದಿನ title=

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭಾನುವಾರ(ಏಪ್ರಿಲ್ 8) ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಇದು ರಾಜ್ಯ ಬಿಜೆಪಿ ನಾಯಕರಿಗೆ ಬಹಳ ಮಹತ್ವದ್ದಾಗಿದೆ.

ದೆಹಲಿಯಲ್ಲಿ ನಾಳೆ ನಡೆಯುವ ಸಂಸದೀಯ ಮಂಡಳಿಯು ರಾಜ್ಯ ನಾಯಕರು ತಯಾರಿಸಿರುವ ಪಟ್ಟಿ ಪರೀಶೀಲಿಸಿ ಅನುಮೋದನೆ ನೀಡಲಿದ್ದು, ಈ ನಿಟ್ಟಿನಲ್ಲಿ ನಾಳೆ ರಾಜ್ಯ ಬಿಜೆಪಿ ನಾಯಕರಿಗೆ ಮಹತ್ವದ ದಿನ ಎಂದು ಹೇಳಬಹುದಾಗಿದೆ.

ಸಂಸದೀಯ ಮಂಡಳಿ ಸಭೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಮತ್ತಿತರ ನಾಯಕರು ಒಂದೇ ವಿಮಾನದಲ್ಲಿ ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಸೋಮವಾರ(ಏಪ್ರಿಲ್ 9) ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Trending News