UPSC Civil Services Result: ಕನ್ನಡದಲ್ಲಿ‌ UPSC ಪರೀಕ್ಷೆ ಬರೆದು ಯಶಸ್ಸು ಕಂಡ PSI ಶಾಂತಪ್ಪ!

ಬೆಂಗಳೂರಿನ ಗೊರಗುಂಟೆ ಪಾಳ್ಯ ಸಿಗ್ನಲ್‌ನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪಿಎಸ್‌ಐ ಶಾಂತಪ್ಪ ಅವರು ಟಾಯ್ಲೆಟ್ ನಿರ್ಮಿಸಿದ್ದರು. ಸ್ವಂತ ಖರ್ಚಿನಲ್ಲಿ ಟಾಯ್ಲೆಟ್ ನಿರ್ಮಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದರು.

Written by - Puttaraj K Alur | Last Updated : Apr 16, 2024, 10:10 PM IST
  • ಸಬ್ ಇನ್ಸ್​ಪೆಕ್ಟರ್​ ಶಾಂತಪ್ಪ‌ ಜಡೇಮ್ಮನವರ್ 644ನೇ ರ‍್ಯಾಂಕ್‌ ಪಡೆದಿದ್ದಾರೆ
  • 2016ರಲ್ಲಿ‌ ಪೊಲೀಸ್ ಇಲಾಖೆಗೆ ನೇಮಕಗೊಂಡ ಶಾಂತಪ್ಪ ಮೂಲತಃ ಬಳ್ಳಾರಿಯವರು
  • ಬಳ್ಳಾರಿ‌ ಮುನಿಸಿಪಾಲ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿದ್ದಾರೆ‌
UPSC Civil Services Result: ಕನ್ನಡದಲ್ಲಿ‌ UPSC ಪರೀಕ್ಷೆ ಬರೆದು ಯಶಸ್ಸು ಕಂಡ PSI ಶಾಂತಪ್ಪ!  title=
644ನೇ ರ‍್ಯಾಂಕ್‌ ಪಡೆದ ಶಾಂತಪ್ಪ

UPSC Civil Services Result 2023 declared: ಕನ್ನಡದಲ್ಲಿ‌ ಯುಪಿಎಸ್‌ಸಿ ಪರೀಕ್ಷೆ ಬರೆದು ಪಿಎಸ್ಐ ಶಾಂತಪ್ಪ ಜಡೇಮ್ಮನವರ್ ಯಶಸ್ಸು ಸಾಧಿಸಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಆಗಿರುವ ಶಾಂತಪ್ಪ‌ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 644ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

2016ರಲ್ಲಿ ಶಾಂತಪ್ಪ ಅವರು‌ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದರು. ಮೂಲತಃ ಗಣಿನಾಡು ಬಳ್ಳಾರಿಯವರಾಗಿರುವ ಶಾಂತಪ್ಪ ಅವರು ಅಲ್ಲಿನ ಮುನಿಸಿಪಾಲ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಅಧ್ಯಯನ ನಡೆಸಿದ್ದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿಯಾಗಲು ಸಿದ್ಧವಾಗಿರುವ ಶಾಂತಪ್ಪನವರ ಈ ಸಾಧನೆಗೆ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ರ‍್ಯಾಂಕ್‌

ಇದನ್ನೂ ಓದಿ: Government Job: ಮಾರ್ಷಲ್‌ ಆರ್ಟ್ಸ್ ಅಭ್ಯಾಸ ಮಾಡುವವರಿಗೆ ಸರ್ಕಾರಿ ಉದ್ಯೋಗಗಳು ಸುಲಭವಾಗಿ ಸಿಗಲಿದೆ!

ಸ್ವಂತ ಖರ್ಚಿನಲ್ಲಿ ಟಾಯ್ಲೆಟ್ ನಿರ್ಮಾಣ

ಬೆಂಗಳೂರಿನ ಗೊರಗುಂಟೆ ಪಾಳ್ಯ ಸಿಗ್ನಲ್‌ನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪಿಎಸ್‌ಐ ಶಾಂತಪ್ಪ ಅವರು ಟಾಯ್ಲೆಟ್ ನಿರ್ಮಿಸಿದ್ದರು. ಸ್ವಂತ ಖರ್ಚಿನಲ್ಲಿ ಟಾಯ್ಲೆಟ್ ನಿರ್ಮಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದರು. ಐಎಎಸ್ ಕನಸು ಹೊತ್ತು ಅವರು ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಆದರೆ 664 ರ್ಯಾಂಕ್ ಸಿಕ್ಕಿದ್ದರಿಂದ ಐಪಿಎಸ್ ಅಥವಾ ಐಆರ್‌ಎಸ್‌ ಹುದ್ದೆ ಸಿಗುವ ಸಾಧ್ಯತೆ ಇದೆ. ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಯಶಸ್ಸು ಕಂಡಿರುವ ಶಾಂತಪ್ಪನವರ ಸಾಧನೆಗೆ ಶುಭಾಶಯಗಳ ಮಾಹಾಪೂರವೇ ಹರಿದುಬರುತ್ತಿದೆ. 

ಆರಂಭ ಶೂರತ್ವ ಇರಬಾರದು!

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ಅಭ್ಯರ್ಥಿಗಳಿಗೆ ಆರಂಭ ಶೂರತ್ವ ಇರಬಾರದು. ಸಾಧನೆ ಮಾಡಬೇಕೆಂಬ ತುಡಿತ ಇರಬೇಕು. ಮನಸ್ಸಿನಂತೆ ಮಹಾದೇವ ಅನ್ನುವಂತೆ ನಾವ ಅಂದುಕೊಂಡಿದ್ದನ್ನು ಸಾಧಿಸುವ ಛಲ, ಉತ್ಸಾಹ ಇರಬೇಕು. ಸತತ ಪರಿಶ್ರಮ ಮತ್ತು ದೃಢ ಮನಸ್ಸಿನಿಂದ ಸಾಮಾನ್ಯ ವ್ಯಕ್ತಿಯೂ ದೊಡ್ಡ ಸಾಧನೆ ಮಾಡಬಹುದು ಅಂತಾ ಶಾಂತಪ್ಪ ಅವರು ಸ್ಪರ್ಧಾಕಾಂಕ್ಷಿಗಳಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Loksabha Election : ಗುಜರಾತ್ ನಲ್ಲಿ ಎಎಪಿ ಪರ ಪ್ರಚಾರ : ಕೇಜ್ರಿವಾಲ್ ಪತ್ನಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News