ಬಿಳಿಕೂದಲನ್ನು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿಸುತ್ತೆ ಈ ಬಳ್ಳಿಯ ಎಲೆ… ಅರೆದು ಹಚ್ಚಿದರೆ ಸಾಕು

Amruthaballi leaf Benefits: ಕೂದಲು ಸಿಕ್ಕುಗಳಿಂದ ತುಂಬಿದ್ದರೆ ಅಮೃತಬಳ್ಳಿಯನ್ನು ಅರೆದು ಹಚ್ಚಿ, ಇದು ಕೂದಲಿಗೆ ಮೃದುತ್ವವನ್ನು ನೀಡಿ, ರಕ್ಷಿಸುತ್ತದೆ.  ಹಾನಿಗೊಳಗಾದ ಕೂದಲಿನ ಕಿರುಚೀಲಗಳ ಹಿಂದಿನ ಮುಖ್ಯ ಕಾರಣವೆಂದರೆ ಸ್ವತಂತ್ರ ರಾಡಿಕಲ್ಗಳು

Written by - Bhavishya Shetty | Last Updated : Jan 2, 2024, 08:59 PM IST
    • ಅಮೃತಬಳ್ಳಿ ಹಲವು ವರ್ಷಗಳಿಂದ ಆಯುರ್ವೇದದ ಅವಿಭಾಜ್ಯ ಅಂಗವಾಗಿದೆ
    • ಕೂದಲು ಸಿಕ್ಕುಗಳಿಂದ ತುಂಬಿದ್ದರೆ ಅಮೃತಬಳ್ಳಿಯನ್ನು ಅರೆದು ಹಚ್ಚಿ
    • ಕೂದಲನ್ನು ಆರೋಗ್ಯಕರವಾಗಿಡಲು ಸ್ವತಂತ್ರ ರಾಡಿಕಲ್‌’ಗಳ ಕ್ರಿಯೆಯ ವಿರುದ್ಧ ಹೋರಾಡುತ್ತದೆ.
ಬಿಳಿಕೂದಲನ್ನು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿಸುತ್ತೆ ಈ ಬಳ್ಳಿಯ ಎಲೆ… ಅರೆದು ಹಚ್ಚಿದರೆ ಸಾಕು title=
Amruthaballi home remedy for white hair

Amruthaballi leaf Benefits: ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಗಿಲೋಯ್ ಅಥವಾ ಅಮೃತಬಳ್ಳಿ ಹಲವು ವರ್ಷಗಳಿಂದ ಆಯುರ್ವೇದದ ಅವಿಭಾಜ್ಯ ಅಂಗವಾಗಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುವುದಲ್ಲದೆ, ಕೂದಲಿಗೂ ಇದು ಅದ್ಭುತ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ: ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಇರೋದು ಈ ಸ್ಪರ್ಧಿಗೆ ಮಾತ್ರ!

ಕೂದಲು ಸಿಕ್ಕುಗಳಿಂದ ತುಂಬಿದ್ದರೆ ಅಮೃತಬಳ್ಳಿಯನ್ನು ಅರೆದು ಹಚ್ಚಿ, ಇದು ಕೂದಲಿಗೆ ಮೃದುತ್ವವನ್ನು ನೀಡಿ, ರಕ್ಷಿಸುತ್ತದೆ.  ಹಾನಿಗೊಳಗಾದ ಕೂದಲಿನ ಕಿರುಚೀಲಗಳ ಹಿಂದಿನ ಮುಖ್ಯ ಕಾರಣವೆಂದರೆ ಸ್ವತಂತ್ರ ರಾಡಿಕಲ್ಗಳು. ಅಮೃತಬಳ್ಳಿಯು ಕೂದಲನ್ನು ಆರೋಗ್ಯಕರವಾಗಿಡಲು ಸ್ವತಂತ್ರ ರಾಡಿಕಲ್‌’ಗಳ ಕ್ರಿಯೆಯ ವಿರುದ್ಧ ಹೋರಾಡುತ್ತದೆ.

ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯಿಂದ ಪರಿಹಾರವನ್ನು ಸಹ ಅಮೃತಬಳ್ಳಿ ನೀಡುತ್ತದೆ. ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಧೂಳು ಮತ್ತು ಕೊಳೆಯಿಂದಾಗಿ ನೆತ್ತಿ ಮತ್ತು ಕೂದಲಿಗೆ ಹಾನಿಯಾಗುವ ಅಪಾಯವಿದೆ. ಇಂತಹ ಸಮಸ್ಯೆಗಳಿಗೆ ಅಮೃತಬಳ್ಳಿಯ ಎಣ್ಣೆ ಡಿಟಾಕ್ಸಿಫೈಯರ್ ಆಗಿ ಕಾರ್ಯನಿರ್ವಹಿಸುತ್ತದೆ.

ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಪೋಷಕಾಂಶಗಳು ಬೇಕೇ ಬೇಕು. ಅಮೃತಬಳ್ಳಿಯಲ್ಲಿ 18% ತೇವಾಂಶ ಇರುತ್ತದೆ, ಇದು ನಿಮ್ಮ ಕೂದಲನ್ನು ಪೋಷಿಸಲು ಸಹಾಯ ಮಾಡುತ್ತದೆ.

ಇನ್ನು ಈ ಬಳ್ಳಿಯ ಎಲೆಯನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಚೆನ್ನಾಗಿ ಅರೆದು ಕೂದಲಿಗೆ ನಿಯಮಿತವಾಗಿ ಹಚ್ಚಿದರೆ ಬಿಳಿಕೂದಲು ಸಂಪೂರ್ಣವಾಗಿ ಕಪ್ಪಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಅಷ್ಟೊಂದು ಸಣ್ಣಗಿರುವ ಸಂಗೀತಾ ಶೃಂಗೇರಿ ದೇಹದ ತೂಕ ಎಷ್ಟು ಗೊತ್ತಾ? ಅವರೇ ಬಿಚ್ಚಿಟ್ಟ ಸತ್ಯವಿದು…

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News