Astro Tips: ಮಲಗುವ ಮುನ್ನ ಈ ತರಕಾರಿಗಳನ್ನು ಹೀಗೆ ಬಳಸಿದರೆ ವಜ್ರದಂತೆ ಹೊಳೆಯುವುದು ಅದೃಷ್ಟ!

Lemon and Chili Astro Tips: ಜೀವನವನ್ನು ಸಂತೋಷದಿಂದ ಮುನ್ನಡೆಸಲು, ಮನೆ ಅಥವಾ ಅಂಗಡಿಯ ಮುಖ್ಯ ಬಾಗಿಲಿಗೆ ಕಪ್ಪು ದಾರದ ಸಹಾಯದಿಂದ ನಿಂಬೆ-ಮೆಣಸಿನಕಾಯಿಯನ್ನು ನೇತು ಹಾಕುವುದು ಒಳ್ಳೆಯದು. ಹೀಗೆ ಮಾಡಿದರೆ ಆರ್ಥಿಕತೆ ಹೆಚ್ಚಾಗುವುದಲ್ಲದೆ, ವ್ಯಕ್ತಿಗೆ ಉತ್ತಮ ನಿದ್ದೆ ಪ್ರಾಪ್ತಿಯಾಗುತ್ತದೆ. ಇದಲ್ಲದೆ, ನಿಂಬೆ ಮತ್ತು ಮೆಣಸಿನಕಾಯಿಗೆ ಸಂಬಂಧಿಸಿದ ಕೆಲವು ಟಿಪ್ಸ್’ಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

Written by - Bhavishya Shetty | Last Updated : Apr 17, 2023, 07:46 PM IST
    • ಮನೆ ಅಥವಾ ಅಂಗಡಿಯ ಮುಖ್ಯ ಬಾಗಿಲಿಗೆ ಕಪ್ಪು ದಾರದ ಸಹಾಯದಿಂದ ನಿಂಬೆ-ಮೆಣಸಿನಕಾಯಿಯನ್ನು ನೇತು ಹಾಕಿ
    • ಹೀಗೆ ಮಾಡಿದರೆ ಆರ್ಥಿಕತೆ ಹೆಚ್ಚಾಗುವುದಲ್ಲದೆ, ವ್ಯಕ್ತಿಗೆ ಉತ್ತಮ ನಿದ್ದೆ ಪ್ರಾಪ್ತಿಯಾಗುತ್ತದೆ
    • ನಿಂಬೆ ಮತ್ತು ಮೆಣಸಿನಕಾಯಿಗೆ ಸಂಬಂಧಿಸಿದ ಕೆಲವು ಟಿಪ್ಸ್’ಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
Astro Tips: ಮಲಗುವ ಮುನ್ನ ಈ ತರಕಾರಿಗಳನ್ನು ಹೀಗೆ ಬಳಸಿದರೆ ವಜ್ರದಂತೆ ಹೊಳೆಯುವುದು ಅದೃಷ್ಟ!  title=
Astro Tips

Lemon and Chili Astro Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನವನ್ನು ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ಮುನ್ನಡೆಸಲು ಬಯಸುತ್ತಾನೆ. ಇದಕ್ಕಾಗಿ ಹಲವು ರೀತಿಯ ತಂತ್ರಗಳನ್ನು ಸಹ ಮಾಡುತ್ತಾರೆ. ದೇವರ ಪೂಜೆಯಲ್ಲಿಯೂ ಸಹ ಈ ವಿಚಾರಕ್ಕೆ ಅನುಸಾರವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಅನೇಕ ಬಾರಿ ಒಬ್ಬ ವ್ಯಕ್ತಿಗೆ ಅನೇಕ ಚಿಂತೆಗಳ ಕಾರಣದಿಂದ ಚೆನ್ನಾಗಿ ನಿದ್ದೆ ಮಾಡಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ವಾಸ್ತು ಟಿಪ್ಸ್’ಗಳನ್ನು ಇಲ್ಲಿ ಹೇಳಲಿದ್ದೇವೆ.

ಇದನ್ನೂ ಓದಿ: Healthy Drink: ಬೇಸಿಗೆಯಲ್ಲಿ ಪ್ರತಿದಿನ ನಿಂಬೆ ನೀರು ಕುಡಿಯುವುದರ ಲಾಭ ತಿಳಿದರೆ ಶಾಕ್‌ ಆಗ್ತೀರಾ!

ಜೀವನವನ್ನು ಸಂತೋಷದಿಂದ ಮುನ್ನಡೆಸಲು, ಮನೆ ಅಥವಾ ಅಂಗಡಿಯ ಮುಖ್ಯ ಬಾಗಿಲಿಗೆ ಕಪ್ಪು ದಾರದ ಸಹಾಯದಿಂದ ನಿಂಬೆ-ಮೆಣಸಿನಕಾಯಿಯನ್ನು ನೇತು ಹಾಕುವುದು ಒಳ್ಳೆಯದು. ಹೀಗೆ ಮಾಡಿದರೆ ಆರ್ಥಿಕತೆ ಹೆಚ್ಚಾಗುವುದಲ್ಲದೆ, ವ್ಯಕ್ತಿಗೆ ಉತ್ತಮ ನಿದ್ದೆ ಪ್ರಾಪ್ತಿಯಾಗುತ್ತದೆ. ಇದಲ್ಲದೆ, ನಿಂಬೆ ಮತ್ತು ಮೆಣಸಿನಕಾಯಿಗೆ ಸಂಬಂಧಿಸಿದ ಕೆಲವು ಟಿಪ್ಸ್’ಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಿದ್ರೆ ಚೆನ್ನಾಗಿ ಬಂದರೆ ವ್ಯಕ್ತಿಯ ಅದೃಷ್ಟ ಬೆಳಗುತ್ತದೆಯಂತೆ. ಹೀಗಿರುವಾಗ ಉತ್ತಮ ನಿದ್ದೆ ಮಾಡಲು ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ತಲೆಯಿಂದ ಕಾಲಿನವರೆಗೆ 7 ಬಾರಿ ಪ್ರದಕ್ಷಿಣಾಕಾರವಾಗಿ ತಿರುಗಿಸಿ. ಬಳಿಕ ಅದನ್ನು ಎರಡು ತುಂಡುಗಳಾಗಿ ಕತ್ತರಿಸಿ, ವಿವಿಧ ದಿಕ್ಕುಗಳಿಗೆ ಎಸೆಯಿರಿ. ಹೀಗೆ ಮಾಡಿದರೆ ಒಳಿತಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದರೆ ದಿನದ 12 ಗಂಟೆಯ ಮೊದಲು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ ಅಡ್ಡದಾರಿಯಲ್ಲಿ ಎಸೆಯಬೇಕು. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣದ ನಾಲ್ಕು ದಿಕ್ಕುಗಳಲ್ಲಿ ಎಸೆಯಿರಿ. ಈ ಪರಿಹಾರದಿಂದ ವ್ಯಕ್ತಿಯು ಶೀಘ್ರದಲ್ಲೇ ಉದ್ಯೋಗ ಪಡೆಯುತ್ತಾನೆ.

ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಬಯಸಿದರೆ, ನಿಂಬೆಯನ್ನು ಕತ್ತರಿಸಿ ಅದರೊಳಗೆ 4 ಲವಂಗವನ್ನು ಇಡಬೇಕು. ಈ ಬಳಿಕ  ಓಂ ಶ್ರೀ ಹನುಮತೇ ನಮಃ ಎಂಬ ಮಂತ್ರವನ್ನು ಜಪಿಸಿ. ಈ ತಂತ್ರದ ಸಹಾಯದಿಂದ ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಸಾಧಿಸುತ್ತಾನೆ.

ಈ ವಿಷಯಗಳನ್ನು ನೆನಪಿನಲ್ಲಿಡಿ:

ರಸ್ತೆಯಲ್ಲಿ ನಿಂಬೆ ತುಂಡುಗಳು ಅಥವಾ ನಿಂಬೆಹಣ್ಣುಗಳು ಬಿದ್ದಿರುವುದು ಕಂಡರೆ, ತಪ್ಪಾಗಿಯೂ ಅವುಗಳನ್ನು ದಾಟಬೇಡಿ. ಅವುಗಳು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮಗಳು ಬೀರುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು ಕಾಡಬಹುದು.  

ಇದನ್ನೂ ಓದಿ:  Health Tips: ದಿನಕ್ಕೆ 10 ಸಾವಿರ ಹೆಜ್ಜೆ ನಡೆದರೆ ಏನಾಗುತ್ತೆ ಗೊತ್ತಾ?

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News