ಬಿಜೆಪಿ ನಾಯಕರಾರೂ ಅತೃಪ್ತರ ಭೇಟಿಗೆ ಮುಂಬೈಗೆ ಹೋಗುತ್ತಿಲ್ಲ: ಬಿ.ವೈ.ವಿಜಯೇಂದ್ರ

ಬಿಜೆಪಿ ನಾಯಕರಾರೂ ಮುಂಬೈ ಹೋಟೆಲ್ ನಲ್ಲಿ ತಂಗಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಲು ಹೋಗುತ್ತಿಲ್ಲ. ಅದೆಲ್ಲಾ ಕೇವಲ ವದಂತಿಯಷ್ಟೇ ಎಂದು ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. 

Last Updated : Jul 10, 2019, 02:45 PM IST
ಬಿಜೆಪಿ ನಾಯಕರಾರೂ ಅತೃಪ್ತರ ಭೇಟಿಗೆ ಮುಂಬೈಗೆ ಹೋಗುತ್ತಿಲ್ಲ: ಬಿ.ವೈ.ವಿಜಯೇಂದ್ರ title=
Pic Courtesy: ANI

ಬೆಂಗಳೂರು: ಬಿಜೆಪಿ ನಾಯಕರಾರೂ ಮುಂಬೈ ಹೋಟೆಲ್ ನಲ್ಲಿ ತಂಗಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಲು ಹೋಗುತ್ತಿಲ್ಲ. ಅದೆಲ್ಲಾ ಕೇವಲ ವದಂತಿಯಷ್ಟೇ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. 

ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯದಲ್ಲಿ ಹುಲಿಗಳಂತೆ ಆರ್ಭಟ ನಡೆಸುತ್ತಿದ್ದವರು ಇದೀಗ ಮುಂಬೈನಲ್ಲಿ ಬಯಲಾಟ ಆಡುತ್ತಿದ್ದಾರೆ. ಪಕ್ಷದಲ್ಲಿನ, ಸರ್ಕಾರದಲ್ಲಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳುವ ಬದಲು ಮುಂಬೈಗೆ ಹೋಗಿ ಬೀದಿರಂಪ ಮಾಡುತ್ತಿರುವುದು ಖಂಡಿತಾ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ, ಮುಂಬೈ ಹೋಟೆಲ್ ಪ್ರವೇಶಕ್ಕೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗೆ ನಿರಾಕರಿಸಿದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅವರದ್ದೇ ಪಕ್ಷದ ಶಾಸಕರನ್ನು ಹೋಗಿ ಭೇಟಿ ಮಾಡಲು ನಮ್ಮ ಅಭ್ಯಂತರ ಏನೂ ಇಲ್ಲ. ಬಹುಶಃ ಅತೃಪ್ತ ಶಾಸಕರಿಗೆ ಡಿಕೆಶಿ ಭೇಟಿ ಮಾಡಲು ಇಷ್ಟವಿಲ್ಲದ ಕಾರಣ ಪೋಲಿಸ್ ಸೆಕ್ಯೂರಿಟಿ ಪಡೆದಿರಬಹುದು. ಇದರಲ್ಲಿ ಬಿಜೆಪಿ ಪಾತ್ರ ಇನ್ನೂ ಇಲ್ಲ ಎಂದು ಅವರು ಹೇಳಿದ್ದಾರೆ.

Trending News