PM Kisan: ರೈತ ಬಾಂಧವರೆ.. ಸರ್ಕಾರದಿಂದ ನೇರ ಆರ್ಥಿಕ ಸಹಾಯ ಪಡೆಯಬೇಕೆ? ಇಲ್ಲಿ ಹೆಸರು ನೊಂದಾಯಿಸಿ

PM Kisan Update:ರೈತರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸಂಗತಿ ನಿಮಗೆ ತಿಳಿದೇ ಇದೆ. ಇದರೊಂದಿಗೆ ಸರ್ಕಾರ ರೈತರ ನೆರವಿಗೆ ಇನ್ನೂ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಉದ್ದೇಶ ಸರ್ಕಾರದ ಪರವಾಗಿ ರೈತರ ಕಲ್ಯಾಣವೇ ಆಗಿದೆ 
 

PM Kisan Update:ರೈತರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸಂಗತಿ ನಿಮಗೆ ತಿಳಿದೇ ಇದೆ. ಇದರೊಂದಿಗೆ ಸರ್ಕಾರ ರೈತರ ನೆರವಿಗೆ ಇನ್ನೂ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಉದ್ದೇಶ ಸರ್ಕಾರದ ಪರವಾಗಿ ರೈತರ ಕಲ್ಯಾಣವೇ ಆಗಿದೆ 

 

ಇದನ್ನೂ ಓದಿ-Aadhaar Card ಇರುವವರಿಗೆ ಮೋದಿ ಸರ್ಕಾರದಿಂದ 4,78,000 ರೂ. ಸಾಲ! ನಿಜಾನಾ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. Kisan Scheme: ರೈತರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸಂಗತಿ ನಿಮಗೆ ತಿಳಿದೇ ಇದೆ. ಇದರೊಂದಿಗೆ ಸರ್ಕಾರ ರೈತರ ನೆರವಿಗೆ ಇನ್ನೂ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಉದ್ದೇಶ ಸರ್ಕಾರದ ಪರವಾಗಿ ರೈತರ ಕಲ್ಯಾಣವೇ ಆಗಿದೆ  ಇದೇ ವೇಳೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಸಹ ಸರ್ಕಾರದಿಂದ ನಿರ್ವಹಿಸಲ್ಪಡುತ್ತದೆ. ಈ ಯೋಜನೆಯಲ್ಲಿ ಇಡೀ ವರ್ಷ ರೈತರಿಗೆ ಸರ್ಕಾರದಿಂದ 6000 ರೂ.ಧನಸಹಾಯ ಸಿಗುತ್ತದೆ. ಇನ್ನೂ ಅನೇಕ ರೈತರು ಸರ್ಕಾರದ ಈ ಯೋಜನೆಯಿಂದ ವಂಚಿತರಾಗಿದ್ದಾರೆ.  

2 /5

2. ಪ್ರತಿಯೊಬ್ಬ ಅರ್ಹ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನವನ್ನು ಪಡೆಯಬೇಕು ಎಂದು ಸರ್ಕಾರ ಬಯಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ರೈತರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ನೋಂದಾಯಿಸಿಕೊಳ್ಳಬಹುದು ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನೂ ಪಡೆಯಬಹುದು.  

3 /5

3. PM-KISAN ಒಂದು ಪ್ರಮುಖ ಕೇಂದ್ರ ಯೋಜನೆಯಾಗಿದ್ದು, ಇದನ್ನು ಅರ್ಹ ರೈತ ಕುಟುಂಬಗಳಿಗಾಗಿ 2019 ರಲ್ಲಿ ಪ್ರಾರಂಭಿಸಲಾಗಿದೆ. ಅರ್ಹ ರೈತ ಕುಟುಂಬಗಳಿಗೆ ತಲಾ 2000 ರೂಪಾಯಿಯಂತೆ ಮೂರು ಸಮನಾದ ಕಂತುಗಳಲ್ಲಿ ವರ್ಷಕ್ಕೆ 6000 ರೂಪಾಯಿ ಪಾವತಿಸಲು ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮತ್ತೊಂದೆಡೆ, ಹೊಸ ರೈತರು ಈ ಯೋಜನೆಗೆ ಸೇರಲು ಬಯಸಿದರೆ, ಅವರು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ.  

4 /5

4. ಮೊದಲಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅವರ ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಹೋಗಿ. ಬಳಿಕ ಫಾರ್ಮರ್ಸ್ ಕಾರ್ನರ್ ನಲ್ಲಿ ಹೊಸ ರೈತ ನೋಂದಣಿ ಮೇಲೆ ಕ್ಲಿಕ್ ಮಾಡಿ. ಈಗ ಗ್ರಾಮೀಣ ರೈತ ನೋಂದಣಿ ಅಥವಾ ನಗರ ರೈತ ನೋಂದಣಿ ಆಯ್ಕೆಯನ್ನು ಆರಿಸುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ರಾಜ್ಯವನ್ನು ಆಯ್ಕೆಮಾಡಿ. ಇದರ ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಒಟಿಪಿ ಪಡೆಯಿರಿ ಕ್ಲಿಕ್ ಮಾಡಿ. - ಈಗ OTP ಅನ್ನು ನಮೂದಿಸುವ ಮೂಲಕ ಮುಂದುವರಿಯಿರಿ - ಇದರ ನಂತರ ನಿಮ್ಮ ರಾಜ್ಯ, ಜಿಲ್ಲೆ, ಬ್ಯಾಂಕ್ ವಿವರಗಳು ಮತ್ತು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.  

5 /5

5. ಆಧಾರ್ ಕಾರ್ಡ್ ಪ್ರಕಾರ ನಿಮ್ಮ ಹೆಚ್ಚಿನ ವಿವರಗಳನ್ನು ಭರ್ತಿ ಮಾಡಿ. ಇದಾದ ನಂತರ ಈಗ Submit For Aadhaar Authentication ಮೇಲೆ ಕ್ಲಿಕ್ ಮಾಡಿ. - ನಿಮ್ಮ ಆಧಾರ್ ದೃಢೀಕರಣ ಪೂರ್ಣಗೊಂಡಾಗ, ನಿಮ್ಮ ಜಮೀನಿನ ಬಗ್ಗೆ ಮಾಹಿತಿಯನ್ನು ನೀಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸೇವ್ ಕ್ಲಿಕ್ ಮಾಡಿ. ಇದರ ನಂತರ ಒಂದು ಸಂದೇಶವು ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ. ಇದರಲ್ಲಿ ದೃಢೀಕರಣ ಮತ್ತು ತಿರಸ್ಕೃತದ ಬಗ್ಗೆ ಮಾಹಿತಿಯನ್ನು ನೀಡಲಾಗುವುದು.